ಕ್ರೈಂ

ಸಮಾಧಿಯಾಗಿದ್ದ ಹಳ್ಳದ ಆರ್ತನಾದಕ್ಕೆ ಸಿಕ್ಕಿತು ಸಾಕ್ಷ್ಯದ ಬಲ.

ಬಸವರಾಜ್ ತೆನ್ನಳ್ಳಿ ಅವರೇ, ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಿ! ವಿಶೇಷ ತನಿಖಾ ವರದಿ: ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಮೇ:29 (ಸಂಚಿಕೆ-04) ಕೊಪ್ಪಳ : ಅಧಿಕಾರ, ದುಡ್ಡು ಮತ್ತು ರಾಜಕೀಯ ಮಸಲ್ ಪವರ್ ಇದ್ದರೆ ಈ ದೇಶದಲ್ಲಿ ಏನನ್ನು ಬೇಕಾದರೂ ನುಂಗಿ ನೀರು ಕುಡಿಯಬಹುದು ಅಂದುಕೊಂಡಿದ್ದಾರೆ ಕೆಲವು ಅಕ್ರಮಕೋರರು. ಕಣ್ಣೆದುರೇ ಹರಿಯುವ ನದಿ, ಹಳ್ಳ, ಕೆರೆಗಳನ್ನು ಮಣ್ಣು ಹಾಕಿ ಮುಚ್ಚಿ, ಅಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುವ ಲೇಔಟ್ ದಂಧೆಕೋರರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಅದಕ್ಕೆ ಜ್ವಲಂತ […]

ಸಮಾಧಿಯಾಗಿದ್ದ ಹಳ್ಳದ ಆರ್ತನಾದಕ್ಕೆ ಸಿಕ್ಕಿತು ಸಾಕ್ಷ್ಯದ ಬಲ. Read More »

“ಸಂಧಾನಕ್ಕೆ ಇಳಿದ ‘ಡಿಜಿಟಲ್ ಲಂಚಕೋರ’ ಭಯ್ಯ ಗ್ರೂಪ್‌ನಲ್ಲಿ ಹಾಕಬೇಡಿ, ಮಾತಾಡಿ ಕ್ಲಿಯರ್ ಮಾಡಿಕೊಳ್ಳೋಣ”

ಅಧಿಕಾರಿಗಳ ಆಪ್ತ ವಲಯದ ಕವಚದಲ್ಲಿ ಲೂಟಿ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ:21 (ಸಂಚಿಕೆ-02) ಕೂಕನೂರ: ಬಳಗೇರಿ ಗ್ರಾಮ ಪಂಚಾಯಿತಿಯ ಪಿಡಿಒ ಮಹೇಶ್ ಗೌಡ ನೀಲನಗೌಡ ಮಲ್ಲನಗೌಡ್ರ ಅವರ ಲಂಚದ ಡಿಜಿಟಲ್ ಪುರಾವೆಗಳು ಹೊರಬರುತ್ತಿದ್ದಂತೆ, ಅವರ ದರ್ಪ ಈಗ ‘ದೀನತೆ’ಯಾಗಿ ಬದಲಾಗಿದೆ! ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಗುತ್ತಿಗೆದಾರನಿಂದ ಲಕ್ಷಗಟ್ಟಲೆ ಹಣ ಕೀಳುವಾಗ ಇದ್ದ ಆ ಧೈರ್ಯ, ಈಗ ಸತ್ಯ ಜಗಜ್ಜಾಹೀರಾಗುತ್ತಿದ್ದಂತೆ ಮರೆಯಾಗಿದೆ. ಸುದ್ದಿ ಸದ್ದು ಮಾಡುತ್ತಿದ್ದಂತೆ, ಪಿಡಿಒ ಮಹೇಶಗೌಡ ಅವರು ನೇರವಾಗಿ ರಣಬೇಟೆ ಸಂಪಾದಕರಿಗೆ ಕರೆ

“ಸಂಧಾನಕ್ಕೆ ಇಳಿದ ‘ಡಿಜಿಟಲ್ ಲಂಚಕೋರ’ ಭಯ್ಯ ಗ್ರೂಪ್‌ನಲ್ಲಿ ಹಾಕಬೇಡಿ, ಮಾತಾಡಿ ಕ್ಲಿಯರ್ ಮಾಡಿಕೊಳ್ಳೋಣ” Read More »

“ಪಿಡಿಒ ಮಹೇಶ್ ಗೌಡರ ಭ್ರಷ್ಟಾಚಾರದ ‘ಡಿಜಿಟಲ್’ ಮುಖವಾಡ!”

ಬಳಗೇರಿ ಪಂಚಾಯಿತಿಯಲ್ಲಿ ನಡೆಯುತ್ತಿದೆ ಅಕ್ಷರಶಃ ಲೂಟಿ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ: 20 ಕೂಕನೂರ: ಇದು ಕೇವಲ ಒಂದು ಹಣಕಾಸಿನ ವರ್ಗಾವಣೆ ಅಲ್ಲ, ಇದು ಪಾರದರ್ಶಕ ಆಡಳಿತದ ಮುಖವಾಡ ಧರಿಸಿ ನಡೆಸಿದ ‘ಡಿಜಿಟಲ್ ಲೂಟಿ’ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮ ಪಂಚಾಯಿತಿಯ ಪಡಸಾಲೆಯಲ್ಲಿ ಕುಳಿತು, ತನ್ನ ಅಧಿಕಾರದ ಮದದಲ್ಲಿ ಮೆರೆಯುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಗೌಡ ನೀಲನಗೌಡ ಮಲ್ಲನಗೌಡ್ರ, ಇದೀಗ ಭ್ರಷ್ಟಾಚಾರದ ಮಸಿಯಲ್ಲಿ ಮೈ-ಕೈ ಮೆತ್ತಿಕೊಂಡಿದ್ದಾರೆ. ​ಅಧಿಕಾರದ ದರ್ಪಕ್ಕೆ ಡಿಜಿಟಲ್ ಹಣೆಪಟ್ಟಿ

“ಪಿಡಿಒ ಮಹೇಶ್ ಗೌಡರ ಭ್ರಷ್ಟಾಚಾರದ ‘ಡಿಜಿಟಲ್’ ಮುಖವಾಡ!” Read More »

ಹಣದ ಹಪಾಹಪಿಗೆ ಪ್ರಕೃತಿಯ ಕತ್ತು ಹಿಸುಕಿದ ಪಾಪಿಗಳ ಅಟ್ಟಹಾಸದ ಕಥೆ!

ರಣಬೇಟೆಯ ರಣಕಹಳೆಗೆ ಕೊನೆಗೂ ಮಣಿದು ಟೇಪು ಹಿಡಿಯ ಹೊರಟರೇ ‘ಮಹಾನ್’ ಭೂಮಾಪಕರು? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ:ಮೇ 18 (ಸಂಚಿಕೆ – 03) ಕೊಪ್ಪಳ: ಇದು ಕಾಸಿನ ಕಾಂಚಾಣಕ್ಕೆ ಪ್ರಕೃತಿಯ ಕತ್ತು ಸೀಳಿದವರ ಕಥೆ ಮಾತ್ರವಲ್ಲ, ಕಾನೂನಿನ ಕಣ್ಣಿಗೆ ಮಣ್ಣೆರಚಲು ಹೋದ ಮಾಫಿಯಾವನ್ನು ಸರಕಾರಿ ದಾಖಲೆಗಳೇ ಹೇಗೆ ಹೆಡೆಮುರಿ ಕಟ್ಟಿ ನಿಲ್ಲಿಸಿವೆ ಎಂಬುದರ ಜ್ವಲಂತ ಸಾಕ್ಷಿ! ಕೊಪ್ಪಳದ ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ರ ಜಮೀನಿನ ಪಕ್ಕದಲ್ಲಿ ನೈಸರ್ಗಿಕವಾಗಿ ಹರಿಯುತ್ತಿದ್ದ ಹಳ್ಳವನ್ನು ಮುಚ್ಚಿ, ಅಲ್ಲಿ ಅಕ್ರಮದ

ಹಣದ ಹಪಾಹಪಿಗೆ ಪ್ರಕೃತಿಯ ಕತ್ತು ಹಿಸುಕಿದ ಪಾಪಿಗಳ ಅಟ್ಟಹಾಸದ ಕಥೆ! Read More »

ಹಳ್ಳ ನುಂಗಿದ ‘ಭೂ’ ರಕ್ಕಸರಿಗೆ ಕಂದಾಯ ಇಲಾಖೆಯೇ ಕಾವಲು?

ರದ್ದಾದ ಭೂ ಪರಿವರ್ತನೆಗೆ ಆರ್.ಐ ಸುರೇಶ ನೀಡಿದರೇ ಮರುಜೀವ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ:14 (ಸಂಚಿಕೆ-02) ಕೊಪ್ಪಳ: ಇದು ಅಧಿಕಾರದ ಮದದಲ್ಲಿ ನಿಸರ್ಗದ ಉಸಿರು ಹಿಸುಕಿದ ಪಾಪಿಗಳ ಕಥೆ. ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ರ ಪಕ್ಕದಲ್ಲಿ ಹರಿಯುತ್ತಿದ್ದ ನೈಸರ್ಗಿಕ ಹಳ್ಳವೊಂದನ್ನು ಮಣ್ಣು ಮಾಡಿ, ಅದರ ಮೇಲೆ ಅಕ್ರಮದ ಅರಮನೆ ಕಟ್ಟಲು ಹೊರಟ ಭೂಗಜಗಳ ಅಸಲಿ ಮುಖವಾಡ ಈಗ ಕಳಚಿದೆ. ಸರ್ಕಾರಿ ಹಳ್ಳಕ್ಕೆ ಮಣ್ಣು ಮುಚ್ಚಿದ ‘ಭೂ’ ರಕ್ಕಸರ ಅಟ್ಟಹಾಸದ ಬೆನ್ನಲ್ಲೇ, ಈಗ ಕಂದಾಯ

ಹಳ್ಳ ನುಂಗಿದ ‘ಭೂ’ ರಕ್ಕಸರಿಗೆ ಕಂದಾಯ ಇಲಾಖೆಯೇ ಕಾವಲು? Read More »

ಸದ್ದಿಲ್ಲದೆ ಸಮಾಧಿಯಾದ ಸರ್ಕಾರಿ ಹಳ್ಳ!

ದದೇಗಲ್ ಭೂಗಳ್ಳರ ‘ಸದ್ದಿಲ್ಲದ’ ಸಾಮ್ರಾಜ್ಯಕ್ಕೆ ಸಿದ್ದರಾಮೇಶ್ವರರ ಸಿಡಿಲು! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಏ:13 ಸಂಚಿಕೆ- 01 ಕೊಪ್ಪಳ: ಇದು ಹಣದ ಹಪಾಹಪಿಗೆ ಬಿದ್ದು ನಿಸರ್ಗದ ಕತ್ತು ಹಿಸುಕಿದ ಪಾಪಿಗಳ ಕಥೆ. ಅಧಿಕಾರದ ಮದ ಮತ್ತು ಕಾಂಕ್ರೀಟ್ ಗೋಡೆಗಳ ನಡುವೆ ಸರ್ಕಾರಿ ಹಳ್ಳವೊಂದನ್ನು ಸಮಾಧಿ ಮಾಡಿ, ಅದರ ಮೇಲೆ ರಕ್ತಸಿಕ್ತ ಲಾಭದ ಬಡಾವಣೆ ಕಟ್ಟಲು ಹೊರಟ ಭೂಗಜಗಳ ಕರಾಳ ಮುಖವಾಡ ಈಗ ಕಳಚಿದೆ. ಕೊಪ್ಪಳ ಜಿಲ್ಲೆಯ ದದೇಗಲ್ ಗ್ರಾಮದ ಸರ್ವೆ ನಂಬರ್ 69/ ಹಿಸ್ಸಾ 03 ರ

ಸದ್ದಿಲ್ಲದೆ ಸಮಾಧಿಯಾದ ಸರ್ಕಾರಿ ಹಳ್ಳ! Read More »

ತುಂಗಭದ್ರೆಯ ಒಡಲು ಬಗೆಯುತ್ತಿರುವ ರಣಹದ್ದುಗಳು!”

ಹಿಟಾಚಿಗಳ ಅಬ್ಬರಕ್ಕೆ ನಲುಗಿದ ಅಣೆಕಟ್ಟು ಕೆರೆಗಳನ್ನು ನುಂಗಿದವರಿಗೆ ಡ್ಯಾಮ್ ಯಾವ ಲೆಕ್ಕ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಏ:28 ಅಲ್ಲಿ ತುಂಗಭದ್ರೆ ಮೌನವಾಗಿ ಬತ್ತುತ್ತಿದ್ದಾಳೆ. ಆದರೆ ಆ ಮೌನದ ಹಿಂದೆ ಒಂದು ಭೀಕರವಾದ ಕಿರುಚಾಟವಿದೆ. ಅದು ಈ ಮಣ್ಣಿನ ಮಕ್ಕಳ ಅಳಲು. ಕೊಪ್ಪಳ ಮತ್ತು ಗಂಗಾವತಿಯ ಅಕ್ಕಪಕ್ಕದ ಇಟ್ಟಿಗೆ ಬಟ್ಟಿಗಳಿಗೆ ಬಿಸಿಯಾದ ಇಟ್ಟಿಗೆಗಳಾಗಲು ತುಂಗಭದ್ರಾ ಡ್ಯಾಮಿನ ಗರ್ಭದೊಳಗಿನ ಫಲವತ್ತಾದ ಮಣ್ಣು ಬಲಿಯಾಗುತ್ತಿದೆ. ಹಗಲು ದರೋಡೆ ಅಂದರೆ ಇದೇ ಇರಬೇಕು! ಮೊದಲು ಊರಿನ ಮುಗ್ಧ ಜನರಿಗೆ ಒಂದಿಷ್ಟು ಹಣದ

ತುಂಗಭದ್ರೆಯ ಒಡಲು ಬಗೆಯುತ್ತಿರುವ ರಣಹದ್ದುಗಳು!” Read More »

ಕೊಪ್ಪಳದ ‘ಇಬ್ಬನಿ’ ಹಗರಣ ಭಾಗ – 2

​”ನಾಯಕರೇ… ಅಕ್ರಮಕ್ಕೆ ಬೆಂಗಾವಲಾಗಬೇಡಿ, ಜನರ ನಂಬಿಕೆ ಉಳಿಸಿಕೊಳ್ಳಿ!” ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಏ:23 ಬೆಳ್ಳಂಬೆಳಗ್ಗೆ ಮೈಮನ ತಣಿಸುವ ಇಬ್ಬನಿ ಸೂರ್ಯ ಬಂದ ಮೇಲೆ ಮಾಯವಾಗುವುದು ಪ್ರಕೃತಿ ನಿಯಮ. ಆದರೆ ಕೊಪ್ಪಳದ ಮಗ್ಗಲಲ್ಲಿ ಬೀಳುತ್ತಿರುವ ಈ ‘ಇಬ್ಬನಿ’ ಹಗಲು ಹೊತ್ತಿನಲ್ಲೇ ಜನರ ಕಣ್ಣಿಗೆ ಮಣ್ಣೆರಚುತ್ತಿದೆ. ಇದು ರಿಯಲ್ ಎಸ್ಟೇಟ್ ವ್ಯವಹಾರವಲ್ಲ ಬಾಸ್‌, ಇದು ಬಡವನ ಬೆವರಿನ ಹಣವನ್ನು ‘ಅಧಿಕಾರ’ದ ಪಡಸಾಲೆಯಲ್ಲಿ ಹೋಮ ಮಾಡುತ್ತಿರುವ ವ್ಯವಸ್ಥಿತ ಸಂಚು! ಹಿಂದಿನ ಸಂಚಿಕೆಯಲ್ಲಿ ನಾವು ನೋಡಿದಂತೆ…ಟಣಕನಕಲ್ ಗ್ರಾಮದ ಆ 47 ಎಕರೆ

ಕೊಪ್ಪಳದ ‘ಇಬ್ಬನಿ’ ಹಗರಣ ಭಾಗ – 2 Read More »

ಶಿಸ್ತುಕ್ರಮಕ್ಕೆ ಸಿಇಒ ಹಿಂದೇಟು ಭ್ರಷ್ಟರಿಗೆ ಆನೆಬಲ ತಂದಿದೆಯೇ?

ಬಡವರ ಹೊಟ್ಟೆಗೆ ಕನ್ನ.. ಭ್ರಷ್ಟರ ಜೇಬಿಗೆ ‘ಪೂಜಾರ್’ ಸಾಕ್ಷಾತ್ಕಾರ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮಾ:10 ಸಂಚಿಕೆ -02 ನೋಡಿ, ಇದು ನಮ್ಮ ಹೆಮ್ಮೆಯ ಕೊಪ್ಪಳ ಜಿಲ್ಲಾ ಪಂಚಾಯತಿಯ ಅಸಲಿ ಮುಖವಾಡ. ಕುಕನೂರು ತಾಲೂಕಿನ ಹನ್ನೆರಡು ಗ್ರಾಮ ಪಂಚಾಯತಿಗಳಲ್ಲಿ ಬಡವರ ಹೊಟ್ಟೆಗೆ ಬೀಳಬೇಕಿದ್ದ ‘ನರೇಗಾ’ ಕಾಸು ಹೇಗೆ ಲೂಟಿಯಾಗಿದೆ ಅನ್ನೋದನ್ನ ‘ರಣಬೇಟೆ’ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಹಿರೇಬಿಡನಾಳದಿಂದ ಬೆನಕಲ್‌ವರೆಗೆ, ಯರೇಹಂಚಿನಾಳದಿಂದ ತಳಕಲ್‌ವರೆಗೆ ಹರಡಿರುವ ಈ ಭ್ರಷ್ಟಾಚಾರದ ಜಾಲ ಅಂತಿಂತದ್ದಲ್ಲ. ಇದು ಬರೋಬ್ಬರಿ ನಾಲ್ಕು ವರ್ಷಗಳ (2020-24) ಆಡಿಟ್ ವರದಿಯಲ್ಲಿ

ಶಿಸ್ತುಕ್ರಮಕ್ಕೆ ಸಿಇಒ ಹಿಂದೇಟು ಭ್ರಷ್ಟರಿಗೆ ಆನೆಬಲ ತಂದಿದೆಯೇ? Read More »

ಚಿಂಚೋಳಿಕರ್ ಹಾದಿಯಲ್ಲಿ ಅನಿಲ್ ಪಾಟೀಲ್..!

ಅನಿಲ್ ಪಾಟೀಲ್ ಕರಾಮತ್ತು ತಿಂಗಳಲ್ಲೇ ತೀರಿಕೊಂಡ ರಸ್ತೆ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮಾ:10 ನೋಡಿ ಇಲ್ಲಿ… ಚಿತ್ರಗಳಲ್ಲಿ ಕಾಣುತ್ತಿದೆಯಲ್ಲಾ ಆ ರಸ್ತೆ, ಅದು ಕಾಮಗಾರಿ ಮುಗಿದು ಕೇವಲ ಕೆಲವೇ ತಿಂಗಳುಗಳ ಹಸುಗೂಸು. ಆದರೆ ಆ ಹಸುಗೂಸು ಈಗಲೇ ಮುದಿಯಾಗಿದ್ದು ಸಾಲದೆಂಬಂತೆ ಅಲ್ಲಲ್ಲಿ ಬಿರುಕು ಬಿಟ್ಟು ತನ್ನ ಅಸ್ಥಿಪಂಜರವನ್ನು ಪ್ರದರ್ಶಿಸುತ್ತಿದೆ. ಸಿಮೆಂಟ್ ಮತ್ತು ಮರಳಿನ ಆ ಅಕ್ರಮ ಸಂಬಂಧದಲ್ಲಿ ಹುಟ್ಟಿದ ಈ ರಸ್ತೆ, ಲಂಚದ ಹಸಿವಿಗೆ ಬಲಿಯಾದ ಜೀವಂತ ಸಾಕ್ಷಿಯಂತೆ ಕಾಣುತ್ತಿದೆ. ​ಹಳೆಯ ‘ಘಟಾನುಘಟಿ’ಗಳ ಹಾದಿಯಲ್ಲೇ ಇಂದಿನ

ಚಿಂಚೋಳಿಕರ್ ಹಾದಿಯಲ್ಲಿ ಅನಿಲ್ ಪಾಟೀಲ್..! Read More »

error: Content is protected !!
Scroll to Top