ಕ್ರೈಂ

‘ನವಜೀವನ’ದ ಅಸಲಿ ಮುಖವಾಡ ಕಳಚಿದ ಸರ್ಕಾರಿ ದಾಖಲೆಗಳು!

ಪರವಾನಗಿ ಇಲ್ಲದ ‘ನವಜೀವನ’ಕ್ಕೆ ಅಭಯ ಹಸ್ತ; ರೋಗಿಗಳ ಪ್ರಾಣದ ಜೊತೆಗಿನ ಚೆಲ್ಲಾಟಕ್ಕೆ ಡಿ.ಎಚ್.ಓ ಲಿಂಗರಾಜ್ ಅವರೇ ನೇರ ಹೊಣೆ! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಫೆ:03 ಸತ್ತವರೂ ಎದ್ದು ಬಂದು ಓಡಾಡುತ್ತಾರೆ ಅಂದರೆ ನೀವು ನಂಬುತ್ತೀರಾ? ಇಲ್ಲ ತಾನೇ? ಆದರೆ ಕೊಪ್ಪಳದ ಆ ಹೊಸಪೇಟೆ ರಸ್ತೆಯ ಬ್ಯಾಂಕ್ ಆಫ್ ಬರೋಡಾ ಹಿಂದೆ ಇರುವ ಕಟ್ಟಡದಲ್ಲಿ ಇಂತಹದ್ದೊಂದು ಪವಾಡ ನಡೆಯುತ್ತಿದೆ! ಅಲ್ಲಿ ಸತ್ತಿರುವುದು ಮನುಷ್ಯನಲ್ಲ, ಬದಲಿಗೆ ಕಾನೂನು ಮತ್ತು ಆ ಆಸ್ಪತ್ರೆಯ ಪರವಾನಗಿ. ಆದರೂ ಅಲ್ಲಿ ‘ನವಜೀವನ’ದ ಹೆಸರಿನಲ್ಲಿ […]

‘ನವಜೀವನ’ದ ಅಸಲಿ ಮುಖವಾಡ ಕಳಚಿದ ಸರ್ಕಾರಿ ದಾಖಲೆಗಳು! Read More »

ಕೊಪ್ಪಳ ಜಿ.ಪಂ.ನ ಅಮಿನ್ ಅತ್ತಾರ್ ಸಾಮ್ರಾಜ್ಯದ ಅಸಲಿ ಆಟ!

ಮುಖ್ಯಲೆಕ್ಕಾಧಿಕಾರಿಯ ‘ಅಮರತ್ವದ’ ಗುಟ್ಟೇನು? ದಕ್ಷ ಅಧಿಕಾರಿ ವರ್ಣಿತ್ ನೇಗಿ ಮೌನವೇಕೆ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜ:01 ಅದು ಗವಿಸಿದ್ದೇಶ್ವರನ ಪವಿತ್ರ ಭೂಮಿ. ಆದರೆ ಅಲ್ಲಿನ ಜಿಲ್ಲಾ ಪಂಚಾಯತಿಯ ಕಾಂಪೌಂಡ್ ಒಳಗೆ ಸದ್ದಿಲ್ಲದೆ ಒಂದು ಅದೃಶ್ಯ ಸಾಮ್ರಾಜ್ಯವೊಂದು ತಲೆ ಎತ್ತಿ ನಿಂತಿದೆ. ಆ ಸಾಮ್ರಾಜ್ಯದ ಹೆಸರು ಅಮಿನ್ ಅತ್ತಾರ್! ಒಬ್ಬ ಅಧಿಕಾರಿ ಒಂದೇ ಜಿಲ್ಲೆಯ ಕೇಂದ್ರ ಕಚೇರಿಯಲ್ಲಿ, ಅಷ್ಟೂ ಹಣಕಾಸಿನ ಫೈಲುಗಳ ಮೇಲೆ ಕುಳಿತು ಎಷ್ಟು ದಿನ ರಾಜ್ಯಭಾರ ಮಾಡಬಹುದು? ಸರ್ಕಾರದ ನಿಯಮಗಳ ಪ್ರಕಾರ ಎರಡು-ಮೂರು ವರ್ಷಕ್ಕೆ

ಕೊಪ್ಪಳ ಜಿ.ಪಂ.ನ ಅಮಿನ್ ಅತ್ತಾರ್ ಸಾಮ್ರಾಜ್ಯದ ಅಸಲಿ ಆಟ! Read More »

ಲೂಟಿಕೋರರ ಗಾಡ್‌ಫಾದರ್ ಈಗ ಅಡ್ಮಿನಿಸ್ಟ್ರೇಷನ್ ಬಾಸ್!

ತಿಂಗಳು ಗತಿಸಿದರು ಒಂಬಡ್ಸ್‌ಪರ್ಸನ್ ಪತ್ರಕ್ಕೆ ಕಿಮ್ಮತ್ತಿಲ್ಲದ ಆಡಳಿತ ವೈಖರಿ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಡಿ:19 ಸಂಚಿಕೆ-2 ​ಕೊಪ್ಪಳ ಜಿಲ್ಲಾ ಪಂಚಾಯತ್ ಎನ್ನುವುದು ಈಗ ಅಕ್ಷರಶಃ ‘ಅಲಿಬಾಬಾ ಮತ್ತು 40 ಮಂದಿ ಕಳ್ಳರ’ ಅಡ್ಡೆಯಾಗಿ ಬದಲಾಗಿದೆ. ಇಲ್ಲಿ ಹಗರಣಗಳು ನಡೆಯುವುದು ಕಾಮನ್, ಆದರೆ ಆ ಹಗರಣ ಮಾಡಿದವರೇ ಈಗ ‘ನ್ಯಾಯ’ ಹೇಳುವ ಕುರ್ಚಿಯಲ್ಲಿ ಕುಳಿತಿರುವುದು ಈ ಜಿಲ್ಲೆಯ ದೌರ್ಭಾಗ್ಯ!​ಹಳೆಯ ‘ಯೋಜನಾ ನಿರ್ದೇಶಕ’ ಈಗಿನ ‘ಉಪ ಕಾರ್ಯದರ್ಶಿ’: ಟಿ. ಕೃಷ್ಣಮೂರ್ತಿ ಎಂಬ ಮಾಯಾವಿ!​ಈ ಇಡೀ ನರೇಗಾ ಲೂಟಿಯ ಅಸಲಿ

ಲೂಟಿಕೋರರ ಗಾಡ್‌ಫಾದರ್ ಈಗ ಅಡ್ಮಿನಿಸ್ಟ್ರೇಷನ್ ಬಾಸ್! Read More »

ಪ್ರಾಧಿಕಾರದ ಪ್ರತಿ ನೋಟಿನ ಮೇಲೆ ‘ಪಿ. ಯೋಗಾನಂದ’ನ ದುಷ್ಟ ಸಹಿ!

2023-24ರ KUDA ಆಡಿಟ್: ಇದು ವರದಿ ಅಲ್ಲ, ಭ್ರಷ್ಟರ ‘ಡೆತ್ ನೋಟ್’! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಡಿ:07 ಯಜಮಾನರೇ, ಈ ಕಥೆ ಕೇಳಿ ನಿಮ್ಮೊಳಗಿನ ಮನುಷ್ಯ ಮರುಗುತ್ತಾನೆ. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ (KUDA)ದ ಪಾವಿತ್ರ್ಯವನ್ನು ಮೂವರು ಸೇರಿ ಹೇಗೆ ಬಲಿಕೊಟ್ಟರು ನೋಡಿ! ಇದು ಬರೀ ಲೆಕ್ಕದ ಆಡಿಟ್ ವರದಿ ಅಲ್ಲ, ಇದು ಆ ಬಡ ಕೊಪ್ಪಳದ ಕಣ್ಣೀರಿನ ಕಡತ!​ಒಂದು ನಗರವನ್ನು ಕಟ್ಟಬೇಕೆಂಬ ಕನಸು ಕಂಡಿತ್ತು ಆ ಪ್ರಾಧಿಕಾರ. ಆದರೆ, ಅಲ್ಲಿ ಕುಳಿತವರ ಕಣ್ಣು ಬಿದ್ದಿದ್ದು ಕನಸಿನ ಮೇಲೆ

ಪ್ರಾಧಿಕಾರದ ಪ್ರತಿ ನೋಟಿನ ಮೇಲೆ ‘ಪಿ. ಯೋಗಾನಂದ’ನ ದುಷ್ಟ ಸಹಿ! Read More »

ಆಡಳಿತಕ್ಕೆ ‘ಕರ್ತವ್ಯ ಲೋಪ’ದ ಭೂತ 2020-24ರ ನರೇಗಾ ನರಕ!

ಸಿಇಒ ವರ್ಣಿತಾ ನೇಗಿ ಗಪ್‌ಚುಪ್! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಡಿ:03 ಇದು ಕೇವಲ ಕಥೆಯಲ್ಲ ಆಡಳಿತಕ್ಕೆ ಅಂಟಿದ ಕೊಳಕು ಕಲೆಯ ಗಬ್ಬು ವಾಸನೆ! ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ಒಂದು ‘ಬಾಂಬ್’ ಸಿಡಿದಿದೆ. ಅದು ಸಾಮಾನ್ಯ ಬಾಂಬ್ ಅಲ್ಲ, ಬಡವರ ಬದುಕಿಗೆ ಮೀಸಲಿಟ್ಟ ಕೋಟ್ಯಂತರ ರೂಪಾಯಿಗಳ ‘ನರೇಗಾ’ ಕಾಸಿಗೆ ಹೊತ್ತಿಕೊಂಡಿರುವ ನಗಾರಿ ಸದ್ದು!​ಕೇಸಿನ ಪ್ರಮುಖ ನಾಯಕ ಮುತ್ತು ದೊಡ್ಮನೆ ಸಾಮಾಜಿಕ ಕಾರ್ಯಕರ್ತ, ಆದರೆ ನಿಜಕ್ಕೂ ಆತ ನೀವು ಒದುತ್ತಿರುವ ಇದೇ ‘ರಣಬೆಟೆಯ’ ವೆಬ್‌ಸೈಟ್ ಸಂಪಾದಕ. ಇತನ ಕೈಗೆ

ಆಡಳಿತಕ್ಕೆ ‘ಕರ್ತವ್ಯ ಲೋಪ’ದ ಭೂತ 2020-24ರ ನರೇಗಾ ನರಕ! Read More »

ಕೊಪ್ಪಳ ಜಿಲ್ಲಾ ಪಂಚಾಯತಿಯ ‘ಉಪ’ ಹುದ್ದೆಯಲ್ಲಿ ಹುದುಗಿದ 10 ಸಾವಿರದ ‘ಚೀಪಿಸ್ಟ್ ಗೇಮ್’!

ಸರಕಾರಿ ಕಚೇರಿಯಲ್ಲಿ ‘ಮಾಯಾಲೋಕ’ದ ಆಟ ದಂಗೆ ಎದ್ದ ಪಿಡಿಓಗಳು! ರಣಬೇಟೆ ತನಿಖಾ ದಳ ಕೊಪ್ಪಳ ನಂ :28 ಕೊಪ್ಪಳ: ಮಹಾಭಾರತದಲ್ಲಿ ಕೃಷ್ಣ ಇದ್ದಂತೆ, ರಾಮಾಯಣದಲ್ಲಿ ರಾವಣ ಇದ್ದಂತೆ, ನಮ್ಮ ಸರಕಾರಿ ವ್ಯವಸ್ಥೆಯಲ್ಲಿ ಕೆಲ ‘ದೊಡ್ಡ ಬಾಬು’ಗಳಿರುತ್ತಾರೆ. ಇವರ ಕೈಯಲ್ಲಿ ಅಧಿಕಾರವೆಂಬ ಮದ್ದು! ಇವರ ಬಾಯಲ್ಲಿ ನಾಲಿಗೆ ಇರುವುದಿಲ್ಲ, ಬರೀ ‘ನಾಗರ ಹಾವಿನ ವಿಷ’ ಮಾತ್ರ! ಈ ಕಥೆ ಕೊಪ್ಪಳ ಜಿಲ್ಲಾ ಪಂಚಾಯತಿಯ ‘ಉಪ’ ಹುದ್ದೆಯಲ್ಲಿ ಕುಳಿತಿರುವ ಒಬ್ಬ ಮಹಾಶಯನ ಕರಾಳ ಕಥೆ.​ಕಳಿಸಿದ ವಸೂಲಿ ಫೋನ್! ಯಾರವನು ಆ ‘ಬ್ಲ್ಯಾಕ್‌ಮೇಲ್

ಕೊಪ್ಪಳ ಜಿಲ್ಲಾ ಪಂಚಾಯತಿಯ ‘ಉಪ’ ಹುದ್ದೆಯಲ್ಲಿ ಹುದುಗಿದ 10 ಸಾವಿರದ ‘ಚೀಪಿಸ್ಟ್ ಗೇಮ್’! Read More »

ಕಟ್ಟಿಗೆಹಳ್ಳಿ ನಕಲಿ ವೈದ್ಯನೋ? ಆಡಳಿತದ ಪಾಲುದಾರನೋ?

ಎಲೆಕ್ಟ್ರೋಪತಿ ಅಪಾಯಕಾರಿ ಚಿಕಿತ್ಸೆ ನಕಲಿ ವೈದ್ಯ ಜಾಲ ಜಿಲ್ಲಾಡಳಿತಕ್ಕೆ ಎಚ್ಚರಿಕೆ ಇಲ್ಲವೆ? ರಣಬೇಟೆ ತನಿಖಾ ದಳ ಕೊಪ್ಪಳ ನಂ:19 (ಸಂಚಿಕೆ-03) ಮುಸಲಾಪುರದ ನಕಲಿ ವೈದ್ಯಕೀಯ ಕೇಂದ್ರದಲ್ಲಿ ಅನಾಮಧೇಯ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ಬಸವರಾಜ ಕಟ್ಟಿಗೆಹಳ್ಳಿಹಕ್ಕಿಗೊಂದು ನ್ಯಾಯ ಎನ್ನುವ ಅಸಂಗತ ವ್ಯವಸ್ಥೆಯ ಕಥೆ. ಕೊಪ್ಪಳ ತಾಲೂಕಿನಲ್ಲಿ, ಸೂರ್ಯ-ಚಂದ್ರರಿರುವಷ್ಟೇ ಸತ್ಯವಾಗಿ, ಸುಮಾರು 250ಕ್ಕೂ ಹೆಚ್ಚು ‘ಕ್ವಾಕ್‌ ವೈದ್ಯರು’ ಆಡಳಿತಕ್ಕೆ ಗುಟ್ಟಾಗಿಯೇ ತಮ್ಮ ಅನಧಿಕೃತ ಆಸ್ಪತ್ರೆಗಳನ್ನು ತೆರೆದುಬಿಟ್ಟಿದ್ದಾರೆ. ಇವರೆಲ್ಲ ಎಲೆಕ್ಟ್ರೋಪತಿ ಎಂಬ ಅಪ್ರಮಾಣೀಕೃತ ಪದ್ಧತಿಯಲ್ಲಿ ರೋಗಿಗಳ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಕಥೆಯ ತಿರುವು

ಕಟ್ಟಿಗೆಹಳ್ಳಿ ನಕಲಿ ವೈದ್ಯನೋ? ಆಡಳಿತದ ಪಾಲುದಾರನೋ? Read More »

ಪಿಡಿಓ ವರ್ಗಾವಣೆ ‘ಮಿಥ್ಯ’ಗಳ ನಡುವೆ ಸತ್ಯದ ಹುಡುಕಾಟ!

ಆಯುಕ್ತರ ಕಛೇರಿಗೆ ತಲುಪಿದ ವರದಿ ಕೇವಲ ಕಾಗದದ ಗಿಳಿ ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ನಂ :13 ಕೊಪ್ಪಳ : ಕೆಲವು ದಿನಗಳ ಹಿಂದೆ, ಹಳ್ಳಿಯ ಹಾದಿಯಲ್ಲಿ ಹಾಯಾಗಿ ಓಡಾಡುತ್ತಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ಪಟ್ಟಿಯೊಂದು ಗಾಂಧಿನಗರದ ಕಡೆಗೆ ತರಲೆಬುದ್ಧಿಯ ಗಾಳಿಯಂತೆ ಹಾರಿತು. ರಾಜ್ಯದ ಆಡಳಿತ ಯಂತ್ರದಲ್ಲಿ ಏನೋ ಒಂದು “ದೊಡ್ಡ ಕ್ರಾಂತಿ” ಆಗುತ್ತಿದೆ ಎಂಬ ಸುದ್ದಿ ಹರಿಯಿತು. ಆದರೆ, ಕೃಷಿ ಮಾಡದೆಯೇ ಕಾಗದಪತ್ರಗಳ ಮೇಲೆ ಕೃಷಿ ಮಾಡುವ ನಮ್ಮ ಸರ್ಕಾರಿ ಕಛೇರಿಗಳ ಜಾಯಮಾನವೇ ಬೇರೆ ಇರಬೇಕಲ್ಲ?​ಈಗ

ಪಿಡಿಓ ವರ್ಗಾವಣೆ ‘ಮಿಥ್ಯ’ಗಳ ನಡುವೆ ಸತ್ಯದ ಹುಡುಕಾಟ! Read More »

‘ವೈದ್ಯಕೀಯ ಮಾಫಿಯಾ’ ಕೊಪ್ಪಳ ತಾಲೂಕಿನಲ್ಲಿ ನಕಲಿ ವೈದ್ಯರ ದರ್ಬಾರ್!

ಜಿಲ್ಲಾ ಆರೋಗ್ಯ ಇಲಾಖೆಯ ‘ಕಾಣದ ಕೈಗಳ’ ಕರಾಮತ್ತು! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ನಂ :12 (ಸಂಚಿಕೆ -02) ಕೊಪ್ಪಳ: ಜಿಲ್ಲೆಯ ಆರೋಗ್ಯ ಇಲಾಖೆಯ ಪಾರದರ್ಶಕ ಆಡಳಿತವು ಇಂದು ಅತಿದೊಡ್ಡ ಪ್ರಶ್ನಾರ್ಥಕ ಚಿಹ್ನೆಯ ಮುಂದೆ ನಿಂತಿದೆ. ತಾಲೂಕಿನಾದ್ಯಂತ ಎಲೆಕ್ಟ್ರೋಮಿಯೋಪತಿ ಹೆಸರಿನಲ್ಲಿ ಸುಮಾರು 100 ಕ್ಕೂ ಹೆಚ್ಚು ಅನಧಿಕೃತ ವೈದ್ಯರು ಯಾವುದೇ ಕೆಪಿಎಂಇ (KPME) ನೋಂದಣಿ ಇಲ್ಲದೆ ರಾಜಾರೋಷವಾಗಿ ಕ್ಲಿನಿಕ್‌ಗಳನ್ನು ನಡೆಸುತ್ತಿರುವ ಬಗ್ಗೆ ಹಲವಾರು ದೂರು ಬಂದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆರೋಗ್ಯ ಇಲಾಖೆಯ ಉನ್ನತ

‘ವೈದ್ಯಕೀಯ ಮಾಫಿಯಾ’ ಕೊಪ್ಪಳ ತಾಲೂಕಿನಲ್ಲಿ ನಕಲಿ ವೈದ್ಯರ ದರ್ಬಾರ್! Read More »

ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮದ ‘ಅಗ್ನಿ ಪರೀಕ್ಷೆ’

ಕೊಪ್ಪಳ ವಸತಿ ನಿಲಯಗಳಲ್ಲಿ ‘ಅನ್ನದಾನ’ಕ್ಕೆ ಕತ್ತರಿ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:04 (ಸಂಚಿಕೆ-06) ಕೊಪ್ಪಳ: ರಾಜ್ಯ ಮತ್ತು ಕೇಂದ್ರದ ಸಮ್ಮಿಲನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಮಕ್ಕಳಿಗೆ ವಿದ್ಯಾದಾನದ ಜೊತೆಗೆ ಅನ್ನದಾನ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಕೊಪ್ಪಳ ತಾಲೂಕಿನ ಕೆಲ ವಸತಿ ನಿಲಯಗಳ ವಾರ್ಡನ್‌ರ ಕೃತ್ಯಗಳಿಂದಾಗಿ ಅನ್ನಸಂತರ್ಪಣೆಯೇ ಚರ್ಚೆ ಗ್ರಾಸವಾಗಿದೆ. ​ಸರಕಾರವು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಬಿಡುಗಡೆ ಮಾಡಿದ ಪಿಡಿಎಸ್ (PDS) ಅಕ್ಕಿ ಮತ್ತು ಗೋಧಿಯನ್ನು ಭ್ರಷ್ಟಾಚಾರದ ಮಸಕು ಆವರಿಸಿದೆ ಎಂಬುದು ಸಾರ್ವಜನಿಕರ ಆಕ್ರೋಶದ ನುಡಿ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮದ ‘ಅಗ್ನಿ ಪರೀಕ್ಷೆ’ Read More »

error: Content is protected !!
Scroll to Top