ಬಡವರ ಅನ್ನ ಭಾಗ್ಯ ಕಾಳಸಂತೆಯಲ್ಲಿ ಮಾರಾಟ!

ರಣಬೇಟೆ ನ್ಯೂಸ್‌ ಗಂಗಾವತಿ.

ಪಡಿತರ ಅಕ್ಕಿ ಮಾಫಿಯ ಕಡಿವಾಣ ಯಾವಾಗ ಆಹಾರ ಇಲಾಖೆಯ ಉಪನಿರ್ದೇಶಕರೇ?

ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಮತ್ತೆ ಪಡಿತರ ದಂಧೆಕೋರರ ಹಾವಳಿ ಹೆಚ್ಚಾಗಿದ್ದು, ಯಾರ ಭಯವೂ ಇಲ್ಲದೇ ರಾಜರೋಷವಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆಯೇ ಪಡಿತರ ಅಕ್ಕಿ ಕೊಂಡುಕೊಳ್ಳುವ ವ್ಯವಹಾರ ನಡೆಯುತ್ತಿದೆ. ಇವೆಲ್ಲ ಗೊತ್ತಿದ್ರೂ ಕೂಡ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಆಹಾರ ನಿರೀಕ್ಷಕರು ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಭಯವೂ ಇಲ್ಲದೇ ರಾಜರೋಷವಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆಯೇ ಕೊಂಡುಕೊಳ್ಳುವ ವ್ಯವಹಾರ ನಡೆಯುತ್ತಿದೆ.

ಇವೆಲ್ಲ ಗೊತ್ತಿದ್ರೂ ಕೂಡ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಆಹಾರ ನಿರೀಕ್ಷಕರು ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಈ ದಂಧೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಕರ್ನಾಟಕ ಜನಸೈನ್ಯ ಕೊಪ್ಪಳ ಜಿಲ್ಲಾಧ್ಯಕ್ಷ ರಮೇಶ ಕಾಳಿ ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಕದ್ದುಮುಚ್ಚಿ ಪಡಿತರ ಅಕ್ಕಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ದಂಧೆಕೋರರು ಈಗ ಬಹಿರಂಗವಾಗಿಯೇ ಅಕ್ಕಿ ದಂಧೆಯನ್ನು ಮಾಡುತ್ತಿದ್ದಾರೆ. ಯಾರಾದರೂ ಸಾಮಾಜಿಕ ಹೋರಾಟಗಾರರು, ಸಂಘಟನೆ ಮುಖಂಡರು ಅಕ್ಕಿ ಕಳ್ಳರನ್ನು ಹಿಡಿದು ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದಾಗ ಮಾತ್ರ ಅಕ್ಕಿ ಕಳ್ಳರನ್ನು ತಾವೇ ಹಿಡಿದಂತೆ ಫೋಸು ನೀಡಿ ಫೋಟೋ ತೆಗೆಸಿಕೊಂಡು ಹೋಗುವ ಅಧಿಕಾರಿಗಳು ನಂತರ ಮುಂದಿನ ಕ್ರಮಕೈಗೊಂಡು ಪ್ರಕರಣ ದಾಖಲಿಸಿದ ಉದಾಹರಣೆಗಳಿಲ್ಲ. ಅಧಿಕಾರಿಗಳ ಈ ನಡೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ತಾಲೂಕಿನಾದ್ಯಂತ ಒಟ್ಟು 134 ನ್ಯಾಯಬೆಲೆ ಅಂಗಡಿಗಳಿದ್ದು, ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಅಕ್ಕಿ ವಿತರಿಸುವಾಗ ಅಂಗಡಿಗಳ ಮುಂದೆ ಜಮಾಯಿಸುವ ದಂಧೆಕೋರರು ಅಲ್ಲಿಯೇ ಪಡಿತರ ಅಕ್ಕಿ ಸಂಗ್ರಹಿಸಿ ದ್ವಿಚಕ್ರ ವಾಹನಗಳಲ್ಲಿ ಒಂದೆಡೆ ಸಂಗ್ರಹಿಸಿ ಬೇರೆಡೆಗೆ ಸಾಗಾಟ ಮಾಡುತ್ತಾರೆ.

ಈ ದಂಧೆಯಲ್ಲಿ ಕೆಲ ನ್ಯಾಯಬೆಲೆ ಅಂಗಡಿ ಮಾಲಕರೂ ಕೂಡ ಶಾಮೀಲಾಗಿದ್ದು ಪಡಿತರ ಚೀಟಿದಾರರಿಂದ ಬೆರಳಚ್ಚು ಪಡೆದು ಅವರಿಗೆ ನೇರವಾಗಿ ಹಣಪಾವತಿಸಿ ಕಳುಹಿಸುತ್ತಾರೆ. ನಂತರ ಆ ಅಕ್ಕಿಯನ್ನು ನೇರವಾಗಿ ದಂಧೆಕೋರರಿಗೆ ನೀಡುತ್ತಾರೆ. ಇದು ಸುವ್ಯವಸ್ಥಿತವಾಗಿ ನಡೆಯುತ್ತಿದ್ದು ಅಕ್ಕಿ ದಂಧೆಕೋರರ ಜಾಲ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಹಿಂದೆ 5 ಕೆ.ಜಿ. ಅಕ್ಕಿ ನೀಡುವಾಗ ಕಡಿಮೆ ಇದ್ದ ದಂಧೆಕೋರರ ಹಾವಳಿ 10 ಕೆ.ಜಿ.ಯ ನಂತರ ಹೆಚ್ಚಾಗಿದೆ.

ಕೆಲವು ಮಂಡಾಳ ಬಟ್ಟಿಗಳ ಮಾಲೀಕರು ಹೊಟ್ಟೆಪಾಡಿಗಾಗಿ 10-20 ಕೆ.ಜಿ. ಅಕ್ಕಿಗಳನ್ನು ಖರೀದಿಸಿ ಒಯ್ಯುತ್ತಿದ್ದಾರೆ. ಅಂತಹವರನ್ನು ಹಿಡಿದು ಪ್ರಕರಣ ದಾಖಲಿಸಿ ಹಣ ವಸೂಲಿ ಮಾಡುವ ಆಹಾರ ಇಲಾಖೆಯ ಅಧಿಕಾರಿಗಳು ಗಂಗಾವತಿ ನಗರದ ಮಹೆಬೂಬ ನಗರ, ಶರಣಬಸವೇಶ್ವರ ಕ್ಯಾಂಪ್, ವಡ್ಡರಹಟ್ಟಿ, ಲಿಂಗರಾಜ್‍ಕ್ಯಾಂಪ್, ಕಿಲ್ಲಾ ಏರಿಯಾ, ಉಪ್ಪಿನಮಾಳಿ ಕ್ಯಾಂಪ್, ಮುಜಾವರ್ ಕ್ಯಾಂಪ್, ಜಂತಕಲ್, ವಿರುಪಾಪುರ ತಾಂಡ ಹಾಗೂ ಇನ್ನಿತರೆಡೆ ಮನೆಮನೆಗಳಲ್ಲಿ ಪಡಿತರ ಅಕ್ಕಿ ಸಂಗ್ರಹಿಸಿನಂತರ ವಿವಿಧ ಬ್ರ್ಯಾಂಡ್‍ಗಳ ಚೀಲಗಳಲ್ಲಿ ತುಂಬಿ ಕೆಲ ರೈಸ್‍ಮಿಲ್‍ಗಳ ಮಾಲೀಕರಿಗೆ ಪೂರೈಸುತ್ತಾರೆ. ಅಲ್ಲಿಂದ ಕಾರಟಗಿ, ಯರಡೋಣಾ, ಬೂದಗುಂಪಾ, ತಾವರಗೇರಾ, ಇಲಕಲ್, ಹೊಸಪೇಟೆ, ಹಗರಿಬೊಮ್ಮನಹಳ್ಳಿ ಇನ್ನಿತರೆಡೆಗೆ ಸಾಗಣೆಯಾಗುತ್ತವೆ. ಹೀಗೆ ಒಂದು ವ್ಯವಸ್ಥಿತವಾದ ಪಡಿತರ ಅಕ್ಕಿ ಅಕ್ರಮ ದಂಧೆ ಮತ್ತೆ ಆರಂಭವಾಗಿದ್ದು ಕಡಿವಾಣ ಇಲ್ಲದಂತಾಗಿದೆ. ಆದ್ದರಿಂದ ಕೂಡಲೇ ಆಹಾರ ಇಲಾಖೆಯ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಬೇಕು. ಈ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು.

error: Content is protected !!
Scroll to Top