Muttappa Doddamani

ಸಮಾಧಿಯಾಗಿದ್ದ ಹಳ್ಳದ ಆರ್ತನಾದಕ್ಕೆ ಸಿಕ್ಕಿತು ಸಾಕ್ಷ್ಯದ ಬಲ.

ಬಸವರಾಜ್ ತೆನ್ನಳ್ಳಿ ಅವರೇ, ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಿ! ವಿಶೇಷ ತನಿಖಾ ವರದಿ: ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಮೇ:29 (ಸಂಚಿಕೆ-04) ಕೊಪ್ಪಳ : ಅಧಿಕಾರ, ದುಡ್ಡು ಮತ್ತು ರಾಜಕೀಯ ಮಸಲ್ ಪವರ್ ಇದ್ದರೆ ಈ ದೇಶದಲ್ಲಿ ಏನನ್ನು ಬೇಕಾದರೂ ನುಂಗಿ ನೀರು ಕುಡಿಯಬಹುದು ಅಂದುಕೊಂಡಿದ್ದಾರೆ ಕೆಲವು ಅಕ್ರಮಕೋರರು. ಕಣ್ಣೆದುರೇ ಹರಿಯುವ ನದಿ, ಹಳ್ಳ, ಕೆರೆಗಳನ್ನು ಮಣ್ಣು ಹಾಕಿ ಮುಚ್ಚಿ, ಅಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುವ ಲೇಔಟ್ ದಂಧೆಕೋರರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಅದಕ್ಕೆ ಜ್ವಲಂತ […]

ಸಮಾಧಿಯಾಗಿದ್ದ ಹಳ್ಳದ ಆರ್ತನಾದಕ್ಕೆ ಸಿಕ್ಕಿತು ಸಾಕ್ಷ್ಯದ ಬಲ. Read More »

ಅಧಿಕಾರದ ಅಂಗಳದಿಂದ ಮೌನದ ಹಾದಿಗೆ ಒಂದು ಯುಗದ ಭಾವನಾತ್ಮಕ ವಿದಾಯ

ಅನ್ನರಾಮಯ್ಯನಾಗಿ ಹಸಿವು ನೀಗಿದ, ದಲಿತರಾಮಯ್ಯನಾಗಿ ಸಮಾನತೆ ಸಾರಿದ ಅಭೂತಪೂರ್ವ ಚೇತನದ ಅನಾವರಣ. ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ :28 ಕೊಪ್ಪಳ: ಇಂದು ಸೂರ್ಯ ಮುಳುಗುವ ಹೊತ್ತಿಗೆ, ಸಿದ್ದರಾಮಯ್ಯನವರ ಅಧಿಕಾರದ ಸೂರ್ಯನೂ ಅಸ್ತಂಗತವಾಯಿತು. ಅವರು ರಾಜೀನಾಮೆ ಪತ್ರಕ್ಕೆ ಸಹಿ ಹಾಕಿ ಹೊರಬರುತ್ತಿದ್ದಂತೆಯೇ, ರಾಜ್ಯದ ಮೂಲೆಮೂಲೆಗಳಲ್ಲಿ ಕೇಳಿಬರುತ್ತಿರುವ ಬಿಕ್ಕಳಿಕೆಯ ಶಬ್ದಗಳು ಕೇವಲ ರಾಜಕೀಯ ಸೋಲಲ್ಲ, ಅದೊಂದು ಯುಗಾಂತ್ಯದ ಆರ್ತನಾದ.​ಅವರು ಅಧಿಕಾರ ಕಳೆದುಕೊಂಡದ್ದಕ್ಕೆ ರಾಜ್ಯ ಅಳುತ್ತಿಲ್ಲ ಬದಲಿಗೆ, ತಮ್ಮ ಮನೆಯ ಹಿರಿಯಣ್ಣನೊಬ್ಬ ದೂರವಾಗುತ್ತಿದ್ದಾನಲ್ಲ ಎಂಬ ನೋವು ಜನರ ಕಣ್ಣುಗಳಲ್ಲಿ ಮಡುಗಟ್ಟಿದೆ.

ಅಧಿಕಾರದ ಅಂಗಳದಿಂದ ಮೌನದ ಹಾದಿಗೆ ಒಂದು ಯುಗದ ಭಾವನಾತ್ಮಕ ವಿದಾಯ Read More »

ಪತ್ರಕರ್ತರ ಸಂಕಷ್ಟದ ಕಡಲಿಗೆ, ದಾರಿ ತೋರುವ ಧ್ರುವತಾರೆ

​“ಪತ್ರಿಕೋದ್ಯಮದ ಕತ್ತಲೆಗೆ ಸೂರ್ಯನ ಕಿರಣ ಮಲ್ಲಿಕಾರ್ಜುನ ಬಂಗ್ಲೆ” ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ: 25 ಕೊಪ್ಪಳ : ಸಮಾಜದ ಅರಿವಿನ ದೀಪವನ್ನು ಹಿಡಿದು ಕತ್ತಲೆಯನ್ನು ಸೀಳುತ್ತಾ ಸಾಗುವವನು ಪತ್ರಕರ್ತ. ಆತ ಸಂವಿಧಾನದ ನಾಲ್ಕನೇ ಅಂಗ ಎಂದು ವೇದಿಕೆಗಳ ಮೇಲೆ ಹೂಮಾಲೆ ಹಾಕಿಸಿಕೊಂಡು ಭಾಷಣ ಮಾಡುವ ಪ್ರಭುಗಳ ಧ್ವನಿಯನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ, ಅಂತರಂಗದ ಆಳದಲ್ಲಿ ಯೋಚಿಸಿದರೆ, ಆ ನಾಲ್ಕನೇ ಅಂಗ ಎಲ್ಲಿಯೂ ಸಂವಿಧಾನದ ಪುಟಗಳಲ್ಲಿ ದಾಖಲಾಗಿಲ್ಲ. ಆತನು ಕೇವಲ ವ್ಯವಸ್ಥೆಯ ಅನುಕೂಲಕ್ಕಾಗಿ ಸೃಷ್ಟಿಸಲ್ಪಟ್ಟ ಒಂದು

ಪತ್ರಕರ್ತರ ಸಂಕಷ್ಟದ ಕಡಲಿಗೆ, ದಾರಿ ತೋರುವ ಧ್ರುವತಾರೆ Read More »

ಗವಿಸಿದ್ದಪ್ಪ ಹೊಸಮನಿ ಅವರ ವೃತ್ತಿ ಬದುಕಿನ ಹೊಸ ಶಿಖರ

ನಿಸ್ವಾರ್ಥ ಸೇವೆಯ ಹೊಸ ಮೈಲಿಗಲ್ಲು ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ:25 ಕೊಪ್ಪಳ: ವೃತ್ತಿ ಜೀವನವೆಂಬುದು ಮನುಷ್ಯನಿಗೆ ಬರೀ ಬದುಕಿನ ದಾರಿ ಮಾತ್ರವಲ್ಲ, ಅದು ತಾನು ನಂಬಿದ ಮೌಲ್ಯಗಳನ್ನು ಆಚರಣೆಯಲ್ಲಿ ತರುವ ಪರೀಕ್ಷಾ ಕೇಂದ್ರವೂ ಹೌದು. ಈ ಪರೀಕ್ಷೆಯಲ್ಲಿ ತನ್ನದೇ ಆದ ಸಾರ್ಥಕತೆಯನ್ನು ಕಂಡುಕೊಂಡವರು ಗವಿಸಿದ್ದಪ್ಪ ಹೊಸಮನಿ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ದೀರ್ಘಕಾಲದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಇವರು, ಇದೀಗ ಸಹಾಯಕ ನಿರ್ದೇಶಕರಾಗಿ ಪದೋನ್ನತಿಯನ್ನು ಪಡೆದಿರುವುದು ಅವರ ಕರ್ತವ್ಯದ ಹಾದಿಗೆ ದೊರೆತ ಒಂದು ಸಹಜ

ಗವಿಸಿದ್ದಪ್ಪ ಹೊಸಮನಿ ಅವರ ವೃತ್ತಿ ಬದುಕಿನ ಹೊಸ ಶಿಖರ Read More »

“ಸಂಧಾನಕ್ಕೆ ಇಳಿದ ‘ಡಿಜಿಟಲ್ ಲಂಚಕೋರ’ ಭಯ್ಯ ಗ್ರೂಪ್‌ನಲ್ಲಿ ಹಾಕಬೇಡಿ, ಮಾತಾಡಿ ಕ್ಲಿಯರ್ ಮಾಡಿಕೊಳ್ಳೋಣ”

ಅಧಿಕಾರಿಗಳ ಆಪ್ತ ವಲಯದ ಕವಚದಲ್ಲಿ ಲೂಟಿ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ:21 (ಸಂಚಿಕೆ-02) ಕೂಕನೂರ: ಬಳಗೇರಿ ಗ್ರಾಮ ಪಂಚಾಯಿತಿಯ ಪಿಡಿಒ ಮಹೇಶ್ ಗೌಡ ನೀಲನಗೌಡ ಮಲ್ಲನಗೌಡ್ರ ಅವರ ಲಂಚದ ಡಿಜಿಟಲ್ ಪುರಾವೆಗಳು ಹೊರಬರುತ್ತಿದ್ದಂತೆ, ಅವರ ದರ್ಪ ಈಗ ‘ದೀನತೆ’ಯಾಗಿ ಬದಲಾಗಿದೆ! ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಗುತ್ತಿಗೆದಾರನಿಂದ ಲಕ್ಷಗಟ್ಟಲೆ ಹಣ ಕೀಳುವಾಗ ಇದ್ದ ಆ ಧೈರ್ಯ, ಈಗ ಸತ್ಯ ಜಗಜ್ಜಾಹೀರಾಗುತ್ತಿದ್ದಂತೆ ಮರೆಯಾಗಿದೆ. ಸುದ್ದಿ ಸದ್ದು ಮಾಡುತ್ತಿದ್ದಂತೆ, ಪಿಡಿಒ ಮಹೇಶಗೌಡ ಅವರು ನೇರವಾಗಿ ರಣಬೇಟೆ ಸಂಪಾದಕರಿಗೆ ಕರೆ

“ಸಂಧಾನಕ್ಕೆ ಇಳಿದ ‘ಡಿಜಿಟಲ್ ಲಂಚಕೋರ’ ಭಯ್ಯ ಗ್ರೂಪ್‌ನಲ್ಲಿ ಹಾಕಬೇಡಿ, ಮಾತಾಡಿ ಕ್ಲಿಯರ್ ಮಾಡಿಕೊಳ್ಳೋಣ” Read More »

“ಪಿಡಿಒ ಮಹೇಶ್ ಗೌಡರ ಭ್ರಷ್ಟಾಚಾರದ ‘ಡಿಜಿಟಲ್’ ಮುಖವಾಡ!”

ಬಳಗೇರಿ ಪಂಚಾಯಿತಿಯಲ್ಲಿ ನಡೆಯುತ್ತಿದೆ ಅಕ್ಷರಶಃ ಲೂಟಿ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ: 20 ಕೂಕನೂರ: ಇದು ಕೇವಲ ಒಂದು ಹಣಕಾಸಿನ ವರ್ಗಾವಣೆ ಅಲ್ಲ, ಇದು ಪಾರದರ್ಶಕ ಆಡಳಿತದ ಮುಖವಾಡ ಧರಿಸಿ ನಡೆಸಿದ ‘ಡಿಜಿಟಲ್ ಲೂಟಿ’ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮ ಪಂಚಾಯಿತಿಯ ಪಡಸಾಲೆಯಲ್ಲಿ ಕುಳಿತು, ತನ್ನ ಅಧಿಕಾರದ ಮದದಲ್ಲಿ ಮೆರೆಯುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಗೌಡ ನೀಲನಗೌಡ ಮಲ್ಲನಗೌಡ್ರ, ಇದೀಗ ಭ್ರಷ್ಟಾಚಾರದ ಮಸಿಯಲ್ಲಿ ಮೈ-ಕೈ ಮೆತ್ತಿಕೊಂಡಿದ್ದಾರೆ. ​ಅಧಿಕಾರದ ದರ್ಪಕ್ಕೆ ಡಿಜಿಟಲ್ ಹಣೆಪಟ್ಟಿ

“ಪಿಡಿಒ ಮಹೇಶ್ ಗೌಡರ ಭ್ರಷ್ಟಾಚಾರದ ‘ಡಿಜಿಟಲ್’ ಮುಖವಾಡ!” Read More »

ಹಣದ ಹಪಾಹಪಿಗೆ ಪ್ರಕೃತಿಯ ಕತ್ತು ಹಿಸುಕಿದ ಪಾಪಿಗಳ ಅಟ್ಟಹಾಸದ ಕಥೆ!

ರಣಬೇಟೆಯ ರಣಕಹಳೆಗೆ ಕೊನೆಗೂ ಮಣಿದು ಟೇಪು ಹಿಡಿಯ ಹೊರಟರೇ ‘ಮಹಾನ್’ ಭೂಮಾಪಕರು? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ:ಮೇ 18 (ಸಂಚಿಕೆ – 03) ಕೊಪ್ಪಳ: ಇದು ಕಾಸಿನ ಕಾಂಚಾಣಕ್ಕೆ ಪ್ರಕೃತಿಯ ಕತ್ತು ಸೀಳಿದವರ ಕಥೆ ಮಾತ್ರವಲ್ಲ, ಕಾನೂನಿನ ಕಣ್ಣಿಗೆ ಮಣ್ಣೆರಚಲು ಹೋದ ಮಾಫಿಯಾವನ್ನು ಸರಕಾರಿ ದಾಖಲೆಗಳೇ ಹೇಗೆ ಹೆಡೆಮುರಿ ಕಟ್ಟಿ ನಿಲ್ಲಿಸಿವೆ ಎಂಬುದರ ಜ್ವಲಂತ ಸಾಕ್ಷಿ! ಕೊಪ್ಪಳದ ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ರ ಜಮೀನಿನ ಪಕ್ಕದಲ್ಲಿ ನೈಸರ್ಗಿಕವಾಗಿ ಹರಿಯುತ್ತಿದ್ದ ಹಳ್ಳವನ್ನು ಮುಚ್ಚಿ, ಅಲ್ಲಿ ಅಕ್ರಮದ

ಹಣದ ಹಪಾಹಪಿಗೆ ಪ್ರಕೃತಿಯ ಕತ್ತು ಹಿಸುಕಿದ ಪಾಪಿಗಳ ಅಟ್ಟಹಾಸದ ಕಥೆ! Read More »

ಹಳ್ಳ ನುಂಗಿದ ‘ಭೂ’ ರಕ್ಕಸರಿಗೆ ಕಂದಾಯ ಇಲಾಖೆಯೇ ಕಾವಲು?

ರದ್ದಾದ ಭೂ ಪರಿವರ್ತನೆಗೆ ಆರ್.ಐ ಸುರೇಶ ನೀಡಿದರೇ ಮರುಜೀವ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ:14 (ಸಂಚಿಕೆ-02) ಕೊಪ್ಪಳ: ಇದು ಅಧಿಕಾರದ ಮದದಲ್ಲಿ ನಿಸರ್ಗದ ಉಸಿರು ಹಿಸುಕಿದ ಪಾಪಿಗಳ ಕಥೆ. ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ರ ಪಕ್ಕದಲ್ಲಿ ಹರಿಯುತ್ತಿದ್ದ ನೈಸರ್ಗಿಕ ಹಳ್ಳವೊಂದನ್ನು ಮಣ್ಣು ಮಾಡಿ, ಅದರ ಮೇಲೆ ಅಕ್ರಮದ ಅರಮನೆ ಕಟ್ಟಲು ಹೊರಟ ಭೂಗಜಗಳ ಅಸಲಿ ಮುಖವಾಡ ಈಗ ಕಳಚಿದೆ. ಸರ್ಕಾರಿ ಹಳ್ಳಕ್ಕೆ ಮಣ್ಣು ಮುಚ್ಚಿದ ‘ಭೂ’ ರಕ್ಕಸರ ಅಟ್ಟಹಾಸದ ಬೆನ್ನಲ್ಲೇ, ಈಗ ಕಂದಾಯ

ಹಳ್ಳ ನುಂಗಿದ ‘ಭೂ’ ರಕ್ಕಸರಿಗೆ ಕಂದಾಯ ಇಲಾಖೆಯೇ ಕಾವಲು? Read More »

ಸದ್ದಿಲ್ಲದೆ ಸಮಾಧಿಯಾದ ಸರ್ಕಾರಿ ಹಳ್ಳ!

ದದೇಗಲ್ ಭೂಗಳ್ಳರ ‘ಸದ್ದಿಲ್ಲದ’ ಸಾಮ್ರಾಜ್ಯಕ್ಕೆ ಸಿದ್ದರಾಮೇಶ್ವರರ ಸಿಡಿಲು! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಏ:13 ಸಂಚಿಕೆ- 01 ಕೊಪ್ಪಳ: ಇದು ಹಣದ ಹಪಾಹಪಿಗೆ ಬಿದ್ದು ನಿಸರ್ಗದ ಕತ್ತು ಹಿಸುಕಿದ ಪಾಪಿಗಳ ಕಥೆ. ಅಧಿಕಾರದ ಮದ ಮತ್ತು ಕಾಂಕ್ರೀಟ್ ಗೋಡೆಗಳ ನಡುವೆ ಸರ್ಕಾರಿ ಹಳ್ಳವೊಂದನ್ನು ಸಮಾಧಿ ಮಾಡಿ, ಅದರ ಮೇಲೆ ರಕ್ತಸಿಕ್ತ ಲಾಭದ ಬಡಾವಣೆ ಕಟ್ಟಲು ಹೊರಟ ಭೂಗಜಗಳ ಕರಾಳ ಮುಖವಾಡ ಈಗ ಕಳಚಿದೆ. ಕೊಪ್ಪಳ ಜಿಲ್ಲೆಯ ದದೇಗಲ್ ಗ್ರಾಮದ ಸರ್ವೆ ನಂಬರ್ 69/ ಹಿಸ್ಸಾ 03 ರ

ಸದ್ದಿಲ್ಲದೆ ಸಮಾಧಿಯಾದ ಸರ್ಕಾರಿ ಹಳ್ಳ! Read More »

ದೋಷಾರೋಪಣ ಪಟ್ಟಿ ನುಂಗಿ ನೀರು ಕುಡಿದ ಕೂಕನೂರ ಇಓ ಸಂತೋಷ್ ಬಿರಾದಾರ್

ಸಿಇಓ ಆದೇಶವನ್ನೇ ಕಸದ ಬುಟ್ಟಿಗೆ ಎಸೆದ ಬಿರಾದಾರ್ ಅಂಡ್ ಟೀಮ್! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ:12 (ಸಂಚಿಕೆ-03) ಬಿಸಿಲ ನಾಡು ಕೊಪ್ಪಳದ ಮಣ್ಣಿನಲ್ಲಿ ಈಗ ಬರೀ ಬಿಸಿಲಷ್ಟೇ ಇಲ್ಲ, ಅಧಿಕಾರಶಾಹಿಯ ಅಹಂಕಾರ ಮತ್ತು ಭ್ರಷ್ಟಾಚಾರದ ಕೆಂಡವೂ ಧಗಧಗಿಸುತ್ತಿದೆ. ಕುಕನೂರು ತಾಲೂಕು ಪಂಚಾಯತ್ ಎಂಬುದು ಈಗ ಜನಸೇವೆಯ ಕೇಂದ್ರವಾಗಿ ಉಳಿದಿಲ್ಲ, ಬದಲಿಗೆ ಅದು ಅಪ್ಪಟ ‘ಸೆಟಲ್ಮೆಂಟ್’ ಅಡ್ಡೆಯಾಗಿ ಬದಲಾಗಿರುವುದು ಅಕ್ಷರಶಃ ದುರಂತ! ​ಲೂಟಿ ಪುರಾಣದ ಅಸಲಿ ಮುಖವಾಡ!ನೋಡಿ ಓದುಗರೇ,ಇಟಗಿ ಸೇರಿದಂತೆ ಮಸಬಹಂಚಿನಾಳ,ಶೀರೂರ,ಭಾನಾಪೂರ,ರಾಜೂರ,ಹಿರೇಬಿಡನಾಳ,ಕುದರಿಮೊತಿ,ಮಂಗಳೂರ,ಬೆಣಕಲ್‌,ಮಂಡಲಗೇರಿ‌,ತಳಕಲ್,ಯರೇಹಂಚಿನಾಳ ಗ್ರಾಮ ಪಂಚಾಯತ್‌ಗಳಲ್ಲಿ ‘ನರೇಗಾ’ ಯೋಜನೆಯಡಿ

ದೋಷಾರೋಪಣ ಪಟ್ಟಿ ನುಂಗಿ ನೀರು ಕುಡಿದ ಕೂಕನೂರ ಇಓ ಸಂತೋಷ್ ಬಿರಾದಾರ್ Read More »

error: Content is protected !!
Scroll to Top