Muttappa Doddamani

“COTPA ಕಾಯಿದೆ-2003ರ ಸೆಕ್ಷನ್ 4 ಉಲ್ಲಂಘನೆ: ಕೊಪ್ಪಳದಲ್ಲಿ ಸಮವಸ್ತ್ರಧಾರಿ ಪಿಎಸ್‌ಐ ಶರಣಪ್ಪರಿಂದಲೇ ಸಾರ್ವಜನಿಕ ಧೂಮಪಾನದ ಅಪರಾಧ”

“ಪ್ರಯಾಣಿಕರ ಸುರಕ್ಷತಾ ವಲಯದಲ್ಲಿಯೇ ನಿಯಮ ಉಲ್ಲಂಘನೆ; ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ” ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನು ಕಾಪಾಡಬೇಕಾದ ಪೋಲೀಸ್ ಇಲಾಖೆಯ ಅಧಿಕಾರಿಯೊಬ್ಬರಿಂದಲೇ ನಿಯಮ ಉಲ್ಲಂಘನೆಯ ದೋಷ ಇಲ್ಲಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಜರುಗಿರುವುದು ವಿಖ್ಯಾತವಾಗಿದೆ.​ನಿನ್ನೆಯ ಸುಮಾರು 12:25 ರಿಂದ 12:30ರ ವೇಳೆಗೆ, ಕೊಪ್ಪಳ ನಗರ ಪೋಲೀಸ್ ಠಾಣೆಯ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಶ್ರೀ ಶರಣಪ್ಪನವರು ಸಮವಸ್ತ್ರಧಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಬಸ್ ನಿಲ್ದಾಣದ ಪ್ರಕಾಶಮಾನ ಸ್ಥಳದಲ್ಲಿ ಧೂಮಪಾನಕ್ಕೆ ತೊಡಗಿದ ವಿಷಯ ಪ್ರತ್ಯಕ್ಷದರ್ಶಿಗಳಿಂದ ತಿಳಿದುಬಂದಿದೆ. ​ಹಿಂದುಸ್ಥಾನದಲ್ಲಿ ಜಾರಿಯಲ್ಲಿರುವ ಸಿಗರೇಟು ಮತ್ತು ಇತರ […]

“COTPA ಕಾಯಿದೆ-2003ರ ಸೆಕ್ಷನ್ 4 ಉಲ್ಲಂಘನೆ: ಕೊಪ್ಪಳದಲ್ಲಿ ಸಮವಸ್ತ್ರಧಾರಿ ಪಿಎಸ್‌ಐ ಶರಣಪ್ಪರಿಂದಲೇ ಸಾರ್ವಜನಿಕ ಧೂಮಪಾನದ ಅಪರಾಧ” Read More »

‘ಕರ್ನಾಟಕ ಭೂ ಕಂದಾಯ ಕಾಯ್ದೆ’ಯ ಶೀಘ್ರ ಅನುಷ್ಠಾನಕ್ಕೆ ಕರೆ; ಇಲ್ಲವೇ ಲೋಕಾಯುಕ್ತದ ವಿಶೇಷ ಮೊಕದ್ದಮೆ.

ದಾಳಿಂಬೆಯ ವನದಲ್ಲಿ ಜಲಸಂಪತ್ತಿನ ಶವಸಂಸ್ಕಾರ: ಅಬ್ಬಿಗೇರಿ ಕೆರೆಯ ದುಸ್ಥಿತಿ; ಅಧಿಕಾರಿಗಳ ಮೌನಕ್ಕೆ 30(31)ರ ದಂಡಾಜ್ಞೆ ಸಿದ್ಧ. ಕೊಪ್ಪಳ ಜಿಲ್ಲೆಯಲ್ಲಿ ಸಾರ್ವಜನಿಕ ಸಂಪನ್ಮೂಲಗಳ ಮೇಲೆ ನಡೆಯುತ್ತಿರುವ ನಿರ್ಲಜ್ಜ ದುರಾಕ್ರಮಣದ ಸರಣಿಯಲ್ಲಿ, ಇರ್ಕಲ್ಗಡ ಹೋಬಳಿಯ ಅಬ್ಬಿಗೇರಿ ಗ್ರಾಮದ ಕೆರೆ ಒತ್ತುವರಿ ಪ್ರಕರಣವು ಆಡಳಿತ ಯಂತ್ರದ ನಿಷ್ಕ್ರಿಯತೆಗೆ ಕನ್ನಡಿ ಹಿಡಿದಿದೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಒಟ್ಟು 7 ಎಕರೆ 25 ಗುಂಟೆ ಕೆರೆ ಪ್ರದೇಶವನ್ನು ಪ್ರಭಾವಿ ವ್ಯಕ್ತಿಗಳು ರಾಜಾರೋಷವಾಗಿ ಒತ್ತುವರಿ ಮಾಡಿ, ಅಲ್ಲಿ ಆರ್ಥಿಕ ಲಾಭಕೋರರು ದಾಳಿಂಬೆ ತೋಟ ನಿರ್ಮಿಸಿರುವುದು, ಕೇವಲ ಭೂ

‘ಕರ್ನಾಟಕ ಭೂ ಕಂದಾಯ ಕಾಯ್ದೆ’ಯ ಶೀಘ್ರ ಅನುಷ್ಠಾನಕ್ಕೆ ಕರೆ; ಇಲ್ಲವೇ ಲೋಕಾಯುಕ್ತದ ವಿಶೇಷ ಮೊಕದ್ದಮೆ. Read More »

ನಗರಸಭೆ ಪಕ್ಕದಲ್ಲೇ ‘ಕುಡುಕರ ಕಲ್ಯಾಣ ಮಂಟಪ’; ಆಡಳಿತ ಯಂತ್ರದ ಮೌನ ಸಮ್ಮತಿಗೆ ಅರ್ಥವೇನು?

ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಅ :24 ಸಂಚಿಕೆ  (7) ಶೈಕ್ಷಣಿಕ ಸಂಸ್ಥೆಗಳ ‘ದೇಗುಲದ’ ಅಂಗಳದಲ್ಲಿ ‘ವ್ಯಸನದ ವನ’! ಅಧಿಕಾರಿಗಳ ಮೌನಕ್ಕೆ ಲೋಕಾಯುಕ್ತದಲ್ಲಿ ಉತ್ತರ ಅನಿವಾರ್ಯ! ಕೊಪ್ಪಳ ನಗರದ ಹೃದಯ ಭಾಗದಲ್ಲಿ ನೆಲೆಸಿರುವ ‘ಮಮತಾ ವೈನ್ಸ್ ಎಂಬ ಮದ್ಯದ ಮಳಿಗೆಯು, ಅಬಕಾರಿ ಇಲಾಖೆಯ ಮುಖ್ಯ ನಿಯಮಾವಳಿಯಾದ ಸಿಎಲ್‌-2 ಪರವಾನಿಗೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಸೀಸೆಯ ಮಾರಾಟದ ಜತೆಗೆ ಆವರಣದಲ್ಲಿ ಮದ್ಯಪಾನಕ್ಕೆ ಸಾರ್ವಜನಿಕವಾಗಿ ಅವಕಾಶ ನೀಡಿರುವ ಮಹಾ ಅನಾಚಾರ ಮುಂದುವರಿದಿದೆ. ಈ ಮಳಿಗೆಯು ಕೇವಲ ವ್ಯಾಪಾರದ ಸ್ಥಳವಲ್ಲ, ಬದಲಿಗೆ ಅರಾಜಕತೆಯ ಅರಮನೆ ಎಂಬುದು ನಮ್ಮ

ನಗರಸಭೆ ಪಕ್ಕದಲ್ಲೇ ‘ಕುಡುಕರ ಕಲ್ಯಾಣ ಮಂಟಪ’; ಆಡಳಿತ ಯಂತ್ರದ ಮೌನ ಸಮ್ಮತಿಗೆ ಅರ್ಥವೇನು? Read More »

ಅಬಕಾರಿ ಡಿ.ಸಿ. ಆಜ್ಞೆಯಲಿ ‘ರಕ್ಷಣಾ ಜಾಲ’!

ಡಿ.ಸಿ. ಪ್ರಶಾಂತ್ ಕುಮಾರ್‌ರದ್ದು ‘ಇಲಾಖಾ ಮಮಕಾರ’ವೇ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ: 16 (ಸಂಚಿಕೆ-06) ಕೊಪ್ಪಳ ಅಬಕಾರಿ ಸೀಮೆಯು ಇಂದು ಕಪ್ಪ ಕಾಸಿನ ಕೂಪವಾಗಿ ಪರಿವರ್ತಿತವಾಗಿದೆ ಎಂಬ ಘೋರ ಸತ್ಯವನು ರಣ ಬೇಟೆ ವೆಬ್ ನ್ಯೂಸ್ ಸಂಪಾದಕ ಶ್ರೀ ಮುತ್ತು ದೊಡ್ಮನೆ ಅವರು ದೂರಿನ ಮೂಲಕ ಬಯಲುಗೊಳಿಸಿರುತ್ತಾರೆ. ಈ ದೂರಿನ ಪ್ರಮುಖ ಸಾರಾಂಶವೇನೆಂದರೆ, ಸಾರ್ವಜನಿಕ ವಲಯದಲ್ಲಿ ಅಬಕಾರಿ ತಾಲೂಕು ನಿರೀಕ್ಷಕ ಮಂಜುನಾಥ್ ಗಲಗಲಿ ಅವರು ಈಶ್ವರ್ ದೇವಿ, ವಿಜಯ್, ಮಮತಾ, ರೇಣುಕಾ, ವಾಸು, ವೆಂಕಟೇಶ್ವರ ಮತ್ತು

ಅಬಕಾರಿ ಡಿ.ಸಿ. ಆಜ್ಞೆಯಲಿ ‘ರಕ್ಷಣಾ ಜಾಲ’! Read More »

ಅಬಕಾರಿ ಇಲಾಖೆ: ‘ನಿದ್ರಾದೇವಿ’ಯ ವರ! ದೇವಿ ವೈನ್ಸ್‌ನಲ್ಲಿ CL-2 ಬದಲಿಗೆ ‘CL-VIP ಬಾರ್’!

ಪರವಾನಗಿ ಒಂದು, ವ್ಯವಹಾರ ಎರಡು: ವೈನ್ ಶಾಪ್ ಅಲ್ಲ, ಇದು ಅನಧಿಕೃತ ‘ಸ್ನಾಕ್ಸ್ ಮತ್ತು ಸಾರಾಯಿ ಸೇವಾ ಕೇಂದ್ರ’! ರಣಬೇಟೆ ನ್ಯೂಸ್‌ ಅ:10 ಕೊಪ್ಪಳ (ಸಂಚಿಕೆ-05) ಮಾಲೀಕರ ದಿವ್ಯ ಸೇವೆ: ಮಳಿಗೆಯ ಮಾಲೀಕರು, ಶ್ರೀಮಾನ್ ಆನಂದ್‌ ಕುಮಾರ್ ಗುಡದಿರಪ್ಪ ಅಳವಂಡಿಯವರು, ತಮ್ಮ ಅಂಗಡಿಯನ್ನು ಕೇವಲ ‘ವೈನ್ ಶಾಪ್’ ಎಂದು ಪರಿಗಣಿಸಿಲ್ಲ. ಅವರು ಅದನ್ನು ಒಂದು ‘ಗ್ರಾಹಕ ಸ್ನೇಹಿ, ಸಂಕಟ ನಿವಾರಕ ಮದ್ಯಪಾನ ಕ್ಷೇತ್ರ’ವನ್ನಾಗಿ ಪರಿವರ್ತಿಸಿದ್ದಾರೆ. CL-2 ಪರವಾನಗಿ ಎಂದರೆ ಕೇವಲ ಮಾರಾಟವಲ್ಲ, ಗ್ರಾಹಕರ ಅನುಕೂಲಕ್ಕಾಗಿ ಅಲ್ಲೇ ಕುಳಿತು, ‘ಸಖತ್‌ ಶಾಂತ

ಅಬಕಾರಿ ಇಲಾಖೆ: ‘ನಿದ್ರಾದೇವಿ’ಯ ವರ! ದೇವಿ ವೈನ್ಸ್‌ನಲ್ಲಿ CL-2 ಬದಲಿಗೆ ‘CL-VIP ಬಾರ್’! Read More »

ಈಶ್ವರ್ ವೈನ್ಸ್ ಮಾಲೀಕರು: ಇವರು ಉದ್ಯಮಿಗಳಲ್ಲ, ಇವರು ಸರ್ಕಾರಿ ನಿಯಮಗಳನ್ನು ‘ಸುಧಾರಿಸುವ’ ಸಮಾಜ ಸೇವಕರು!

ಈಶ್ವರ್ ವೈನ್ಸ್: ಮದ್ಯಪ್ರಿಯರಿಗೆ ‘ಅಧಿಕೃತ’ ಬಾರ್ ಸೌಲಭ್ಯ – ಏಕೆಂದರೆ ನಿಯಮಗಳು ಕೇವಲ ಓದಲು ಮಾತ್ರ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:14 (ಸಂಚಿಕೆ-05) ನಗರದ ಹೃದಯವಾದ ಜಿಲ್ಲಾ ಕ್ರೀಡಾಂಗಣದ ಸಮೀಪದ ಮಾರ್ಗವು ಇಂದು ದುರಾಚಾರದ ತಾಣವಾಗಿ ಪರಿವರ್ತಿತವಾಗಿದೆ. ಶ್ರೀಮಾನ್ ಸುರೇಶ ಹಾನಗಲ್ ಅವರಿಗೆ ಸೇರಿದ ‘ಈಶ್ವರ್ ವೈನ್ಸ್’ (CL-2 ಮದ್ಯದ ಮಳಿಗೆ), ಕೇವಲ ‘ಪಾರ್ಸಲ್‌’ಗೆ ಮಾತ್ರ ಅನುಮತಿ ಹೊಂದಿದ್ದರೂ, ಆ ನಿಯಮವನ್ನು ಸಂಪೂರ್ಣವಾಗಿ ಧಿಕ್ಕರಿಸಿದೆ ​ಮಳಿಗೆಯ ಆವರಣದಲ್ಲಿ ಮದ್ಯಪ್ರಿಯರಿಗೆ ಕುಳಿತು ಮಧುಪಾನ ಮಾಡುವುದಕ್ಕೆ ಬೇಕಾದ ಸೌಕರ್ಯವನ್ನು ಮಾಲೀಕರು ವಿಶೇಷವಾಗಿ

ಈಶ್ವರ್ ವೈನ್ಸ್ ಮಾಲೀಕರು: ಇವರು ಉದ್ಯಮಿಗಳಲ್ಲ, ಇವರು ಸರ್ಕಾರಿ ನಿಯಮಗಳನ್ನು ‘ಸುಧಾರಿಸುವ’ ಸಮಾಜ ಸೇವಕರು! Read More »

ಗಲಗಲಿ ಸಾರಥ್ಯದಲ್ಲಿ ಗಲ್ಲಿಗಲ್ಲಿಗಳಲ್ಲೂ ಮದ್ಯ ಅಕ್ರಮ ಮಾರಾಟ

ಸಂಕ್ರಾಮಿಕ ರೋಗ ಹರಡುವ ತಾಣಗಳಾದ CL-2 ಮದ್ಯದ ಅಂಗಡಿಗಳು ರಣಬೇಟೆ ವೆಬ್‌ ಡೆಸ್ಕ್‌ ಕೊಪ್ಪಳ ಅ:13 (ಸಂಚಿಕೆ-04) ಕೊಪ್ಪಳ ನಗರದಲ್ಲಿ ಪರವಾನಗಿ ಹೊಂದಿದ ಮದ್ಯದ ಅಂಗಡಿಗಳು ಕರ್ನಾಟಕ ಅಬಕಾರಿ ಕಾಯ್ದೆ, 1965ರ ನಿಯಮಗಳನ್ನು ಉಲ್ಲಂಘಿಸಿ ಭರ್ಜರಿ ವಹಿವಾಟು ನಡೆಸುತ್ತಿವೆ. ನಗರದಲ್ಲಿ CL-2 ಪರವಾನಗಿ ಹೊಂದಿದ ಆಯಾಕಟ್ಟಿನಲ್ಲಿ ಇರುವ ಈಶ್ವರ್, ದೇವಿ, ವಿಜಯ್, ಮಮತಾ, ರೇಣುಕಾ, ವಾಸು, ವೆಂಕಟೇಶ್ವರ ಮತ್ತು ವಿಶಾಲ್ ವೈನ್ಸ್‌ ಮದ್ಯದ ಅಂಗಡಿಗಳ ಮಾಲೀಕರಿಗೆ ಅಬಕಾರಿ ಇಲಾಖೆ ಅಧಿಕಾರಿಗಳ ಭಯವಿಲ್ಲದಂತಾಗಿದೆ.ಸಿ.ಎಲ್-2 ಎಂದರೆ ಮದ್ಯದ ಅಂಗಡಿಗಳಲ್ಲಿ ಮದ್ಯಪ್ರಿಯರಿಗೆ

ಗಲಗಲಿ ಸಾರಥ್ಯದಲ್ಲಿ ಗಲ್ಲಿಗಲ್ಲಿಗಳಲ್ಲೂ ಮದ್ಯ ಅಕ್ರಮ ಮಾರಾಟ Read More »

ಇದ್ದರೆ ಪಟ್ಟ, ಸತ್ತರೆ ಚಟ್ಟ ಎಂಬ ಅಮಲಿನಲ್ಲಿರುವ ಯುವಕರ ಪಡೆ

ಗಂಗಾವತಿಯಲ್ಲಿ ಆರಂಭವಾದ ರಕ್ತಚರಿತ್ರೆಗೆ ಮುನ್ನುಡಿ ಬರೆದವರು ಯಾರು…? ರಣಬೇಟೆ ನ್ಯೂಸ್ (ಕೊಪ್ಪಳ) ಭತ್ತದ ಕಣಜ ಎಂದೇ ಪ್ರಖ್ಯಾತಿ ಹೊಂದಿದ್ದ ಗಂಗಾವತಿ ನಗರವು ಲಾಂಗು, ಮಚ್ಚುಗಳ ಅಬ್ಬರದಿಂದಾಗಿ ಮತ್ತೊಮ್ಮೆ ದೇಶದಾದ್ಯಂತ ಸದ್ದು ಮಾಡುತ್ತಿದೆ. ಅಕ್ಟೋಬರ್ 8ರ ಮುಂಜಾವು 2.30ರ ವೇಳೆ ನಡೆದ ಕೊಲೆಯೊಂದು ಗ್ಯಾಂಗ್‍ವಾರ್‍ನ ಅಂತಿಮ ಹಂತವೋ ಅಥವಾ ಆರಂಭವೋ ಎಂಬ ಗೊಂದಲ ಸಾರ್ವಜನಿಕ ವಲಯದಲ್ಲಿ ಮೂಡುವಂತೆ ಮಾಡಿದೆ. ಈ ಪ್ರಕರಣವು ಗಂಗಾವತಿಯಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟದಲ್ಲಿ ಇದೆ ಎಂಬುವುದನ್ನು ಸಾರಿ ಹೇಳುವಂತಿದೆ. ಅಷ್ಟಕ್ಕೂ ಈ ಕೊಲೆ

ಇದ್ದರೆ ಪಟ್ಟ, ಸತ್ತರೆ ಚಟ್ಟ ಎಂಬ ಅಮಲಿನಲ್ಲಿರುವ ಯುವಕರ ಪಡೆ Read More »

ಭೂಕಬಳಿಕೆ ಮಾಫಿಯಾ ವಿರುದ್ಧ ‘BNS’ ಬ್ರಹ್ಮಾಸ್ತ್ರ:

ಸರ್ಕಾರಿ ಕೆರೆ ದುರಾಕ್ರಮಣ; ಸಂಘಟಿತ ಅಪರಾಧದ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಅನಿವಾರ್ಯ! ರಣಬೇಟೆ ವೆಬ್‌ ಡೆಸ್ಕ್‌ ಅ 11 ಸಂಚಿಕೆ (03) ಕೊಪ್ಪಳ ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ಸರ್ಕಾರಿ ಜೀವನಾಡಿಯಾದ ಕೆರೆಯನ್ನು ದುರಾಕ್ರಮಣ ಮಾಡಿದ ಭೂಕಬಳಿಕೆ ಮಾಫಿಯಾದ ಕೃತ್ಯವು ಇದೀಗ ಕೇವಲ ಕಂದಾಯ ವಿಷಯವಾಗಿ ಉಳಿದಿಲ್ಲ. ಈ ಘೋರ ಅತಿಕ್ರಮಣವು ಸ್ಥಳೀಯ ಮತ್ತು ಕೇಂದ್ರದ ಕಾಯಿದೆಗಳ ಅಡಿಯಲ್ಲಿ ಸಂಘಟಿತ ಅಪರಾಧದ (Organised Crime) ವ್ಯಾಪ್ತಿಗೆ ಬರುತ್ತದೆ! ಪ್ರಭಾವಿ ವ್ಯಕ್ತಿಗಳು ಒಟ್ಟು 7 ಎಕರೆ 25 ಗುಂಟೆ ಕೆರೆಯ

ಭೂಕಬಳಿಕೆ ಮಾಫಿಯಾ ವಿರುದ್ಧ ‘BNS’ ಬ್ರಹ್ಮಾಸ್ತ್ರ: Read More »

ಗುತ್ತಿಗೆದಾರರೇ, ಇದು CEO ಕಚೇರಿ!

ನಿಮ್ಮ ಮನೆ ವೈರಿಂಗ್ ಸ್ಕಿಮ್ಮು ಇಲ್ಲಿ ಬೇಡ! ಕೆಲವೇ ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ಸುರಿದು ಮಾಡಿಸಲಾದ ಕೊಪ್ಪಳ ಜಿಲ್ಲಾ ಪಂಚಾಯಿತಿ (ZP) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕಚೇರಿಯ ‘ಅಭಿವೃದ್ಧಿ ಮತ್ತು ಸೌಂದರ್ಯೀಕರಣ’ ಕಾಮಗಾರಿಯ ವೈಭವವನ್ನು ಕಂಡರೆ, “ಅಂದಕ್ಕೆ ಕನ್ನ ಹಾಕುವವರು ಬೇಕೆ” ಎಂದು ಕೇಳುವಂತಾಗಿದೆ. ಕಚೇರಿಯ ಒಳಾಂಗಣ ಗೋಡೆಗೆ ಹೊದಿಸಿರುವ ಹೊಸ ನಯನ ಮನೋಹರ ಮರದ ಪ್ಯಾನೆಲಿಂಗ್ (wood paneling) ನಡುವೆ, ಕೆಂಪು-ಕಪ್ಪು ತಂತಿಯ ಕರುಳುಗಳು ಬಯಲಾಗಿರುವ ದೃಶ್ಯ ಈಗ ಸಾರ್ವಜನಿಕರ ವ್ಯಂಗ್ಯಕ್ಕೆ ಆಹಾರವಾಗಿದೆ! ​ಕೊಪ್ಪಳ ZP

ಗುತ್ತಿಗೆದಾರರೇ, ಇದು CEO ಕಚೇರಿ! Read More »

error: Content is protected !!
Scroll to Top