ಕ್ರೈಂ

ಉಂಡು ಹೋದ, ಕೊಂಡು ಹೋದ ಸೋಮಶೇಖರ ಬಿರಾದಾರ್

ಮತ್ತೆ ಮಾತೃ ಇಲಾಖೆಗೆ ವರ್ಗಾವಣೆಯಾದ ಪಡಿತರ ದಂಧೆಯ ಬಿಗ್‍ಬಾಸ್ ಬಿರಾದಾರ್ ರಣಬೇಟೆ ನ್ಯೂಸ್ ಗಂಗಾವತಿ, ಆ.30: ಕಳೆದ ಮೂರು ದಿನಗಳ ಹಿಂದೆ ನಗರದ ಕನಕಗಿರಿ ರಸ್ತೆ ಬಳಿಯ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ವಶಪಡಿಸಿಕೊಂಡ ನೂರಾರು ಕ್ವಿಂಟಾಲ್ ಅಕ್ಕಿ ಪ್ರಕರಣದ ಹಿಂದೆ ಆಹಾರ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಮಾತುಗಳು ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗಳ ಹಾಗೂ ಪಡಿತರ ಅಕ್ಕಿ ಅಕ್ರಮ ದಂಧೆಕೋರರ ವಲಯದಲ್ಲಿ ಕೇಳಿಬರುತ್ತಿರುವ ಬಗ್ಗೆ ರಣಬೇಟೆ ವೆಬ್‍ನ್ಯೂಸ್ ವಿಸ್ತೃತ ವರದಿ ಮಾಡಿತ್ತು. ಈ ವರದಿಯನ್ನು […]

ಉಂಡು ಹೋದ, ಕೊಂಡು ಹೋದ ಸೋಮಶೇಖರ ಬಿರಾದಾರ್ Read More »

ಲಂಚದ ರೂಪದಲ್ಲಿ ಸಂಗ್ರಹಿಸಿದ ಅಕ್ಕಿ ಮಾರಲು ಹೋಗಿ ಸಿಕ್ಕಿಬಿದ್ದರಾ ಖದೀಮರು…?

ಡಿಡಿ ಸೋಮಶೇಖರ್ ಬಿರಾದಾರ್ ಅವರೇ ಈ ಪ್ರಕರಣದ ಬಿಗ್‍ಬಾಸಾ…!!? ರಣಬೇಟೆ ನ್ಯೂಸ್ ಗಂಗಾವತಿ.ಆ.29: ಕಳೆದ ಮೂರು ದಿನಗಳ ಹಿಂದೆ ನಗರದ ಕನಕಗಿರಿ ರಸ್ತೆ ಬಳಿಯ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ವಶಪಡಿಸಿಕೊಂಡ ನೂರಾರು ಕ್ವಿಂಟಾಲ್ ಅಕ್ಕಿ ಪ್ರಕರಣದ ಹಿಂದೆ ಆಹಾರ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಮಾತುಗಳು ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗಳ ಹಾಗೂ ಪಡಿತರ ಅಕ್ಕಿ ಅಕ್ರಮ ದಂಧೆಕೋರರ ವಲಯದಲ್ಲಿ ಕೇಳಿಬರುತ್ತಿದೆ. ಗಂಗಾವತಿ ನಗರದ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ದುಬೈ, ಯುಎಇ ಮೂಲದ ಖಾಸಗಿ

ಲಂಚದ ರೂಪದಲ್ಲಿ ಸಂಗ್ರಹಿಸಿದ ಅಕ್ಕಿ ಮಾರಲು ಹೋಗಿ ಸಿಕ್ಕಿಬಿದ್ದರಾ ಖದೀಮರು…? Read More »

ಕರ್ತವ್ಯಲೋಪ ಹಿನ್ನಲೆಯಲ್ಲಿ ಸಗಟು ಮಳಿಗೆ ವ್ಯವಸ್ಥಾಪಕ ಸೋಮಶೇಖರ ಅಮಾನತು

ರಣಬೇಟೆ ನ್ಯೂಸ್ ಗಂಗಾವತಿ, ಆ.27: ನಗರದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಗಟು ಮಳಿಗೆಯ ಕಿರಿಯ ಸಹಾಯಕ ಹಾಗೂ ವ್ಯವಸ್ಥಾಪಕ ಸೋಮಶೇಖರ ಅವರನ್ನು ಕರ್ತವ್ಯಲೋಪ ಹಾಗೂ ಬೇಜವಾಬ್ದಾರಿ ನಡೆ ಹಿನ್ನಲೆಯಲ್ಲಿ ಅಮಾನತುಗೊಳಿಸಿ ಕರ್ನಾಟಕ ಸೇವಾ ಆಯೋಗ ಪ್ರಧಾನ ವ್ಯವಸ್ಥಾಪಕ ಹಾಗೂ ಶಿಸ್ತು ಪ್ರಾಧಿಕಾರ ಅಧಿಕಾರಿ ಸಿ.ಎನ್.ಮಂಜುನಾಥ ಅವರು ಮಂಗಳವಾರದಂದು ಆದೇಶ ಹೊರಡಿಸಿದ್ದಾರೆ.2022ರ ಜೂನ್ 15ರಂದು ಗಂಗಾವತಿ ತಾಲೂಕಿನ ವಿದ್ಯಾನಗರ ಬಡಾವಣೆಯ ಗೌರಿಶಂಕರ ರೈಸ್‍ಮಿಲ್‍ನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದೆ ಎಂದು ಬಂದ

ಕರ್ತವ್ಯಲೋಪ ಹಿನ್ನಲೆಯಲ್ಲಿ ಸಗಟು ಮಳಿಗೆ ವ್ಯವಸ್ಥಾಪಕ ಸೋಮಶೇಖರ ಅಮಾನತು Read More »

ಪಡಿತರ ಲೋಕದ ಪಾಪಿಗಳು : 02

ನಮ್ಮ ಹಿಂದೆ ಅಧಿಕಾರಿಗಳ ದಂಡೇ ಇದೆ. ಇವರೇನು ಕಿತ್ತಿಕೊಳ್ಳುತ್ತಾರೆ:ವೀರನಾಗ ಸಿಂಗಂ ನಂತೆ ಅಬ್ಬರಿಸಿ, ಮಂಗಂ ನಂತಾದ ಸೋಮಶೇಖರ್ ಬಿರಾದರ್* ರಣಬೇಟೆ ನ್ಯೂಸ್ ಗಂಗಾವತಿ.ಆ.22: ಕಳೆದ ಒಂದು ತಿಂಗಳಿನಿಂದ ನಮ್ಮ ರಣಬೇಟೆ ವೆಬ್ ನ್ಯೂಸ್ ನಿರಂತರವಾಗಿ ಪಡಿತರ ದಂಧೆ ಕುರಿತಂತೆ ಸರಣಿ ವರದಿಗಳನ್ನು ಮಾಡುತ್ತಿದೆ. ವರದಿಯಿಂದ ಬೆಚ್ಚಿದ ದಂಧೆಕೋರರು ಕೆಲ ದಿನಗಳ ಮಟ್ಟಿಗೆ ದಂಧೆ ಸ್ಥಗಿತಗೊಳಿಸಿದ್ದರು. ನಂತರ ಆಹಾರ ಹಾಗೂ ಪೋಲಿಸ್ ಇಲಾಖೆಯ ಆಯಾ ಕಟ್ಟಿನ ಅಧಿಕಾರಿಗಳನ್ನು ಸಂತೃಪ್ತಿಗೊಳಿಸಿ ಮತ್ತೆ ತಮ್ಮ ದಂಧೆ ಆರಂಭಿಸಿದ್ದಾರೆ. ಕಾರಟಗಿ ಮೂಲದ ಪ್ರಮುಖ

ಪಡಿತರ ಲೋಕದ ಪಾಪಿಗಳು : 02 Read More »

ಪಡಿತರ ಲೋಕದ ಪಾಪಿಗಳ ಕಥೆ: ೦೧

ಬಡವರ ಪಡಿತರ ಅಕ್ಕಿ ಮಕ್ಕುತ್ತಿರುವ ಕಾಂಗ್ರೆಸ್ ಹುಳುಗಳು ಯಾರು..? ‌ ರಣಬೇಟೆ ನ್ಯೂಸ್ ಕೊಪ್ಪಳ.ಆ.20: ಬಡವರ ಪಾಲಿನ ಅಕ್ಕಿಯನ್ನು ಉಳ್ಳವರು ದೋಚಿಕೊಂಡು ಕೋಟಿ, ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ. ಸಾಲದೆಂಬಂತೆ ಇಲ್ಲಿ ದುಡಿದ ಹಡಬಿ ಹಣದಿಂದಲೇ ಜನಪ್ರತಿನಿಧಿಗಳ ಸಾಮೀಪ್ಯ ಸಾಧಿಸಿ ಸರ್ಕಾರಿ ಅಧಿಕಾರಿಗಳನ್ನು ತಮ್ಮ ನಿಯಂತ್ರಣ ದಲ್ಲಿಟ್ಟುಕೊಂಡು ಸರ್ವಾಧಿಕಾರಿಗಳಂತೆ ಮರೆಯುತ್ತಿದ್ದಾರೆ.ಪಡಿತರ ಅಕ್ಕಿ ಅಕ್ರಮ ದಂಧೆಯ ಜಾಲ ಅದೆಷ್ಟರ ಮಟ್ಟಿಗೆ ಬಲವಾಗಿ ಬೇರೂರಿದೆ ಎಂದರೆ, ಆಹಾರ ಇಲಾಖೆಯ ಅಧಿಕಾರಿಗಳು ಇವರ ತಂಟೆಗೆ ಹೋಗಲು ಹೆದರುತ್ತಾರೆ. ತಮಗೆ ಸಹಕಾರ ನೀಡುವ

ಪಡಿತರ ಲೋಕದ ಪಾಪಿಗಳ ಕಥೆ: ೦೧ Read More »

ತೆರೆಮರೆಯ ಹಿಂದೆ ನಡೆಯಿತಾ ಪ್ರಕರಣ ಮುಚ್ಚಿಹಾಕುವ ಷಡ್ಯಂತ್ರ..!?

ಕಾರಟಗಿ ರೈಸ್ ಮಿಲ್ ಮೇಲೆ ದಾಳಿ ನಡೆದು ವಾರ ಕಳೆದರೂ ದಾಖಲಾಗದ ಪ್ರಕರಣ ರಣಬೇಟೆ ನ್ಯೂಸ್ ಕೊಪ್ಪಳ.ಆ.16: ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ, ತಾವರಗೇರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಡಿತರ ಅಕ್ಕಿಯ ಕಳ್ಳ ದಂಧೆಯ ಕುರಿತಂತೆ ನಮ್ಮ ರಣಬೇಟೆ ವೆಬ್ ನ್ಯೂಸ್ ವಿಸ್ತೃತ ವರದಿ ಪ್ರಕಟಿಸಿತ್ತು. ಅದರ ಜಾಡು ಬೆನ್ನು ಹತ್ತಿದ ಬಳ್ಳಾರಿಯ ಐಜಿ ನೇತೃತ್ವದ ಪೊಲೀಸ್ ತಂಡ ಇತ್ತೀಚೆಗೆ ಕೆಲ ವಾರಗಳ ಹಿಂದೆ ಕಾರಟಗಿ ಹೊರವಲಯದ ಬೂದಗುಂಪಾ ರಸ್ತೆಯ ವ್ಹೇ ಬ್ರಿಜ್ ಸಮೀಪದ ರೈಸ್ ಮಿಲ್ ಒಂದರ

ತೆರೆಮರೆಯ ಹಿಂದೆ ನಡೆಯಿತಾ ಪ್ರಕರಣ ಮುಚ್ಚಿಹಾಕುವ ಷಡ್ಯಂತ್ರ..!? Read More »

ಕಾಮುಕರ ಖಾಯಂ ಅಡ್ಡೆಯಂತಾದ ವೃಕ್ಷ ಉದ್ಯಾನವನ

ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಹೆಸರಿನ ಉದ್ಯಾನವನದಲ್ಲಿ ಇದೆಂತಾ ಅಹಸ್ಯ..!‌ ರಣಬೇಟೆ ನ್ಯೂಸ್ ಕೊಪ್ಪಳ.ಆ.14: ತಾಲೂಕಿನ ರುದ್ರಾಪುರ, ಕಾಸನಕಂಡಿ ಸಮೀಪದ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಹೆಸರಿನ ಈ ವೃಕ್ಷ ಉದ್ಯಾನವನದಲ್ಲಿ ಬೆಳಂಬೆಳಿಗ್ಗೆ ನೀವೊಮ್ಮೆ ವಾಯು ವಿಹಾರಕ್ಕೆ ಹೋದರೆ ಹಸುರಿನ ವನಸಿರಿ ಕಾಣುವ ಬದಲು ಪ್ಲಾಸ್ಟಿಕ್, ಕಸ, ಮದ್ಯದ ಬಾಟಲಿ, ಪೌಚುಗಳ ಜತೆಗೆ ಕಾಂಡೋಮ್ ಗಳು ಅಹಸ್ಯವಾಗಿ ನಿಮ್ಮ ಕಣ್ಣಿಗೆ ರಾಚುತ್ತವೆ. ಪ್ರಕೃತಿಯ ಮಡಿಲಲ್ಲಿ ಬೆಳೆದ ಹೂ, ಬಳ್ಳಿ, ಗಿಡ, ಮರಗಳ ನಡುವೆ ಹದಿಹರೆಯದ

ಕಾಮುಕರ ಖಾಯಂ ಅಡ್ಡೆಯಂತಾದ ವೃಕ್ಷ ಉದ್ಯಾನವನ Read More »

ಮಿತಿಮೀರಿದ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಯಾವಾಗ…?

ಬಾರ್ ಗಳ ವಿರುದ್ದದ ದೂರುಗಳಿಗೆ ಕ್ಯಾರೇ ಎನ್ನದ ಅಬಕಾರಿ ಡಿಸಿ. ರಣಬೇಟೆ ನ್ಯೂಸ್ ಕೊಪ್ಪಳ.ಆ.08: ಕುಡುಕರಿಂದಲೇ ಸರಕಾರಗಳು ನಡೆಯುತ್ತವೆ ಎಂಬ ಮಾತು ಜನಜನೀತವಾಗಿದೆ. ಆದರೆ, ಮದ್ಯದ ಅಂಗಡಿಗಳಿಂದ ಸಂದಾಯವಾಗುವ ಮಾಮೂಲು ಹಾಗೂ ಕುಡುಕರ ತೆವಲಿನಿಂದಾಗಿ ಜಿಲ್ಲೆಯ ಒಂದು ವರ್ಗದ ಅಧಿಕಾರಿಗಳ ಬದುಕು ಬಂಗಾರವಾಗುತ್ತದೆ ಎಂದರೆ ನೀವು ನಂಬುತ್ತೀರಾ…? ಹೌದು, ನೀವು ನಂಬಲೇಬೇಕು. ತಾಲೂಕಿನ ಪ್ರತಿಯೊಂದು ಮದ್ಯದ ಅಂಗಡಿಯಿಂದ ಯಾವ ಯಾವ ಅಧಿಕಾರಿಗಳಿಗೆ ಎಷ್ಟೆಷ್ಟು ತಿಂಗಳ ಮಾಮೂಲು ಸಲ್ಲುತ್ತದೆ ಎಂಬ ವಿವರಗಳನ್ನು ಕೇಳಿದರೆ ನೀವೇ ದಂಗಾಗುತ್ತೀರಿ. ಇಲ್ಲಿದೆ ನೋಡಿ

ಮಿತಿಮೀರಿದ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಯಾವಾಗ…? Read More »

ನಗರದ ನಡು ಬೀದಿಯಲ್ಲೇ ಯುವಕನೊಬ್ಬನ ಬರ್ಬರ ಕೊಲೆ..!

ಪ್ರೇಮಪಾಶಕ್ಕೊಳಗಾದ ಯುವಕರ ನಡುವಿನ ದ್ವೇಷ ಕೊಲೆಯಲ್ಲಿ ಅಂತ್ಯ. ರಣಬೇಟೆ ನ್ಯೂಸ್‌ ಕೊಪ್ಪಳ .ಆ.04: ಯುವತಿಯೊಬ್ಬಳೊಂದಿಗಿನ ಪ್ರೇಮಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರ ನಡುವಿನ ದ್ವೇಷ ಭೀಕರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಭಾನುವಾರ ರಾತ್ರಿ ನಗರದಲ್ಲಿ ನಡೆದಿದೆ. ನಗರದ 3ನೇ ವಾರ್ಡಿನ ನಿರ್ಮಿತಿ ಕೇಂದ್ರದ ಬಳಿಯ ಮಸೀದಿ ಎದುರು 26 ವರ್ಷದ ಗವಿಸಿದ್ದಪ್ಪ ನಾಯಕ ಎಂಬ ಯುವಕನನ್ನು ಸಾದಿಕ್ ಎಂಬ ಯುವಕ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಪ್ರಕರಣದಲ್ಲಿ ಸಹಕಾರ ನೀಡಿದ

ನಗರದ ನಡು ಬೀದಿಯಲ್ಲೇ ಯುವಕನೊಬ್ಬನ ಬರ್ಬರ ಕೊಲೆ..! Read More »

ಹಲವು ಸಂಶಯಗಳನ್ನು ಹುಟ್ಟು ಹಾಕಿದ ರೈಸ್ ಮಿಲ್ ಮೇಲಿನ ದಾಳಿ ಪ್ರಕರಣ.

ಪ್ರಭಾವಿಗಳ ಕೈಚಳಕಕ್ಕೆ ಮರುಳಾಯ್ತಾ ಐಜಿ ನೇತೃತ್ವದ ಪೊಲೀಸ್ ತಂಡ…? ಕೊಪ್ಪಳ.ಆ.02: ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಡಿತರ ಅಕ್ಕಿಯ ಕಳ್ಳ ದಂಧೆಯ ಕುರಿತಂತೆ ನಮ್ಮ ರಣಬೇಟೆ ಪತ್ರಿಕೆಯು “ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ ಪಡಿತರ ಅಕ್ಕಿ ಕಳ್ಳರ ಅಬ್ಬರ”. “ಹೊಸ ಮುಖವಾಡ ತೊಟ್ಟು ಮತ್ತೆ ದಂಧೆಗಿಳಿದ ಹಳೆಯ ದಂಧೆಕೋರರು” ಎಂಬ ತಲೆಬರಹದಡಿ ವಿಸ್ತೃತ ಸುದ್ದಿಯೊಂದನ್ನು ಜುಲೈ 15ರಂದು ಪ್ರಕಟಿಸಿತ್ತು. ಸದ್ಯಕ್ಕೆ ಸುದ್ದಿ ಜಿಲ್ಲೆಯಾದ್ಯಂತ ಸಂಚಲನವನ್ನು ಸೃಷ್ಟಿಸಿತ್ತು. ಸಾಲದೆಂಬಂತೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಬಡಿದೆಬ್ಬಿಸಿತ್ತು. ಆದರೆ ಇತ್ತೀಚೆಗೆ

ಹಲವು ಸಂಶಯಗಳನ್ನು ಹುಟ್ಟು ಹಾಕಿದ ರೈಸ್ ಮಿಲ್ ಮೇಲಿನ ದಾಳಿ ಪ್ರಕರಣ. Read More »

error: Content is protected !!
Scroll to Top