ಆಡಳಿತಕ್ಕೆ ‘ಕರ್ತವ್ಯ ಲೋಪ’ದ ಭೂತ 2020-24ರ ನರೇಗಾ ನರಕ!

ಸಿಇಒ ವರ್ಣಿತಾ ನೇಗಿ ಗಪ್‌ಚುಪ್!

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಡಿ:03

ಇದು ಕೇವಲ ಕಥೆಯಲ್ಲ ಆಡಳಿತಕ್ಕೆ ಅಂಟಿದ ಕೊಳಕು ಕಲೆಯ ಗಬ್ಬು ವಾಸನೆ! ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ಒಂದು ‘ಬಾಂಬ್’ ಸಿಡಿದಿದೆ. ಅದು ಸಾಮಾನ್ಯ ಬಾಂಬ್ ಅಲ್ಲ, ಬಡವರ ಬದುಕಿಗೆ ಮೀಸಲಿಟ್ಟ ಕೋಟ್ಯಂತರ ರೂಪಾಯಿಗಳ ‘ನರೇಗಾ’ ಕಾಸಿಗೆ ಹೊತ್ತಿಕೊಂಡಿರುವ ನಗಾರಿ ಸದ್ದು!
​ಕೇಸಿನ ಪ್ರಮುಖ ನಾಯಕ ಮುತ್ತು ದೊಡ್ಮನೆ ಸಾಮಾಜಿಕ ಕಾರ್ಯಕರ್ತ, ಆದರೆ ನಿಜಕ್ಕೂ ಆತ ನೀವು ಒದುತ್ತಿರುವ ಇದೇ ‘ರಣಬೆಟೆಯ’ ವೆಬ್‌ಸೈಟ್ ಸಂಪಾದಕ. ಇತನ ಕೈಗೆ ಸಿಕ್ಕಿದ್ದು ನಾಲ್ಕು ವರ್ಷಗಳ ‘ಆಡಿಟ್ ವರದಿ’. ಆ ವರದಿಯಲ್ಲಿನ ಅಂಕಿ-ಅಂಶಗಳು ಹೇಳುತ್ತಿವೆ: 2020 ರಿಂದ 2024ರವರೆಗೆ ಕುಕನೂರು ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳು – ಹಿರೇಬಿಡನಾಳ, ಕುದುರಿಮೋತಿ, ಮಂಡಲಗೇರಿ, ಮಂಗಳೂರು, ಮಸಾಬಹಂಚಿನಾಳ, ಇಟಗಿ, ರಾಜೂರ, ಯಾರೇಹಂಚಿನಾಳ, ತಳಕಲ್, ಶಿರೂರು, ಬಾಣಾಪುರ, ಬೆನಕಲ್ – ಗ್ರಾಮಪಂಚಾಯತಿಗಳ ಲೂಟಿ!


ಒಂಬಡ್ಸ್‌ಪರ್ಸನ್ ಕೋರ್ಟ್‌ನಲ್ಲಿ ‘ಗರ್ಜನೆ’!
​ದೊಡ್ಮನೆ ನೇರವಾಗಿ ‘ಒಂಬಡ್ಸ್‌ಪರ್ಸನ್’ ರವರಿಗೆ ದೂರು ಸಲ್ಲಿಸಿದ್ದ. ಆರೋಪ ಒಂದೇ: ನರೇಗಾ ಯೋಜನೆ ಅಡಿಯಲ್ಲಿ ಲೆಕ್ಕಪರಿಶೋಧನೆ ವರದಿಯಂತೆ ಜಮಾ ಮಾಡಬೇಕಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಸರ್ಕಾರಕ್ಕೆ ‘ತಿಳುವಳಿ ಮಾಡದೆ’ ವಂಚಿಸಲಾಗಿದೆ! ಇದು ಬಡವರ ಬದುಕಿನ ರಕ್ತ ಕುಡಿದಷ್ಟು ಕರಾಳ ಕೃತ್ಯ.
​ಒಂಬಡ್ಸ್‌ಪರ್ಸನ್ ಕಚೇರಿಯಿಂದ ಮೂರು-ಮೂರು ಪತ್ರಗಳು ಹಾರಿಬಂದವು. ಆದರೆ ಈ ಹನ್ನೆರಡು ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ದೇವತೆ/ದೇವರುಗಳಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಕ್ಷರಶಃ ‘ಕೋಮಾ’ ಸ್ಥಿತಿಗೆ ಜಾರಿದ್ದಾರೆ. ಒಂದು ಅಕ್ಷರ ಕೂಡ ಪ್ರತ್ಯುತ್ತರ ಕೊಡಲಿಲ್ಲ!
​’ಸಿಇಒಗೆ ವರ್ಣಿತ ನೇಗಿ’ಗೆ ಬಂದ ಪತ್ರ ಸುಡುತ್ತಿದೆ ಬಿಸಿ!
ಪ್ರತ್ಯುತ್ತರ ಕೊಡದ ಈ PDO ಗಳೆಲ್ಲ ‘ಕರ್ತವ್ಯ ಲೋಪ’ ಎಸಗಿದ್ದಾರೆಂದು ಪರಿಗಣಿಸಿ, ದಿನಾಂಕ 20.11.2025 ರಂದು ಸ್ವತಃ ಒಂಬಡ್ಸ್‌ಪರ್ಸನ್ ಕಚೇರಿಯಿಂದ ಕೊಪ್ಪಳ ಜಿಲ್ಲಾ ಪಂಚಾಯತ್‌ನ CEO, ವರ್ಣಿತ ನೇಗಿ ಅವರ ಟೇಬಲ್‌ಗೆ ಬಂದು ‘ಬಿಸಿ’ ಪತ್ರ ಬಿದ್ದಿವೆ. ಪತ್ರದ ಹಿಂದಿನ ಶಕ್ತಿ – ಆಯುಕ್ತರು ಗ್ರಾ. ಅ. ಪಂ. ರಾ. ಇವರ ಪತ್ರ (No. RBC-EGS/282//2023/(E1093213)DATE18.08.2023) ಕೈ ಕಟ್ಟಿ ಕೂರಬೇಡಿ! ಈ ಕರ್ತವ್ಯ ಲೋಪಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ!”
‘ರಣಬೇಟೆ’ ಎಚ್ಚರಿಕೆ ಕೊಟ್ಟರೂ ನಿದ್ದೆಗೆ ಜಾರಿದ ಸಿಇಒ!
​ಇಡೀ ಆಡಳಿತವೇ ‘ಆಪರೇಷನ್’ ಟೇಬಲ್ ಮೇಲೆ ಇದ್ದಂತೆ! ಪತ್ರ ಬಿದ್ದು ಒಂದು ವಾರಕ್ಕೂ ಹೆಚ್ಚು ಸಮಯ ಆಗಿದೆ. ಆದರೆ ವರ್ಣಿತ ನೇಗಿ ಅವರ ಆಡಳಿತದಿಂದ ಇಲ್ಲಿಯವರೆಗೆ ಒಂದು ಸಣ್ಣ ‘ಅಲುಗಾಟ’ ಕೂಡ ಆಗಿಲ್ಲ!
ಈ ಹಿಂದೆ ಇದೇ ‘ರಣಬೆಟೆ’ ವೆಬ್ ನ್ಯೂಸ್‌ನಲ್ಲಿ ಕೊಪ್ಪಳ ಜಿಲ್ಲಾ ಪಂಚಾಯಿತಿಯ ಸಾಲು-ಸಾಲ ವರದಿಗಳನ್ನು ಬರೆದಿದ್ದರೂ ಕೂಡ, ಸಿಇಒ ವರ್ಣಿತ ನೇಗಿಯವರು ಕಣ್ಣು ತೆರೆಯಲಿಲ್ಲ! ಮಂದ ಆಡಳಿತದಿಂದ ವ್ಯವಸ್ಥೆ ಸಂಪೂರ್ಣ ಜಡವಾಗಿ ಹೋಗಿದೆ. ಈ ಕಣ್ಣು, ಕಿವಿ ಇಲ್ಲದ ಅಧಿಕಾರಿಗಳಿಂದ ಆಡಳಿತ ಎನ್ನುವುದು ಅಕ್ಷರಶಃ ‘ಕಾಲಿಗೆ ಕಟ್ಟಿದ ಕಲ್ಲು’ ಆಗಿಬಿಟ್ಟಿದೆ.
​ಇದು ‘ಆಡಳಿತದ ಲೋಪ’ ಅಲ್ಲ, ಸರ್. ಇದು ನಿಮ್ಮ ಆಡಳಿತದ ಅಕ್ಷಮ್ಯ ಅಪರಾಧ! ಬಡವರಿಗೆ ಸಿಗಬೇಕಾದ ಕೋಟಿ ಕಾಸು ಕಳ್ಳರ ಪಾಲಾಗುತ್ತಿದ್ದರೆ, ‘ಚೌಕಿದಾರರು’ ಕಣ್ಣು ಮುಚ್ಚಿ ಕುಳಿತಿದ್ದಾರೆ.
ಈ ಲೂಟಿಯ ಸುಳಿವು ನೀಡಿದ ಮೇಲೆ, ಕನಿಷ್ಠ ಈ ಘಟನೆಯಾದರೂ ಸಿಇಒ ನೇಗಿಯವರ ಕಣ್ಣು ತೆರೆಸಲಿ. ಈ ಜಡತ್ವವನ್ನು ಕಳಚಿ, ಸರಿ ದಾರಿಯಲ್ಲಿ ಆಡಳಿತ ನಡೆಸಲಿ ಎಂಬುದು ‘ರಣಬೆಟೆ’ಯ ಈ ಬ್ರೇಕಿಂಗ್ ನ್ಯೂಸ್‌ನ ಆಶಯ. ಇಲ್ಲವಾದರೆ, ಬಡವರ ಬದುಕಿನ ಈ ರಕ್ತಪಾತಕ್ಕೆ ಆಡಳಿತವೇ ಹೊಣೆಯಾಗುತ್ತದೆ!

error: Content is protected !!
Scroll to Top