Muttappa Doddamani

“ಸರ್ಕಾರಿ ಹಳ್ಳದ ಹೆಣದ ಮೇಲೆ ‘ದೃಷ್ಟಿ ಎನ್‌ಕ್ಲೇವ್’ ನಕಲಿ ಸಾಮ್ರಾಜ್ಯ

ಖಾಕಿ-ಖಾದಿ-ಅಧಿಕಾರಶಾಹಿಯ ಕತ್ತಲ ಕೋಣೆಯಲ್ಲಿ ಹಳ್ಳ ನುಂಗಿದ ಭೂಬೂತಗಳ ‘ದೃಷ್ಟಿ’ ಸೀಳಿದ ರಣಬೇಟೆ ಎಕ್ಸ್‌ಕ್ಲೂಸಿವ್ ಧಮಾಕಾ! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜು:1 ವಿಶೇಷ ತನಿಖಾ ವರದಿ-6 ಕೊಪ್ಪಳ:​ ರಾತ್ರಿ ಕತ್ತಲಾಗುತ್ತಿದ್ದಂತೆ ಆ ಕತ್ತಲ ಕೋಣೆಯಲ್ಲಿ ಹಣದ ಕಂತೆಗಳು ಮೇಜಿನ ಕೆಳಗಿನಿಂದ ಕೈ ಬದಲಾಗುತ್ತಿದ್ದವು. ಕಣ್ಣುಮುಚ್ಚಿ ಕುಳಿತಿದ್ದ ಅಧಿಕಾರಶಾಹಿಯ ಅಹಂಕಾರದ ಮದಕ್ಕೆ, ನಿಸರ್ಗದ ಆಕ್ರಂದನ ಕೇಳಿಸಲೇ ಇಲ್ಲ. ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ಸರ್ವೆ ನಂಬರ್ 69/3ರ ಪಕ್ಕದಲ್ಲಿ ಶತಮಾನಗಳಿಂದ ನಿಸರ್ಗದ ಜೀವನಾಡಿಯಾಗಿ ಹರಿಯುತ್ತಿದ್ದ ಆ ಸರ್ಕಾರಿ ಹಳ್ಳವನ್ನು […]

“ಸರ್ಕಾರಿ ಹಳ್ಳದ ಹೆಣದ ಮೇಲೆ ‘ದೃಷ್ಟಿ ಎನ್‌ಕ್ಲೇವ್’ ನಕಲಿ ಸಾಮ್ರಾಜ್ಯ Read More »

ಅಕ್ರಮ ಎಸಗಿದ ಉಪ ಪ್ರಾಚಾರ್ಯರ ರಕ್ಷಣೆಗೆ ನಿಂತರಾ ಬಿಇಓ ಶೇಖರಪ್ಪ?

ಕಾರಣ ಕೇಳುವ ನೋಟಿಸ್’ ಹಿಂದಿರುವ ಆ ಅಸಲಿ ತಂತ್ರಗಾರಿಕೆಯ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ..! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:30 (ಸಂಚಿಕೆ-2) ​ಕೊಪ್ಪಳದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಆ ‘ಕ್ಯೂಆರ್ ಕೋಡ್’ ಮತ್ತು ಖಾಸಗಿ ಜೆರಾಕ್ಸ್ ಅಂಗಡಿಯ ಒಳ ಒಪ್ಪಂದದ ಲೂಟಿ ದಂಧೆಯನ್ನು ನಾವು ಬಯಲಿಗೆಳೆದ ಬೆನ್ನಲ್ಲೇ ಶಿಕ್ಷಣ ಇಲಾಖೆಯ ಆವರಣದಲ್ಲಿ ದೊಡ್ಡ ನಡುಕ ಶುರುವಾಗಿದೆ. ಆದರೆ, ಈ ಹಗರಣ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಈಡಾಗುತ್ತಿದ್ದಂತೆ, ಪಕ್ಕದಲ್ಲೇ ಕುಳಿತಿರುವ ಕ್ಷೇತ್ರ

ಅಕ್ರಮ ಎಸಗಿದ ಉಪ ಪ್ರಾಚಾರ್ಯರ ರಕ್ಷಣೆಗೆ ನಿಂತರಾ ಬಿಇಓ ಶೇಖರಪ್ಪ? Read More »

ದುರಂತಕ್ಕೆ ಮುಹೂರ್ತ ಇಟ್ಟಿದೆಯೇ ಜಿಲ್ಲಾಡಳಿತ?!

ಕೊಪ್ಪಳ ತಹಶೀಲ್ದಾರ್ ಕಚೇರಿ ಎಂದೋ ಉರುಳುವ ಜ್ವಾಲಾಮುಖಿ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:30 ಕೊಪ್ಪಳ: ಯಾವುದೇ ಒಂದು ನಾಡಿನ ಆಡಳಿತ ಕೇಂದ್ರವು ಆ ಭಾಗದ ಜನರ ನಂಬಿಕೆ ಮತ್ತು ಸುರಕ್ಷತೆಯ ಸಂಕೇತವಾಗಿರಬೇಕು. ಆದರೆ ಕೊಪ್ಪಳದ ತಹಶಿಲ್ದಾರ್ ಕಾರ್ಯಾಲಯಕ್ಕೆ ಹೆಜ್ಜೆ ಇಟ್ಟರೆ, ಅಲ್ಲಿ ಆಡಳಿತದ ಗಾಂಭೀರ್ಯಕ್ಕಿಂತ ಹೆಚ್ಚಾಗಿ ಸಾವಿನ ಭೀತಿ ಎದುರಾಗುತ್ತದೆ. ದಿನಕ್ಕೆ ನೂರಾರು ಬಡ ಜನಸಾಮಾನ್ಯರು, ರೈತರು, ವೃದ್ಧರು ತಮ್ಮ ದಿನನಿತ್ಯದ ಬದುಕಿನ ನೂರಾರು ಆಶೋತ್ತರಗಳನ್ನು ಹೊತ್ತು ಬಂದು ಹೋಗುವ ಈ ಸರ್ಕಾರಿ ಕಚೇರಿ ಇಂದು

ದುರಂತಕ್ಕೆ ಮುಹೂರ್ತ ಇಟ್ಟಿದೆಯೇ ಜಿಲ್ಲಾಡಳಿತ?! Read More »

ಲೆಕ್ಕ ಶೀರ್ಷಿಕೆ 5054 ರಡಿ 23 ರಸ್ತೆ ಕಾಮಗಾರಿಗಳ ಹಗರಣದ ಆರೋಪ

ಕಳಪೆ ರಸ್ತೆಗೂ ಬಿಲ್ ಪಾಸ್ ಮಾಡೋ ಹೊಂಚು..! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:13 ಇದು ಕೊಪ್ಪಳ. ಕಲ್ಲು ಮುಳ್ಳುಗಳ ನಾಡಷ್ಟೇ ಅಲ್ಲ, ಬಿಳಿ ಶರ್ಟು ಧರಿಸಿದ ಕೆಲವು ಭ್ರಷ್ಟ ಅಧಿಕಾರಿಗಳ ಪಾಲಿಗೆ ಕೋಟ್ಯಾಂತರ ರೂಪಾಯಿ ಹಣವನ್ನು ಲೂಟಿ ಹೊಡೆಯುವ ಚಿನ್ನದ ಗಣಿ..! ಹೌದು ಗೆಳೆಯರೇ, ನಿಮ್ಮ ಕಣ್ಣೆದುರೇ ಸರ್ಕಾರಿ ಹಣ ಹೆಂಗೆಲ್ಲಾ ನೀರಾವಿಯಾಗುತ್ತೆ, ಇಲಾಖೆಯ ಒಳಗಿರುವ ಬಿಳಿ ಇಲಿಗಳು ಹೆಂಗೆಲ್ಲಾ ಕಡತಗಳನ್ನು ಕದಿಯುತ್ತವೆ ಅನ್ನೋದಕ್ಕೆ ಇಲ್ಲೊಂದು ಜ್ವಲಂತ ಸಾಕ್ಷಿ ಸಿಕ್ಕಿದೆ. ಕೊಪ್ಪಳದ ಇತಿಹಾಸವನ್ನು ಒಮ್ಮೆ ತಿರುವಿ

ಲೆಕ್ಕ ಶೀರ್ಷಿಕೆ 5054 ರಡಿ 23 ರಸ್ತೆ ಕಾಮಗಾರಿಗಳ ಹಗರಣದ ಆರೋಪ Read More »

ಬಾಲಕಿಯರ ಸರ್ಕಾರಿ ಶಾಲೆಯಲ್ಲೊಂದು ‘ಕ್ಯೂಆರ್ ಕೋಡ್’ ಕರ್ಮಕಾಂಡ..!

ಇಲಾಖೆಯ ಕಣ್ಣೆದುರೇ ಉಪ ಪ್ರಾಚಾರ್ಯರ ಏಕಚಕ್ರಾಧಿಪತ್ಯದ ‘ಸ್ಕ್ಯಾನಿಂಗ್’ ದಂಧೆ? ರಣಬೇಟೆ ವೆಬ್‌ ನ್ಯೂಸ್‌ ಜೂನ್:‌11 ಕೊಪ್ಪಳ : ಇದು ಅಕ್ಷರ ಕಲಿಸುವ ದೇಗುಲವೋ ಅಥವಾ ಬಡ ಪಾಲಕರ ಜೇಬಿಗೆ ಕತ್ತರಿ ಹಾಕುವ ಕಾರ್ಪೊರೇಟ್ ಕಚೇರಿಯೋ? ಇಂಥದ್ದೊಂದು ಅನುಮಾನ ಈಗ ಕೊಪ್ಪಳದ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಹೌದು, ಕೊಪ್ಪಳದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪಾಲಕರನ್ನು ಮತ್ತು ಇಲಾಖೆಯ ನಿಯಮಗಳನ್ನು ಅಕ್ಷರಶಃ ದಿಕ್ಕುತಪ್ಪಿಸುವ ವಿಚಿತ್ರ ವ್ಯವಸ್ಥೆಯೊಂದು ಜಾರಿಗೆ ಬಂದಿದೆ.​ಯಾರ ಅನುಮತಿಯೂ ಇಲ್ಲದೆ, ಇಡೀ

ಬಾಲಕಿಯರ ಸರ್ಕಾರಿ ಶಾಲೆಯಲ್ಲೊಂದು ‘ಕ್ಯೂಆರ್ ಕೋಡ್’ ಕರ್ಮಕಾಂಡ..! Read More »

ಬಿದ್ದಿದ್ದು ಕಾಂಪೌಂಡ್, ಉಳಿದಿದ್ದು ಹಳ್ಳದ ಸಮಾಧಿ!

​ಅಧಿಕಾರದ ಮದದಲ್ಲಿ ನಿಸರ್ಗದ ಉಸಿರು ಹಿಸುಕಿದ ಪಾಪಿಗಳ ಕಥೆ. ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:08 (ಸಂಚಿಕೆ-05) ಕೊಪ್ಪಳ: ಇದು ಅಧಿಕಾರದ ಮದದಲ್ಲಿ ನಿಸರ್ಗದ ಉಸಿರು ಹಿಸುಕಿದ ಪಾಪಿಗಳ ಕಥೆ. ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ಮತ್ತು ಅದರ ಪಕ್ಕದಲ್ಲಿ ಸರ್ಕಾರಿ ಹಳ್ಳವೊಂದನ್ನು ಮಣ್ಣು ಮಾಡಿ, ಅದರ ಮೇಲೆ ಅಕ್ರಮದ ಅರಮನೆ ಕಟ್ಟಲು ಹೊರಟ ಭೂಗಜಗಳ ಆಟಕ್ಕೆ ರಣಬೇಟೆ ವೆಬ್ ನ್ಯೂಸ್ ಇಟ್ಟ ಇತಿಶ್ರೀ ಇದು. ನಮ್ಮ ನಿರಂತರ ವರದಿಗಳ ಮಹಾ ಸ್ಪೋಟಕ್ಕೆ ಕೊನೆಗೂ ಎಚ್ಚೆತ್ತುಕೊಂಡ

ಬಿದ್ದಿದ್ದು ಕಾಂಪೌಂಡ್, ಉಳಿದಿದ್ದು ಹಳ್ಳದ ಸಮಾಧಿ! Read More »

ಸಮಾಧಿಯಾಗಿದ್ದ ಹಳ್ಳದ ಆರ್ತನಾದಕ್ಕೆ ಸಿಕ್ಕಿತು ಸಾಕ್ಷ್ಯದ ಬಲ.

ಬಸವರಾಜ್ ತೆನ್ನಳ್ಳಿ ಅವರೇ, ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಿ! ವಿಶೇಷ ತನಿಖಾ ವರದಿ: ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಮೇ:29 (ಸಂಚಿಕೆ-04) ಕೊಪ್ಪಳ : ಅಧಿಕಾರ, ದುಡ್ಡು ಮತ್ತು ರಾಜಕೀಯ ಮಸಲ್ ಪವರ್ ಇದ್ದರೆ ಈ ದೇಶದಲ್ಲಿ ಏನನ್ನು ಬೇಕಾದರೂ ನುಂಗಿ ನೀರು ಕುಡಿಯಬಹುದು ಅಂದುಕೊಂಡಿದ್ದಾರೆ ಕೆಲವು ಅಕ್ರಮಕೋರರು. ಕಣ್ಣೆದುರೇ ಹರಿಯುವ ನದಿ, ಹಳ್ಳ, ಕೆರೆಗಳನ್ನು ಮಣ್ಣು ಹಾಕಿ ಮುಚ್ಚಿ, ಅಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುವ ಲೇಔಟ್ ದಂಧೆಕೋರರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಅದಕ್ಕೆ ಜ್ವಲಂತ

ಸಮಾಧಿಯಾಗಿದ್ದ ಹಳ್ಳದ ಆರ್ತನಾದಕ್ಕೆ ಸಿಕ್ಕಿತು ಸಾಕ್ಷ್ಯದ ಬಲ. Read More »

ಅಧಿಕಾರದ ಅಂಗಳದಿಂದ ಮೌನದ ಹಾದಿಗೆ ಒಂದು ಯುಗದ ಭಾವನಾತ್ಮಕ ವಿದಾಯ

ಅನ್ನರಾಮಯ್ಯನಾಗಿ ಹಸಿವು ನೀಗಿದ, ದಲಿತರಾಮಯ್ಯನಾಗಿ ಸಮಾನತೆ ಸಾರಿದ ಅಭೂತಪೂರ್ವ ಚೇತನದ ಅನಾವರಣ. ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ :28 ಕೊಪ್ಪಳ: ಇಂದು ಸೂರ್ಯ ಮುಳುಗುವ ಹೊತ್ತಿಗೆ, ಸಿದ್ದರಾಮಯ್ಯನವರ ಅಧಿಕಾರದ ಸೂರ್ಯನೂ ಅಸ್ತಂಗತವಾಯಿತು. ಅವರು ರಾಜೀನಾಮೆ ಪತ್ರಕ್ಕೆ ಸಹಿ ಹಾಕಿ ಹೊರಬರುತ್ತಿದ್ದಂತೆಯೇ, ರಾಜ್ಯದ ಮೂಲೆಮೂಲೆಗಳಲ್ಲಿ ಕೇಳಿಬರುತ್ತಿರುವ ಬಿಕ್ಕಳಿಕೆಯ ಶಬ್ದಗಳು ಕೇವಲ ರಾಜಕೀಯ ಸೋಲಲ್ಲ, ಅದೊಂದು ಯುಗಾಂತ್ಯದ ಆರ್ತನಾದ.​ಅವರು ಅಧಿಕಾರ ಕಳೆದುಕೊಂಡದ್ದಕ್ಕೆ ರಾಜ್ಯ ಅಳುತ್ತಿಲ್ಲ ಬದಲಿಗೆ, ತಮ್ಮ ಮನೆಯ ಹಿರಿಯಣ್ಣನೊಬ್ಬ ದೂರವಾಗುತ್ತಿದ್ದಾನಲ್ಲ ಎಂಬ ನೋವು ಜನರ ಕಣ್ಣುಗಳಲ್ಲಿ ಮಡುಗಟ್ಟಿದೆ.

ಅಧಿಕಾರದ ಅಂಗಳದಿಂದ ಮೌನದ ಹಾದಿಗೆ ಒಂದು ಯುಗದ ಭಾವನಾತ್ಮಕ ವಿದಾಯ Read More »

ಪತ್ರಕರ್ತರ ಸಂಕಷ್ಟದ ಕಡಲಿಗೆ, ದಾರಿ ತೋರುವ ಧ್ರುವತಾರೆ

​“ಪತ್ರಿಕೋದ್ಯಮದ ಕತ್ತಲೆಗೆ ಸೂರ್ಯನ ಕಿರಣ ಮಲ್ಲಿಕಾರ್ಜುನ ಬಂಗ್ಲೆ” ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ: 25 ಕೊಪ್ಪಳ : ಸಮಾಜದ ಅರಿವಿನ ದೀಪವನ್ನು ಹಿಡಿದು ಕತ್ತಲೆಯನ್ನು ಸೀಳುತ್ತಾ ಸಾಗುವವನು ಪತ್ರಕರ್ತ. ಆತ ಸಂವಿಧಾನದ ನಾಲ್ಕನೇ ಅಂಗ ಎಂದು ವೇದಿಕೆಗಳ ಮೇಲೆ ಹೂಮಾಲೆ ಹಾಕಿಸಿಕೊಂಡು ಭಾಷಣ ಮಾಡುವ ಪ್ರಭುಗಳ ಧ್ವನಿಯನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ, ಅಂತರಂಗದ ಆಳದಲ್ಲಿ ಯೋಚಿಸಿದರೆ, ಆ ನಾಲ್ಕನೇ ಅಂಗ ಎಲ್ಲಿಯೂ ಸಂವಿಧಾನದ ಪುಟಗಳಲ್ಲಿ ದಾಖಲಾಗಿಲ್ಲ. ಆತನು ಕೇವಲ ವ್ಯವಸ್ಥೆಯ ಅನುಕೂಲಕ್ಕಾಗಿ ಸೃಷ್ಟಿಸಲ್ಪಟ್ಟ ಒಂದು

ಪತ್ರಕರ್ತರ ಸಂಕಷ್ಟದ ಕಡಲಿಗೆ, ದಾರಿ ತೋರುವ ಧ್ರುವತಾರೆ Read More »

ಗವಿಸಿದ್ದಪ್ಪ ಹೊಸಮನಿ ಅವರ ವೃತ್ತಿ ಬದುಕಿನ ಹೊಸ ಶಿಖರ

ನಿಸ್ವಾರ್ಥ ಸೇವೆಯ ಹೊಸ ಮೈಲಿಗಲ್ಲು ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ:25 ಕೊಪ್ಪಳ: ವೃತ್ತಿ ಜೀವನವೆಂಬುದು ಮನುಷ್ಯನಿಗೆ ಬರೀ ಬದುಕಿನ ದಾರಿ ಮಾತ್ರವಲ್ಲ, ಅದು ತಾನು ನಂಬಿದ ಮೌಲ್ಯಗಳನ್ನು ಆಚರಣೆಯಲ್ಲಿ ತರುವ ಪರೀಕ್ಷಾ ಕೇಂದ್ರವೂ ಹೌದು. ಈ ಪರೀಕ್ಷೆಯಲ್ಲಿ ತನ್ನದೇ ಆದ ಸಾರ್ಥಕತೆಯನ್ನು ಕಂಡುಕೊಂಡವರು ಗವಿಸಿದ್ದಪ್ಪ ಹೊಸಮನಿ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ದೀರ್ಘಕಾಲದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಇವರು, ಇದೀಗ ಸಹಾಯಕ ನಿರ್ದೇಶಕರಾಗಿ ಪದೋನ್ನತಿಯನ್ನು ಪಡೆದಿರುವುದು ಅವರ ಕರ್ತವ್ಯದ ಹಾದಿಗೆ ದೊರೆತ ಒಂದು ಸಹಜ

ಗವಿಸಿದ್ದಪ್ಪ ಹೊಸಮನಿ ಅವರ ವೃತ್ತಿ ಬದುಕಿನ ಹೊಸ ಶಿಖರ Read More »

error: Content is protected !!
Scroll to Top