ಕ್ರೈಂ

“ಸರ್ಕಾರಿ ಹಳ್ಳದ ಹೆಣದ ಮೇಲೆ ‘ದೃಷ್ಟಿ ಎನ್‌ಕ್ಲೇವ್’ ನಕಲಿ ಸಾಮ್ರಾಜ್ಯ

ಖಾಕಿ-ಖಾದಿ-ಅಧಿಕಾರಶಾಹಿಯ ಕತ್ತಲ ಕೋಣೆಯಲ್ಲಿ ಹಳ್ಳ ನುಂಗಿದ ಭೂಬೂತಗಳ ‘ದೃಷ್ಟಿ’ ಸೀಳಿದ ರಣಬೇಟೆ ಎಕ್ಸ್‌ಕ್ಲೂಸಿವ್ ಧಮಾಕಾ! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜು:1 ವಿಶೇಷ ತನಿಖಾ ವರದಿ-6 ಕೊಪ್ಪಳ:​ ರಾತ್ರಿ ಕತ್ತಲಾಗುತ್ತಿದ್ದಂತೆ ಆ ಕತ್ತಲ ಕೋಣೆಯಲ್ಲಿ ಹಣದ ಕಂತೆಗಳು ಮೇಜಿನ ಕೆಳಗಿನಿಂದ ಕೈ ಬದಲಾಗುತ್ತಿದ್ದವು. ಕಣ್ಣುಮುಚ್ಚಿ ಕುಳಿತಿದ್ದ ಅಧಿಕಾರಶಾಹಿಯ ಅಹಂಕಾರದ ಮದಕ್ಕೆ, ನಿಸರ್ಗದ ಆಕ್ರಂದನ ಕೇಳಿಸಲೇ ಇಲ್ಲ. ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ಸರ್ವೆ ನಂಬರ್ 69/3ರ ಪಕ್ಕದಲ್ಲಿ ಶತಮಾನಗಳಿಂದ ನಿಸರ್ಗದ ಜೀವನಾಡಿಯಾಗಿ ಹರಿಯುತ್ತಿದ್ದ ಆ ಸರ್ಕಾರಿ ಹಳ್ಳವನ್ನು […]

“ಸರ್ಕಾರಿ ಹಳ್ಳದ ಹೆಣದ ಮೇಲೆ ‘ದೃಷ್ಟಿ ಎನ್‌ಕ್ಲೇವ್’ ನಕಲಿ ಸಾಮ್ರಾಜ್ಯ Read More »

ಅಕ್ರಮ ಎಸಗಿದ ಉಪ ಪ್ರಾಚಾರ್ಯರ ರಕ್ಷಣೆಗೆ ನಿಂತರಾ ಬಿಇಓ ಶೇಖರಪ್ಪ?

ಕಾರಣ ಕೇಳುವ ನೋಟಿಸ್’ ಹಿಂದಿರುವ ಆ ಅಸಲಿ ತಂತ್ರಗಾರಿಕೆಯ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ..! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:30 (ಸಂಚಿಕೆ-2) ​ಕೊಪ್ಪಳದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಆ ‘ಕ್ಯೂಆರ್ ಕೋಡ್’ ಮತ್ತು ಖಾಸಗಿ ಜೆರಾಕ್ಸ್ ಅಂಗಡಿಯ ಒಳ ಒಪ್ಪಂದದ ಲೂಟಿ ದಂಧೆಯನ್ನು ನಾವು ಬಯಲಿಗೆಳೆದ ಬೆನ್ನಲ್ಲೇ ಶಿಕ್ಷಣ ಇಲಾಖೆಯ ಆವರಣದಲ್ಲಿ ದೊಡ್ಡ ನಡುಕ ಶುರುವಾಗಿದೆ. ಆದರೆ, ಈ ಹಗರಣ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಈಡಾಗುತ್ತಿದ್ದಂತೆ, ಪಕ್ಕದಲ್ಲೇ ಕುಳಿತಿರುವ ಕ್ಷೇತ್ರ

ಅಕ್ರಮ ಎಸಗಿದ ಉಪ ಪ್ರಾಚಾರ್ಯರ ರಕ್ಷಣೆಗೆ ನಿಂತರಾ ಬಿಇಓ ಶೇಖರಪ್ಪ? Read More »

ಲೆಕ್ಕ ಶೀರ್ಷಿಕೆ 5054 ರಡಿ 23 ರಸ್ತೆ ಕಾಮಗಾರಿಗಳ ಹಗರಣದ ಆರೋಪ

ಕಳಪೆ ರಸ್ತೆಗೂ ಬಿಲ್ ಪಾಸ್ ಮಾಡೋ ಹೊಂಚು..! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:13 ಇದು ಕೊಪ್ಪಳ. ಕಲ್ಲು ಮುಳ್ಳುಗಳ ನಾಡಷ್ಟೇ ಅಲ್ಲ, ಬಿಳಿ ಶರ್ಟು ಧರಿಸಿದ ಕೆಲವು ಭ್ರಷ್ಟ ಅಧಿಕಾರಿಗಳ ಪಾಲಿಗೆ ಕೋಟ್ಯಾಂತರ ರೂಪಾಯಿ ಹಣವನ್ನು ಲೂಟಿ ಹೊಡೆಯುವ ಚಿನ್ನದ ಗಣಿ..! ಹೌದು ಗೆಳೆಯರೇ, ನಿಮ್ಮ ಕಣ್ಣೆದುರೇ ಸರ್ಕಾರಿ ಹಣ ಹೆಂಗೆಲ್ಲಾ ನೀರಾವಿಯಾಗುತ್ತೆ, ಇಲಾಖೆಯ ಒಳಗಿರುವ ಬಿಳಿ ಇಲಿಗಳು ಹೆಂಗೆಲ್ಲಾ ಕಡತಗಳನ್ನು ಕದಿಯುತ್ತವೆ ಅನ್ನೋದಕ್ಕೆ ಇಲ್ಲೊಂದು ಜ್ವಲಂತ ಸಾಕ್ಷಿ ಸಿಕ್ಕಿದೆ. ಕೊಪ್ಪಳದ ಇತಿಹಾಸವನ್ನು ಒಮ್ಮೆ ತಿರುವಿ

ಲೆಕ್ಕ ಶೀರ್ಷಿಕೆ 5054 ರಡಿ 23 ರಸ್ತೆ ಕಾಮಗಾರಿಗಳ ಹಗರಣದ ಆರೋಪ Read More »

ಬಾಲಕಿಯರ ಸರ್ಕಾರಿ ಶಾಲೆಯಲ್ಲೊಂದು ‘ಕ್ಯೂಆರ್ ಕೋಡ್’ ಕರ್ಮಕಾಂಡ..!

ಇಲಾಖೆಯ ಕಣ್ಣೆದುರೇ ಉಪ ಪ್ರಾಚಾರ್ಯರ ಏಕಚಕ್ರಾಧಿಪತ್ಯದ ‘ಸ್ಕ್ಯಾನಿಂಗ್’ ದಂಧೆ? ರಣಬೇಟೆ ವೆಬ್‌ ನ್ಯೂಸ್‌ ಜೂನ್:‌11 ಕೊಪ್ಪಳ : ಇದು ಅಕ್ಷರ ಕಲಿಸುವ ದೇಗುಲವೋ ಅಥವಾ ಬಡ ಪಾಲಕರ ಜೇಬಿಗೆ ಕತ್ತರಿ ಹಾಕುವ ಕಾರ್ಪೊರೇಟ್ ಕಚೇರಿಯೋ? ಇಂಥದ್ದೊಂದು ಅನುಮಾನ ಈಗ ಕೊಪ್ಪಳದ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಹೌದು, ಕೊಪ್ಪಳದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪಾಲಕರನ್ನು ಮತ್ತು ಇಲಾಖೆಯ ನಿಯಮಗಳನ್ನು ಅಕ್ಷರಶಃ ದಿಕ್ಕುತಪ್ಪಿಸುವ ವಿಚಿತ್ರ ವ್ಯವಸ್ಥೆಯೊಂದು ಜಾರಿಗೆ ಬಂದಿದೆ.​ಯಾರ ಅನುಮತಿಯೂ ಇಲ್ಲದೆ, ಇಡೀ

ಬಾಲಕಿಯರ ಸರ್ಕಾರಿ ಶಾಲೆಯಲ್ಲೊಂದು ‘ಕ್ಯೂಆರ್ ಕೋಡ್’ ಕರ್ಮಕಾಂಡ..! Read More »

ಬಿದ್ದಿದ್ದು ಕಾಂಪೌಂಡ್, ಉಳಿದಿದ್ದು ಹಳ್ಳದ ಸಮಾಧಿ!

​ಅಧಿಕಾರದ ಮದದಲ್ಲಿ ನಿಸರ್ಗದ ಉಸಿರು ಹಿಸುಕಿದ ಪಾಪಿಗಳ ಕಥೆ. ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:08 (ಸಂಚಿಕೆ-05) ಕೊಪ್ಪಳ: ಇದು ಅಧಿಕಾರದ ಮದದಲ್ಲಿ ನಿಸರ್ಗದ ಉಸಿರು ಹಿಸುಕಿದ ಪಾಪಿಗಳ ಕಥೆ. ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ಮತ್ತು ಅದರ ಪಕ್ಕದಲ್ಲಿ ಸರ್ಕಾರಿ ಹಳ್ಳವೊಂದನ್ನು ಮಣ್ಣು ಮಾಡಿ, ಅದರ ಮೇಲೆ ಅಕ್ರಮದ ಅರಮನೆ ಕಟ್ಟಲು ಹೊರಟ ಭೂಗಜಗಳ ಆಟಕ್ಕೆ ರಣಬೇಟೆ ವೆಬ್ ನ್ಯೂಸ್ ಇಟ್ಟ ಇತಿಶ್ರೀ ಇದು. ನಮ್ಮ ನಿರಂತರ ವರದಿಗಳ ಮಹಾ ಸ್ಪೋಟಕ್ಕೆ ಕೊನೆಗೂ ಎಚ್ಚೆತ್ತುಕೊಂಡ

ಬಿದ್ದಿದ್ದು ಕಾಂಪೌಂಡ್, ಉಳಿದಿದ್ದು ಹಳ್ಳದ ಸಮಾಧಿ! Read More »

ಸಮಾಧಿಯಾಗಿದ್ದ ಹಳ್ಳದ ಆರ್ತನಾದಕ್ಕೆ ಸಿಕ್ಕಿತು ಸಾಕ್ಷ್ಯದ ಬಲ.

ಬಸವರಾಜ್ ತೆನ್ನಳ್ಳಿ ಅವರೇ, ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಿ! ವಿಶೇಷ ತನಿಖಾ ವರದಿ: ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಮೇ:29 (ಸಂಚಿಕೆ-04) ಕೊಪ್ಪಳ : ಅಧಿಕಾರ, ದುಡ್ಡು ಮತ್ತು ರಾಜಕೀಯ ಮಸಲ್ ಪವರ್ ಇದ್ದರೆ ಈ ದೇಶದಲ್ಲಿ ಏನನ್ನು ಬೇಕಾದರೂ ನುಂಗಿ ನೀರು ಕುಡಿಯಬಹುದು ಅಂದುಕೊಂಡಿದ್ದಾರೆ ಕೆಲವು ಅಕ್ರಮಕೋರರು. ಕಣ್ಣೆದುರೇ ಹರಿಯುವ ನದಿ, ಹಳ್ಳ, ಕೆರೆಗಳನ್ನು ಮಣ್ಣು ಹಾಕಿ ಮುಚ್ಚಿ, ಅಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುವ ಲೇಔಟ್ ದಂಧೆಕೋರರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಅದಕ್ಕೆ ಜ್ವಲಂತ

ಸಮಾಧಿಯಾಗಿದ್ದ ಹಳ್ಳದ ಆರ್ತನಾದಕ್ಕೆ ಸಿಕ್ಕಿತು ಸಾಕ್ಷ್ಯದ ಬಲ. Read More »

“ಸಂಧಾನಕ್ಕೆ ಇಳಿದ ‘ಡಿಜಿಟಲ್ ಲಂಚಕೋರ’ ಭಯ್ಯ ಗ್ರೂಪ್‌ನಲ್ಲಿ ಹಾಕಬೇಡಿ, ಮಾತಾಡಿ ಕ್ಲಿಯರ್ ಮಾಡಿಕೊಳ್ಳೋಣ”

ಅಧಿಕಾರಿಗಳ ಆಪ್ತ ವಲಯದ ಕವಚದಲ್ಲಿ ಲೂಟಿ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ:21 (ಸಂಚಿಕೆ-02) ಕೂಕನೂರ: ಬಳಗೇರಿ ಗ್ರಾಮ ಪಂಚಾಯಿತಿಯ ಪಿಡಿಒ ಮಹೇಶ್ ಗೌಡ ನೀಲನಗೌಡ ಮಲ್ಲನಗೌಡ್ರ ಅವರ ಲಂಚದ ಡಿಜಿಟಲ್ ಪುರಾವೆಗಳು ಹೊರಬರುತ್ತಿದ್ದಂತೆ, ಅವರ ದರ್ಪ ಈಗ ‘ದೀನತೆ’ಯಾಗಿ ಬದಲಾಗಿದೆ! ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಗುತ್ತಿಗೆದಾರನಿಂದ ಲಕ್ಷಗಟ್ಟಲೆ ಹಣ ಕೀಳುವಾಗ ಇದ್ದ ಆ ಧೈರ್ಯ, ಈಗ ಸತ್ಯ ಜಗಜ್ಜಾಹೀರಾಗುತ್ತಿದ್ದಂತೆ ಮರೆಯಾಗಿದೆ. ಸುದ್ದಿ ಸದ್ದು ಮಾಡುತ್ತಿದ್ದಂತೆ, ಪಿಡಿಒ ಮಹೇಶಗೌಡ ಅವರು ನೇರವಾಗಿ ರಣಬೇಟೆ ಸಂಪಾದಕರಿಗೆ ಕರೆ

“ಸಂಧಾನಕ್ಕೆ ಇಳಿದ ‘ಡಿಜಿಟಲ್ ಲಂಚಕೋರ’ ಭಯ್ಯ ಗ್ರೂಪ್‌ನಲ್ಲಿ ಹಾಕಬೇಡಿ, ಮಾತಾಡಿ ಕ್ಲಿಯರ್ ಮಾಡಿಕೊಳ್ಳೋಣ” Read More »

“ಪಿಡಿಒ ಮಹೇಶ್ ಗೌಡರ ಭ್ರಷ್ಟಾಚಾರದ ‘ಡಿಜಿಟಲ್’ ಮುಖವಾಡ!”

ಬಳಗೇರಿ ಪಂಚಾಯಿತಿಯಲ್ಲಿ ನಡೆಯುತ್ತಿದೆ ಅಕ್ಷರಶಃ ಲೂಟಿ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ: 20 ಕೂಕನೂರ: ಇದು ಕೇವಲ ಒಂದು ಹಣಕಾಸಿನ ವರ್ಗಾವಣೆ ಅಲ್ಲ, ಇದು ಪಾರದರ್ಶಕ ಆಡಳಿತದ ಮುಖವಾಡ ಧರಿಸಿ ನಡೆಸಿದ ‘ಡಿಜಿಟಲ್ ಲೂಟಿ’ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮ ಪಂಚಾಯಿತಿಯ ಪಡಸಾಲೆಯಲ್ಲಿ ಕುಳಿತು, ತನ್ನ ಅಧಿಕಾರದ ಮದದಲ್ಲಿ ಮೆರೆಯುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಗೌಡ ನೀಲನಗೌಡ ಮಲ್ಲನಗೌಡ್ರ, ಇದೀಗ ಭ್ರಷ್ಟಾಚಾರದ ಮಸಿಯಲ್ಲಿ ಮೈ-ಕೈ ಮೆತ್ತಿಕೊಂಡಿದ್ದಾರೆ. ​ಅಧಿಕಾರದ ದರ್ಪಕ್ಕೆ ಡಿಜಿಟಲ್ ಹಣೆಪಟ್ಟಿ

“ಪಿಡಿಒ ಮಹೇಶ್ ಗೌಡರ ಭ್ರಷ್ಟಾಚಾರದ ‘ಡಿಜಿಟಲ್’ ಮುಖವಾಡ!” Read More »

ಹಣದ ಹಪಾಹಪಿಗೆ ಪ್ರಕೃತಿಯ ಕತ್ತು ಹಿಸುಕಿದ ಪಾಪಿಗಳ ಅಟ್ಟಹಾಸದ ಕಥೆ!

ರಣಬೇಟೆಯ ರಣಕಹಳೆಗೆ ಕೊನೆಗೂ ಮಣಿದು ಟೇಪು ಹಿಡಿಯ ಹೊರಟರೇ ‘ಮಹಾನ್’ ಭೂಮಾಪಕರು? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ:ಮೇ 18 (ಸಂಚಿಕೆ – 03) ಕೊಪ್ಪಳ: ಇದು ಕಾಸಿನ ಕಾಂಚಾಣಕ್ಕೆ ಪ್ರಕೃತಿಯ ಕತ್ತು ಸೀಳಿದವರ ಕಥೆ ಮಾತ್ರವಲ್ಲ, ಕಾನೂನಿನ ಕಣ್ಣಿಗೆ ಮಣ್ಣೆರಚಲು ಹೋದ ಮಾಫಿಯಾವನ್ನು ಸರಕಾರಿ ದಾಖಲೆಗಳೇ ಹೇಗೆ ಹೆಡೆಮುರಿ ಕಟ್ಟಿ ನಿಲ್ಲಿಸಿವೆ ಎಂಬುದರ ಜ್ವಲಂತ ಸಾಕ್ಷಿ! ಕೊಪ್ಪಳದ ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ರ ಜಮೀನಿನ ಪಕ್ಕದಲ್ಲಿ ನೈಸರ್ಗಿಕವಾಗಿ ಹರಿಯುತ್ತಿದ್ದ ಹಳ್ಳವನ್ನು ಮುಚ್ಚಿ, ಅಲ್ಲಿ ಅಕ್ರಮದ

ಹಣದ ಹಪಾಹಪಿಗೆ ಪ್ರಕೃತಿಯ ಕತ್ತು ಹಿಸುಕಿದ ಪಾಪಿಗಳ ಅಟ್ಟಹಾಸದ ಕಥೆ! Read More »

ಹಳ್ಳ ನುಂಗಿದ ‘ಭೂ’ ರಕ್ಕಸರಿಗೆ ಕಂದಾಯ ಇಲಾಖೆಯೇ ಕಾವಲು?

ರದ್ದಾದ ಭೂ ಪರಿವರ್ತನೆಗೆ ಆರ್.ಐ ಸುರೇಶ ನೀಡಿದರೇ ಮರುಜೀವ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ:14 (ಸಂಚಿಕೆ-02) ಕೊಪ್ಪಳ: ಇದು ಅಧಿಕಾರದ ಮದದಲ್ಲಿ ನಿಸರ್ಗದ ಉಸಿರು ಹಿಸುಕಿದ ಪಾಪಿಗಳ ಕಥೆ. ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ರ ಪಕ್ಕದಲ್ಲಿ ಹರಿಯುತ್ತಿದ್ದ ನೈಸರ್ಗಿಕ ಹಳ್ಳವೊಂದನ್ನು ಮಣ್ಣು ಮಾಡಿ, ಅದರ ಮೇಲೆ ಅಕ್ರಮದ ಅರಮನೆ ಕಟ್ಟಲು ಹೊರಟ ಭೂಗಜಗಳ ಅಸಲಿ ಮುಖವಾಡ ಈಗ ಕಳಚಿದೆ. ಸರ್ಕಾರಿ ಹಳ್ಳಕ್ಕೆ ಮಣ್ಣು ಮುಚ್ಚಿದ ‘ಭೂ’ ರಕ್ಕಸರ ಅಟ್ಟಹಾಸದ ಬೆನ್ನಲ್ಲೇ, ಈಗ ಕಂದಾಯ

ಹಳ್ಳ ನುಂಗಿದ ‘ಭೂ’ ರಕ್ಕಸರಿಗೆ ಕಂದಾಯ ಇಲಾಖೆಯೇ ಕಾವಲು? Read More »

error: Content is protected !!
Scroll to Top