ಸುದ್ದಿ ಮನೆ

ಮುಸಲಾಪುರದ ಕಪಟ ವೈದ್ಯನ ದುರಾಚಾರ: DHO ಡಾ. ಲಿಂಗರಾಜು ರವರ ‘ದಂಡಾಧಿಕಾರ’ ಎಲ್ಲಿದೆ?

ಕಳ್ಳ ವೈದ್ಯನ ಅನಧಿಕೃತ ವೃತ್ತಿ: ಕೊಪ್ಪಳ DHO ರವರ ‘ನಿಷ್ಕ್ರಿಯತೆ’ ಜೀವಕ್ಕೆ ಕುತ್ತು! ಕೆಪಿಎಂಇ ಕಾಯ್ದೆಯು ಈ ‘ಪ್ರಮಾದ’ಕ್ಕೆ ಸಮ್ಮತಿಸುವುದೇ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:31 ಆರ್ಥಿಕ ಲಾಭಾಂಶದ ಉದ್ದೇಶದಿಂದ ಅಮಾಯಕ ಸಾಮಾನ್ಯ ಜನರ ಜೀವದ ಮೇಲೆ ದುರಾಚಾರ ನಡೆಸುತ್ತಿದ್ದ ಅರ್ಹತಾಹೀನ ವ್ಯಕ್ತಿಯೋರ್ವನ ಘೋರ ಕೃತ್ಯವು ಕೊಪ್ಪಳ ಜಿಲ್ಲೆಯಲ್ಲಿ ಬಹಿರಂಗಕ್ಕೆ ಬಂದಿದೆ. ಈ ಕಪಟ ವೈದ್ಯನ ಹೆಸರು ಬಸವರಾಜ ಕಟಗಿಹಳ್ಳಿ. ​ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ರವರ ಕಟ್ಟುನಿಟ್ಟಿನ ನಿರ್ವಹಣೆಯ ಜವಾಬ್ದಾರಿಯ […]

ಮುಸಲಾಪುರದ ಕಪಟ ವೈದ್ಯನ ದುರಾಚಾರ: DHO ಡಾ. ಲಿಂಗರಾಜು ರವರ ‘ದಂಡಾಧಿಕಾರ’ ಎಲ್ಲಿದೆ? Read More »

ಗಲಗಲಿ ಸಾರಥ್ಯದಲ್ಲಿ ಗಲ್ಲಿಗಲ್ಲಿಗಳಲ್ಲೂ ಮದ್ಯ ಅಕ್ರಮ ಮಾರಾಟ

ಸಂಕ್ರಾಮಿಕ ರೋಗ ಹರಡುವ ತಾಣಗಳಾದ CL-2 ಮದ್ಯದ ಅಂಗಡಿಗಳು ರಣಬೇಟೆ ವೆಬ್‌ ಡೆಸ್ಕ್‌ ಕೊಪ್ಪಳ ಅ:13 (ಸಂಚಿಕೆ-04) ಕೊಪ್ಪಳ ನಗರದಲ್ಲಿ ಪರವಾನಗಿ ಹೊಂದಿದ ಮದ್ಯದ ಅಂಗಡಿಗಳು ಕರ್ನಾಟಕ ಅಬಕಾರಿ ಕಾಯ್ದೆ, 1965ರ ನಿಯಮಗಳನ್ನು ಉಲ್ಲಂಘಿಸಿ ಭರ್ಜರಿ ವಹಿವಾಟು ನಡೆಸುತ್ತಿವೆ. ನಗರದಲ್ಲಿ CL-2 ಪರವಾನಗಿ ಹೊಂದಿದ ಆಯಾಕಟ್ಟಿನಲ್ಲಿ ಇರುವ ಈಶ್ವರ್, ದೇವಿ, ವಿಜಯ್, ಮಮತಾ, ರೇಣುಕಾ, ವಾಸು, ವೆಂಕಟೇಶ್ವರ ಮತ್ತು ವಿಶಾಲ್ ವೈನ್ಸ್‌ ಮದ್ಯದ ಅಂಗಡಿಗಳ ಮಾಲೀಕರಿಗೆ ಅಬಕಾರಿ ಇಲಾಖೆ ಅಧಿಕಾರಿಗಳ ಭಯವಿಲ್ಲದಂತಾಗಿದೆ.ಸಿ.ಎಲ್-2 ಎಂದರೆ ಮದ್ಯದ ಅಂಗಡಿಗಳಲ್ಲಿ ಮದ್ಯಪ್ರಿಯರಿಗೆ

ಗಲಗಲಿ ಸಾರಥ್ಯದಲ್ಲಿ ಗಲ್ಲಿಗಲ್ಲಿಗಳಲ್ಲೂ ಮದ್ಯ ಅಕ್ರಮ ಮಾರಾಟ Read More »

ಸರ್ಕಾರದ ಸೌಲಭ್ಯ ನೀಡದೆ ಕರ್ತವ್ಯ ಲೋಪ, ಭ್ರಷ್ಟಾಚಾರ ಆರೋಪ

ಉಪ ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು ದಾಖಲು ರಣಬೇಟೆ ನ್ಯೂಸ್ ಕೊಪ್ಪಳ ಕೊಪ್ಪಳ.ಸೆ.18: ಜಿಲ್ಲೆಯ ನಿವೃತ್ತ ಯೋಧರು ಹಾಗೂ ಹುತಾತ್ಮ ಯೋಧರ ಅವಲಂಬಿತರಿಗೆ ಮತ್ತು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಅವಲಂಬಿತರಿಗೆ ನಿಯಮಾನುಸಾರ ಸರ್ಕಾರದ ಸೌಲಭ್ಯ ನೀಡದೇ ಕರ್ತವ್ಯ ಲೋಪ ಎಸಗುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ದೂರಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಇದ್ದು, ಈ ಬಗ್ಗೆ ಕೂಲಂಕುಷವಾದ ತನಿಖೆಯ ಅವಶ್ಯಕತೆ ಇರುವುದರಿಂದ ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಅಧಿಕಾರಿಗಳ ಮೇಲೆ ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಸ್ವಯಂಪ್ರೇರಿತ

ಸರ್ಕಾರದ ಸೌಲಭ್ಯ ನೀಡದೆ ಕರ್ತವ್ಯ ಲೋಪ, ಭ್ರಷ್ಟಾಚಾರ ಆರೋಪ Read More »

ಸಂಗೀತ ಲೋಕದ ಭರವಸೆಯ ಬಾಲಗಾಯಕ ಸಿದ್ದಲಿಂಗಸ್ವಾಮಿ

ರಣಬೇಟೆ ನ್ಯೂಸ್ ಕೊಪ್ಪಳ.ಸೆ.4:ಪ್ರತಿಭೆ ಎನ್ನುವುದು ಯಾರೊಬ್ಬರ ಸೊತ್ತಲ್ಲ, ಕಲೆ ಎಲ್ಲರಲ್ಲೂ ಅಡಗಿರುತ್ತದೆ. ಅಪ್ಪಿಕೊಳ್ಳುವುದು ಕೆಲವರನ್ನು ಮಾತ್ರ. ಕಲೆ ಮತ್ತು ಸಂಗೀತ ಎನ್ನುವುದು ದೈವದತ್ತವಾದ ಕೊಡುಗೆ. ಕೆಲವೊಮ್ಮೆ ರಕ್ತಗತವಾಗಿಯೂ ಬಂದಿರುತ್ತದೆ. ಹೀಗೆ ತಾಯಿಯ ಸಂಗೀತ ಆಸಕ್ತಿ ಮತ್ತು ಗಾಯನ ಕಲೆಯಿಂದ ಪ್ರೇರೆಪಿತಗೊಂಡ ಸಿದ್ದಲಿಂಗ ಸ್ವಾಮಿ ಸಂಗೀತ ಕ್ಷೇತ್ರದಲ್ಲಿ ಮೊದಲ ಹೆಜ್ಜೆಯೊಂದಿಗೆ ವಿದ್ಯಾಭ್ಯಾಸದ ಜೊತೆಗೆ ಸಂಗೀತ ಅಭ್ಯಾಸ ಮಾಡುತ್ತಾ ಅವಕಾಶ ಒದಗಿದಾಗಲೆಲ್ಲಾ ಸಂಗೀತ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡಿದ್ದಾನೆ ಈ ಬಾಲಕ.ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಹಿರೇಹಡಗಲಿಯ ಚನ್ನವೀರಯ್ಯ

ಸಂಗೀತ ಲೋಕದ ಭರವಸೆಯ ಬಾಲಗಾಯಕ ಸಿದ್ದಲಿಂಗಸ್ವಾಮಿ Read More »

ಆಹಾರ ನಿಗಮದ ಉಗ್ರಾಣದಲ್ಲಿ ನಡೆದ ಅಂದಾದುಂದಿಯ ಕಿಂಗ್ ಪಿನ್ ಯಾರು…?

ಅಷ್ಟಕ್ಕೂ ಈ ಜುಬೇರ ಯಾರು..? ಆತನಿಗೆ ಸರ್ಕಾರಿ ಗೋದಾಮಿನಲ್ಲೇನು ಕೆಲಸ…? ರಣಬೇಟೆ ನ್ಯೂಸ್ಗಂಗಾವತಿ, ಆ.31: ಕಳೆದ ಆರು ದಿನಗಳ ಹಿಂದೆ ನಗರದ ಕನಕಗಿರಿ ರಸ್ತೆ ಬಳಿಯ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ವಶಪಡಿಸಿಕೊಂಡ ನೂರಾರು ಕ್ವಿಂಟಾಲ್ ಅಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ತಲೆದಂಡವಾಗಿದೆ. ಸದರಿ ಪ್ರಕರಣದ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿ ತನಿಖಾ ತಂಡ ರಚಿಸಿ ಆದೇಶ ಹೊರಡಿಸಲಾಗಿದೆ. ಸದ್ಯಕ್ಕೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಹಾಗೂ ಅಪರ

ಆಹಾರ ನಿಗಮದ ಉಗ್ರಾಣದಲ್ಲಿ ನಡೆದ ಅಂದಾದುಂದಿಯ ಕಿಂಗ್ ಪಿನ್ ಯಾರು…? Read More »

ಸಂಚಾರಿ ಪೊಲೀಸ್ ಠಾಣೆಯಲ್ಲೊಬ್ಬ ನಡೆದಾಡುವ ರಕ್ತ ಭಂಡಾರ

12 ಬಾರಿ ರಕ್ತದಾನ ಮಾಡಿ ಪ್ರಾಣ ಕಾಪಾಡಿದ ಪೊಲೀಸ್ ಪೇದೆ ಅಮರೇಶ ಗಂಗಾವತಿ.ಆ.19: ರಕ್ತದಾನ ಮಹಾದಾನ, ಅನಾರೋಗ್ಯ ಹಾಗೂ ಅಪಘಾತದಂತ ತುರ್ತು ಸಂದರ್ಭದಲ್ಲಿ ಒಂದೊಂದು ಹನಿ ರಕ್ತವೂ ಪ್ರಾಣ ರಕ್ಷಕವಾಗಬಲ್ಲದು. ಆದ್ದರಿಂದ ಪ್ರತಿಯೊಬ್ಬರೂ ತಪ್ಪದೇ ರಕ್ತದಾನ ಮಾಡುವಂತೆ ಪುಂಖಾನು ಪುಂಖವಾಗಿ ಭಾಷಣ ಮಾಡುವವರು ತಾವು ರಕ್ತದಾನ ಮಾಡುವ ಸಂದರ್ಭ ಬಂದರೆ ನೂರಾರು ನೆಪ ಹೇಳಿ ಜಾರಿಕೊಳ್ಳುತ್ತಾರೆ. ಆದರೆ ನಗರದ ಸಂಚಾರಿ ಪೊಲೀಸ್ ಠಾಣೆಯ ಪೇದೆಯೊಬ್ಬರು ರಕ್ತದಾನ ಮಾಡುವ ಯಾವುದೇ ಸಂದರ್ಭಗಳಲ್ಲಿ ನೆಪ ಹೇಳದೆ ಸೇವೆಯೇ ನಮ್ಮ ಪರಮೋಚ್ಚ

ಸಂಚಾರಿ ಪೊಲೀಸ್ ಠಾಣೆಯಲ್ಲೊಬ್ಬ ನಡೆದಾಡುವ ರಕ್ತ ಭಂಡಾರ Read More »

ಅಷ್ಟಕ್ಕೂ ನೈಜ ಪತ್ರಕರ್ತರು ಎಂದರೆ ಯಾರು..?

ರಣಬೇಟೆ ನ್ಯೂಸ್‌ ಕೊಪ್ಪಳ ಅ.04: ನಕಲಿ ಪತ್ರಕರ್ತರ ಹಾವಳಿಯಿಂದ ನೈಜ ಪತ್ರಕರ್ತರನ್ನೂ ಕೂಡ ಜನ ಅನುಮಾನದಿಂದ ನೋಡುವಂತಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬೇಸರ ವ್ಯಕ್ತಪಡಿಸಿದ್ದಾರೆ. ಗಂಗಾವತಿ ನಗರದ ಮಂಥನ ಸಭಾಂಗಣದಲ್ಲಿ ಭಾನುವಾರದಂದು ನಡೆದ ಪತ್ರಿಕಾ ದಿನಾಚರಣೆ ಹಾಗೂ ಗ್ರಂಥಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ್ದ ಅವರು ಈ ಮೇಲಿನಂತೆ ಬೇಸರ ವ್ಯಕ್ತಪಡಿಸಿದ್ದರು. ಆದರೆ ನಕಲಿ ಪತ್ರಕರ್ತರು ಯಾರು…?. ನೈಜ ಪತ್ರಕರ್ತರು ಯಾರು ಎಂದು ಬಿಡಿಸಿ ಹೇಳಬೇಕಾಗಿತ್ತು. ಆದರೆ ಆ ಕೆಲಸ

ಅಷ್ಟಕ್ಕೂ ನೈಜ ಪತ್ರಕರ್ತರು ಎಂದರೆ ಯಾರು..? Read More »

ಕುರಿಗಾಹಿ ಮೇಲೆ ಹಲ್ಲೆ;ಬಲ್ದೋಟ ಸೆಕ್ಯೂರಿಟಿ ಗಾರ್ಡ್ ದೌರ್ಜನ್ಯ!

ರಣಬೇಟೆ ನ್ಯೂಸ್ ಕೊಪ್ಪಳಕುರಿಗಳಿಗೆ ನೀರು ಕುಡಿಸುವ ಉದ್ದೇಶದಿಂದ ಕುರಿಗಾಗಿಯೂ ಬಸಾಪುರ ಕೆರೆಗೆ ಹೋದ ಸಂದರ್ಭದಲ್ಲಿ ಹಲ್ಲೆ ಮಾಡಿರುವ ಘಟನೆ ಶುಕ್ರವಾರ ಸಂಭವಿಸಿದೆ. ಇತ್ತೀಚಿನ ದಿನಗಳಲ್ಲಿ ಬಲ್ದೋಟ ಕಂಪನಿಗೆ ಸಂಬಂಧಿಸಿದಂತೆ ತಾಲೂಕಿನ ಬಸಾಪುರ ಕೆರೆ ಒತ್ತುವರಿ ವಿಚಾರ ಇವರ ಚರ್ಚೆಗೆ ಗ್ರಾಸವಾಗುತ್ತಿದ್ದು ಇದೀಗ ಮತ್ತೊಂದು ಪ್ರಕರಣಕ್ಕೆ ಬಸಾಪುರ ಕೆರೆ ಸಾಕ್ಷಿಯಾಗಿದೆ. ಬಸಾಪುರದ ಕೆರೆಯ ಕಡೆ ಕುರಿಗಾಹಿ ದೇವಪ್ಪ ಹಾಲಹಳ್ಳಿ ಎಂಬುವರು ಕುರಿಗೆ ನೀರು ಕುಡಿಸುವ ಉದ್ದೇಶದಿಂದ ಬಸಾಪುರ ಕೆರೆಯ ಕಡೆ ಕುರಿಗಳನ್ನು ಪಡೆದುಕೊಂಡು ಹೋದಾಗ ಬಲ್ದೋಟ ಕಂಪನಿಯ ಸೆಕ್ಯೂರಿಟಿ

ಕುರಿಗಾಹಿ ಮೇಲೆ ಹಲ್ಲೆ;ಬಲ್ದೋಟ ಸೆಕ್ಯೂರಿಟಿ ಗಾರ್ಡ್ ದೌರ್ಜನ್ಯ! Read More »

ವಿಠ್ಠಲನ ನೆನೆದರೆ ಮದ್ಯ ಮಾರಾಟಗಾರರಿಗೆ ಕಷ್ಟ ಒಂದಿಷ್ಟಿಲ್ಲ ಪ್ರತಿ ಹಳ್ಳಿಗಳಲ್ಲೂ ಪಿರಂಗಣ್ಣನ ಎಣ್ಣೆ ಪಡೆಯ ಅಂಧಾ ದರ್ಬಾರ್!

ರಣಬೇಟೆ ನ್ಯೂಸ್‌ ಗಂಗಾವತಿ. ತಾಲೂಕು ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ ಹಾಲು, ಔಷಧಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಅಬಕಾರಿ ನಿರೀಕ್ಷಕ ವಿಠ್ಠಲ ಪಿರಂಗಣ್ಣನ ಕೃಪಾಶೀರ್ವಾದದಿಂದ ಪ್ರತಿ ಹಳ್ಳಿ, ಪ್ರತಿ ಗಲ್ಲಿ ಗಲ್ಲಿಗಳಲ್ಲೂ ಸಟ್ಟಸರ ಹೊತ್ತಿನಲ್ಲಿಯೂ ಮದ್ಯ ದೊರೆಯುತ್ತದೆ ಎಂದರೆ ಅಕ್ರಮ ಮದ್ಯ ಮಾರಾಟದ ಅಂಧಾ ದರ್ಬಾರ್ ಹೇಗಿದೆ ಎಂಬುವುದನ್ನು ಒಮ್ಮೆ ಊಹಿಸಿಕೊಳ್ಳಿ. ರಾಷ್ಟ್ರಪಿತ ಮಹಾತ್ಮಗಾಂಧಿಯ ಮದ್ಯ ಮುಕ್ತ ಗ್ರಾಮದ ಕನಸಿಗೆ ಕೊಳ್ಳಿ ಇಟ್ಟ ಕೀರ್ತಿ ಅಬಕಾರಿ ನಿರೀಕ್ಷಕ ವಿಠ್ಠಲ್ ಪಿರಂಗಣ್ಣನಿಗೆ ಸಲ್ಲಬೇಕು.ಗಂಗಾವತಿ ತಾಲೂಕು ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ

ವಿಠ್ಠಲನ ನೆನೆದರೆ ಮದ್ಯ ಮಾರಾಟಗಾರರಿಗೆ ಕಷ್ಟ ಒಂದಿಷ್ಟಿಲ್ಲ ಪ್ರತಿ ಹಳ್ಳಿಗಳಲ್ಲೂ ಪಿರಂಗಣ್ಣನ ಎಣ್ಣೆ ಪಡೆಯ ಅಂಧಾ ದರ್ಬಾರ್! Read More »

ಸಚಿವರ ಅನುಭವದ ಕೊರತೆಯಿಂದ ಗುಳೆ ಹೊರಟ ಕ್ಷೇತ್ರದ ಜನತೆ-ಬಸವರಾಜ ದಡೇಸುಗೂರು.

ರಣಬೇಟೆ ನ್ಯೂಸ್‌ ಕೊಪ್ಪಳ. ಜಿಲ್ಲಾ ಉಸ್ತುವಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಅನುಭವ ಕೊರತೆಯಿಂದ ತುಂಗಭದ್ರಾ ಜಲಾನಯನ ಪ್ರದೇಶದ ರೈತರು ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಭಾರತೀಯ ಜನತಾ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ದಡೇಸುಗೂರು ಹೇಳಿದರು.ಜಿಲ್ಲೆಯ ಕೊಪ್ಪಳದ ಅಲ್ಪ ಪ್ರಮಾಣದ ಜಮೀನುಗಳು ಹಾಗೂ ಗಂಗಾವತಿ ಹಾಗೂ ಕಾರಟಗಿ ಭಾಗದ ಬಹುತೇಕ ರೈತ ವರ್ಗದವರು ತುಂಗಭದ್ರಾ ನೀರನ್ನೇ ತಮ್ಮ ಕೃಷಿ ಚಟುವಟಿಕೆಗಳಿಗೆ ಅವಲಂಬಿಸಿದ್ದಾರೆ ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರಿಗೆ

ಸಚಿವರ ಅನುಭವದ ಕೊರತೆಯಿಂದ ಗುಳೆ ಹೊರಟ ಕ್ಷೇತ್ರದ ಜನತೆ-ಬಸವರಾಜ ದಡೇಸುಗೂರು. Read More »

error: Content is protected !!
Scroll to Top