ಕ್ರೈಂ

ಹಣದ ಹಪಾಹಪಿಗೆ ಪ್ರಕೃತಿಯ ಕತ್ತು ಹಿಸುಕಿದ ಪಾಪಿಗಳ ಅಟ್ಟಹಾಸದ ಕಥೆ!

ರಣಬೇಟೆಯ ರಣಕಹಳೆಗೆ ಕೊನೆಗೂ ಮಣಿದು ಟೇಪು ಹಿಡಿಯ ಹೊರಟರೇ ‘ಮಹಾನ್’ ಭೂಮಾಪಕರು? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ:ಮೇ 18 (ಸಂಚಿಕೆ – 03) ಕೊಪ್ಪಳ: ಇದು ಕಾಸಿನ ಕಾಂಚಾಣಕ್ಕೆ ಪ್ರಕೃತಿಯ ಕತ್ತು ಸೀಳಿದವರ ಕಥೆ ಮಾತ್ರವಲ್ಲ, ಕಾನೂನಿನ ಕಣ್ಣಿಗೆ ಮಣ್ಣೆರಚಲು ಹೋದ ಮಾಫಿಯಾವನ್ನು ಸರಕಾರಿ ದಾಖಲೆಗಳೇ ಹೇಗೆ ಹೆಡೆಮುರಿ ಕಟ್ಟಿ ನಿಲ್ಲಿಸಿವೆ ಎಂಬುದರ ಜ್ವಲಂತ ಸಾಕ್ಷಿ! ಕೊಪ್ಪಳದ ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ರ ಜಮೀನಿನ ಪಕ್ಕದಲ್ಲಿ ನೈಸರ್ಗಿಕವಾಗಿ ಹರಿಯುತ್ತಿದ್ದ ಹಳ್ಳವನ್ನು ಮುಚ್ಚಿ, ಅಲ್ಲಿ ಅಕ್ರಮದ […]

ಹಣದ ಹಪಾಹಪಿಗೆ ಪ್ರಕೃತಿಯ ಕತ್ತು ಹಿಸುಕಿದ ಪಾಪಿಗಳ ಅಟ್ಟಹಾಸದ ಕಥೆ! Read More »

ಹಳ್ಳ ನುಂಗಿದ ‘ಭೂ’ ರಕ್ಕಸರಿಗೆ ಕಂದಾಯ ಇಲಾಖೆಯೇ ಕಾವಲು?

ರದ್ದಾದ ಭೂ ಪರಿವರ್ತನೆಗೆ ಆರ್.ಐ ಸುರೇಶ ನೀಡಿದರೇ ಮರುಜೀವ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ:14 (ಸಂಚಿಕೆ-02) ಕೊಪ್ಪಳ: ಇದು ಅಧಿಕಾರದ ಮದದಲ್ಲಿ ನಿಸರ್ಗದ ಉಸಿರು ಹಿಸುಕಿದ ಪಾಪಿಗಳ ಕಥೆ. ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ರ ಪಕ್ಕದಲ್ಲಿ ಹರಿಯುತ್ತಿದ್ದ ನೈಸರ್ಗಿಕ ಹಳ್ಳವೊಂದನ್ನು ಮಣ್ಣು ಮಾಡಿ, ಅದರ ಮೇಲೆ ಅಕ್ರಮದ ಅರಮನೆ ಕಟ್ಟಲು ಹೊರಟ ಭೂಗಜಗಳ ಅಸಲಿ ಮುಖವಾಡ ಈಗ ಕಳಚಿದೆ. ಸರ್ಕಾರಿ ಹಳ್ಳಕ್ಕೆ ಮಣ್ಣು ಮುಚ್ಚಿದ ‘ಭೂ’ ರಕ್ಕಸರ ಅಟ್ಟಹಾಸದ ಬೆನ್ನಲ್ಲೇ, ಈಗ ಕಂದಾಯ

ಹಳ್ಳ ನುಂಗಿದ ‘ಭೂ’ ರಕ್ಕಸರಿಗೆ ಕಂದಾಯ ಇಲಾಖೆಯೇ ಕಾವಲು? Read More »

ಸದ್ದಿಲ್ಲದೆ ಸಮಾಧಿಯಾದ ಸರ್ಕಾರಿ ಹಳ್ಳ!

ದದೇಗಲ್ ಭೂಗಳ್ಳರ ‘ಸದ್ದಿಲ್ಲದ’ ಸಾಮ್ರಾಜ್ಯಕ್ಕೆ ಸಿದ್ದರಾಮೇಶ್ವರರ ಸಿಡಿಲು! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಏ:13 ಸಂಚಿಕೆ- 01 ಕೊಪ್ಪಳ: ಇದು ಹಣದ ಹಪಾಹಪಿಗೆ ಬಿದ್ದು ನಿಸರ್ಗದ ಕತ್ತು ಹಿಸುಕಿದ ಪಾಪಿಗಳ ಕಥೆ. ಅಧಿಕಾರದ ಮದ ಮತ್ತು ಕಾಂಕ್ರೀಟ್ ಗೋಡೆಗಳ ನಡುವೆ ಸರ್ಕಾರಿ ಹಳ್ಳವೊಂದನ್ನು ಸಮಾಧಿ ಮಾಡಿ, ಅದರ ಮೇಲೆ ರಕ್ತಸಿಕ್ತ ಲಾಭದ ಬಡಾವಣೆ ಕಟ್ಟಲು ಹೊರಟ ಭೂಗಜಗಳ ಕರಾಳ ಮುಖವಾಡ ಈಗ ಕಳಚಿದೆ. ಕೊಪ್ಪಳ ಜಿಲ್ಲೆಯ ದದೇಗಲ್ ಗ್ರಾಮದ ಸರ್ವೆ ನಂಬರ್ 69/ ಹಿಸ್ಸಾ 03 ರ

ಸದ್ದಿಲ್ಲದೆ ಸಮಾಧಿಯಾದ ಸರ್ಕಾರಿ ಹಳ್ಳ! Read More »

ತುಂಗಭದ್ರೆಯ ಒಡಲು ಬಗೆಯುತ್ತಿರುವ ರಣಹದ್ದುಗಳು!”

ಹಿಟಾಚಿಗಳ ಅಬ್ಬರಕ್ಕೆ ನಲುಗಿದ ಅಣೆಕಟ್ಟು ಕೆರೆಗಳನ್ನು ನುಂಗಿದವರಿಗೆ ಡ್ಯಾಮ್ ಯಾವ ಲೆಕ್ಕ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಏ:28 ಅಲ್ಲಿ ತುಂಗಭದ್ರೆ ಮೌನವಾಗಿ ಬತ್ತುತ್ತಿದ್ದಾಳೆ. ಆದರೆ ಆ ಮೌನದ ಹಿಂದೆ ಒಂದು ಭೀಕರವಾದ ಕಿರುಚಾಟವಿದೆ. ಅದು ಈ ಮಣ್ಣಿನ ಮಕ್ಕಳ ಅಳಲು. ಕೊಪ್ಪಳ ಮತ್ತು ಗಂಗಾವತಿಯ ಅಕ್ಕಪಕ್ಕದ ಇಟ್ಟಿಗೆ ಬಟ್ಟಿಗಳಿಗೆ ಬಿಸಿಯಾದ ಇಟ್ಟಿಗೆಗಳಾಗಲು ತುಂಗಭದ್ರಾ ಡ್ಯಾಮಿನ ಗರ್ಭದೊಳಗಿನ ಫಲವತ್ತಾದ ಮಣ್ಣು ಬಲಿಯಾಗುತ್ತಿದೆ. ಹಗಲು ದರೋಡೆ ಅಂದರೆ ಇದೇ ಇರಬೇಕು! ಮೊದಲು ಊರಿನ ಮುಗ್ಧ ಜನರಿಗೆ ಒಂದಿಷ್ಟು ಹಣದ

ತುಂಗಭದ್ರೆಯ ಒಡಲು ಬಗೆಯುತ್ತಿರುವ ರಣಹದ್ದುಗಳು!” Read More »

ಕೊಪ್ಪಳದ ‘ಇಬ್ಬನಿ’ ಹಗರಣ ಭಾಗ – 2

​”ನಾಯಕರೇ… ಅಕ್ರಮಕ್ಕೆ ಬೆಂಗಾವಲಾಗಬೇಡಿ, ಜನರ ನಂಬಿಕೆ ಉಳಿಸಿಕೊಳ್ಳಿ!” ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಏ:23 ಬೆಳ್ಳಂಬೆಳಗ್ಗೆ ಮೈಮನ ತಣಿಸುವ ಇಬ್ಬನಿ ಸೂರ್ಯ ಬಂದ ಮೇಲೆ ಮಾಯವಾಗುವುದು ಪ್ರಕೃತಿ ನಿಯಮ. ಆದರೆ ಕೊಪ್ಪಳದ ಮಗ್ಗಲಲ್ಲಿ ಬೀಳುತ್ತಿರುವ ಈ ‘ಇಬ್ಬನಿ’ ಹಗಲು ಹೊತ್ತಿನಲ್ಲೇ ಜನರ ಕಣ್ಣಿಗೆ ಮಣ್ಣೆರಚುತ್ತಿದೆ. ಇದು ರಿಯಲ್ ಎಸ್ಟೇಟ್ ವ್ಯವಹಾರವಲ್ಲ ಬಾಸ್‌, ಇದು ಬಡವನ ಬೆವರಿನ ಹಣವನ್ನು ‘ಅಧಿಕಾರ’ದ ಪಡಸಾಲೆಯಲ್ಲಿ ಹೋಮ ಮಾಡುತ್ತಿರುವ ವ್ಯವಸ್ಥಿತ ಸಂಚು! ಹಿಂದಿನ ಸಂಚಿಕೆಯಲ್ಲಿ ನಾವು ನೋಡಿದಂತೆ…ಟಣಕನಕಲ್ ಗ್ರಾಮದ ಆ 47 ಎಕರೆ

ಕೊಪ್ಪಳದ ‘ಇಬ್ಬನಿ’ ಹಗರಣ ಭಾಗ – 2 Read More »

ಶಿಸ್ತುಕ್ರಮಕ್ಕೆ ಸಿಇಒ ಹಿಂದೇಟು ಭ್ರಷ್ಟರಿಗೆ ಆನೆಬಲ ತಂದಿದೆಯೇ?

ಬಡವರ ಹೊಟ್ಟೆಗೆ ಕನ್ನ.. ಭ್ರಷ್ಟರ ಜೇಬಿಗೆ ‘ಪೂಜಾರ್’ ಸಾಕ್ಷಾತ್ಕಾರ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮಾ:10 ಸಂಚಿಕೆ -02 ನೋಡಿ, ಇದು ನಮ್ಮ ಹೆಮ್ಮೆಯ ಕೊಪ್ಪಳ ಜಿಲ್ಲಾ ಪಂಚಾಯತಿಯ ಅಸಲಿ ಮುಖವಾಡ. ಕುಕನೂರು ತಾಲೂಕಿನ ಹನ್ನೆರಡು ಗ್ರಾಮ ಪಂಚಾಯತಿಗಳಲ್ಲಿ ಬಡವರ ಹೊಟ್ಟೆಗೆ ಬೀಳಬೇಕಿದ್ದ ‘ನರೇಗಾ’ ಕಾಸು ಹೇಗೆ ಲೂಟಿಯಾಗಿದೆ ಅನ್ನೋದನ್ನ ‘ರಣಬೇಟೆ’ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಹಿರೇಬಿಡನಾಳದಿಂದ ಬೆನಕಲ್‌ವರೆಗೆ, ಯರೇಹಂಚಿನಾಳದಿಂದ ತಳಕಲ್‌ವರೆಗೆ ಹರಡಿರುವ ಈ ಭ್ರಷ್ಟಾಚಾರದ ಜಾಲ ಅಂತಿಂತದ್ದಲ್ಲ. ಇದು ಬರೋಬ್ಬರಿ ನಾಲ್ಕು ವರ್ಷಗಳ (2020-24) ಆಡಿಟ್ ವರದಿಯಲ್ಲಿ

ಶಿಸ್ತುಕ್ರಮಕ್ಕೆ ಸಿಇಒ ಹಿಂದೇಟು ಭ್ರಷ್ಟರಿಗೆ ಆನೆಬಲ ತಂದಿದೆಯೇ? Read More »

ಚಿಂಚೋಳಿಕರ್ ಹಾದಿಯಲ್ಲಿ ಅನಿಲ್ ಪಾಟೀಲ್..!

ಅನಿಲ್ ಪಾಟೀಲ್ ಕರಾಮತ್ತು ತಿಂಗಳಲ್ಲೇ ತೀರಿಕೊಂಡ ರಸ್ತೆ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮಾ:10 ನೋಡಿ ಇಲ್ಲಿ… ಚಿತ್ರಗಳಲ್ಲಿ ಕಾಣುತ್ತಿದೆಯಲ್ಲಾ ಆ ರಸ್ತೆ, ಅದು ಕಾಮಗಾರಿ ಮುಗಿದು ಕೇವಲ ಕೆಲವೇ ತಿಂಗಳುಗಳ ಹಸುಗೂಸು. ಆದರೆ ಆ ಹಸುಗೂಸು ಈಗಲೇ ಮುದಿಯಾಗಿದ್ದು ಸಾಲದೆಂಬಂತೆ ಅಲ್ಲಲ್ಲಿ ಬಿರುಕು ಬಿಟ್ಟು ತನ್ನ ಅಸ್ಥಿಪಂಜರವನ್ನು ಪ್ರದರ್ಶಿಸುತ್ತಿದೆ. ಸಿಮೆಂಟ್ ಮತ್ತು ಮರಳಿನ ಆ ಅಕ್ರಮ ಸಂಬಂಧದಲ್ಲಿ ಹುಟ್ಟಿದ ಈ ರಸ್ತೆ, ಲಂಚದ ಹಸಿವಿಗೆ ಬಲಿಯಾದ ಜೀವಂತ ಸಾಕ್ಷಿಯಂತೆ ಕಾಣುತ್ತಿದೆ. ​ಹಳೆಯ ‘ಘಟಾನುಘಟಿ’ಗಳ ಹಾದಿಯಲ್ಲೇ ಇಂದಿನ

ಚಿಂಚೋಳಿಕರ್ ಹಾದಿಯಲ್ಲಿ ಅನಿಲ್ ಪಾಟೀಲ್..! Read More »

ಸ್ವಾಹಾ’ ಪರ್ವ ಶಿಕ್ಷಣ ಇಲಾಖೆಯಲ್ಲಿ ಈ ವರ್ಷವೂ ಮುಂದುವರೆಯುತ್ತಾ ಹಪ್ತಾ ಪಯಣ?

50 ಸಾವಿರದ ಅಮಲು ಇಂದಿನ ಅಧಿಕಾರಿಗಳೂ ಅದೇ ‘ದಕ್ಷಿಣೆ’ಗೆ ಶರಣಾಗುವರೇ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಪೆ:26 ನೋಡಿ, ಕಾನೂನು ಅನ್ನೋದು ಬಡವನಿಗೆ ಮಾತ್ರ ಬೆತ್ತ ಹಿಡಿಯುತ್ತೆ, ದುಡ್ಡಿರೋ ದಂಧೆಕೋರರಿಗೆ ರತ್ನಗಂಬಳಿ ಹಾಸುತ್ತೆ ಅನ್ನೋದಕ್ಕೆ ಕೊಪ್ಪಳದ ಶಿಕ್ಷಣ ಇಲಾಖೆಯೇ ಸಾಕ್ಷಿ. ಅಜೂರೈಟ್ ಕ್ಲಾಸಸ್‌ನಂತಹ ಅಕ್ರಮ ಕೇಂದ್ರಗಳು ಈಗ ಬೀಗ ಹಾಕಿ ಪತ್ರ ನೀಡಿರಬಹುದು, ಆದರೆ ಅದರ ಹಿಂದೆ ಅಡಗಿರೋ ‘ಮಾಮೂಲಿ’ ದಂಧೆಯ ವಾಸನೆ ಇಡೀ ಜಿಲ್ಲೆಯನ್ನೇ ಆವರಿಸಿದೆ. ಡಿಡಿಪಿಐ ಸೋಮಶೇಖರ್ ಬಿ. ಪಾಟೀಲ್ ಮತ್ತು ಬಿಇಒ ಹನುಮಂತಪ್ಪನವರೇ..

ಸ್ವಾಹಾ’ ಪರ್ವ ಶಿಕ್ಷಣ ಇಲಾಖೆಯಲ್ಲಿ ಈ ವರ್ಷವೂ ಮುಂದುವರೆಯುತ್ತಾ ಹಪ್ತಾ ಪಯಣ? Read More »

ಸೋಮಶೇಖರ್-ಹನುಮಂತಪ್ಪ ಜೋಡಿ ಅಕ್ರಮದ ‘ಅಜೂರೈಟ್’ಗೆ ನೀವೇ ಬಾಡಿಗಾರ್ಡ್‌ಗಳಾ?

ಮಾಮೂಲಿ ವ್ಯವಹಾರವೋ ಅಥವಾ ಕರ್ತವ್ಯ ಲೋಪವೋ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ :ಪೆ:26 ನೋಡಿ, ಕೊಪ್ಪಳದ ಬೀದಿಗಳಲ್ಲಿ ಈಗ ಶಿಕ್ಷಣ ಅನ್ನೋದು ಬಜಾರ್‌ನಲ್ಲಿ ಸಿಗೋ ಬದನೆಕಾಯಿಗಿಂತ ಕಡೆಯಾಗಿದೆ. ಅಜೂರೈಟ್‌ನಂತಹ ಹತ್ತಾರು ‘ಅನಧಿಕೃತ’ ಅಂಗಡಿಗಳು ಎಗ್ಗಿಲ್ಲದೆ ವ್ಯಾಪಾರ ಮಾಡ್ತಿವೆ. ಆದರೆ ನಮ್ಮ ಜಿಲ್ಲೆಯ ಶಿಕ್ಷಣದ ‘ಅಧಿಪತಿಗಳು’ ಮಾತ್ರ ಯಾವುದೋ ಮೋಹನ ರಾಗಕ್ಕೆ ಮರುಳಾಗಿದ್ದಾರೆ! ​ಸೋಮಶೇಖರ್ ಪಾಟೀಲರ ‘ಮೌನ’ ರಾಗ!​ಡಿಡಿಪಿಐ ಸೋಮಶೇಖರ್ ಅವರೇ, ಲೈಸೆನ್ಸ್ ಇಲ್ಲದ ಈ ಅಕ್ರಮದ ಅಡ್ಡೆಗಳು ನಿಮ್ಮ ಕಚೇರಿಯ ಮೂಗಿನ ಕೆಳಗೇ ನಡೀತಿದ್ರೂ ನಿಮಗೆ ಕಾಣಿಸ್ತಿಲ್ಲ

ಸೋಮಶೇಖರ್-ಹನುಮಂತಪ್ಪ ಜೋಡಿ ಅಕ್ರಮದ ‘ಅಜೂರೈಟ್’ಗೆ ನೀವೇ ಬಾಡಿಗಾರ್ಡ್‌ಗಳಾ? Read More »

‘ನವಜೀವನ’ದ ಅಸಲಿ ಮುಖವಾಡ ಕಳಚಿದ ಸರ್ಕಾರಿ ದಾಖಲೆಗಳು!

ಪರವಾನಗಿ ಇಲ್ಲದ ‘ನವಜೀವನ’ಕ್ಕೆ ಅಭಯ ಹಸ್ತ; ರೋಗಿಗಳ ಪ್ರಾಣದ ಜೊತೆಗಿನ ಚೆಲ್ಲಾಟಕ್ಕೆ ಡಿ.ಎಚ್.ಓ ಲಿಂಗರಾಜ್ ಅವರೇ ನೇರ ಹೊಣೆ! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಫೆ:03 ಸತ್ತವರೂ ಎದ್ದು ಬಂದು ಓಡಾಡುತ್ತಾರೆ ಅಂದರೆ ನೀವು ನಂಬುತ್ತೀರಾ? ಇಲ್ಲ ತಾನೇ? ಆದರೆ ಕೊಪ್ಪಳದ ಆ ಹೊಸಪೇಟೆ ರಸ್ತೆಯ ಬ್ಯಾಂಕ್ ಆಫ್ ಬರೋಡಾ ಹಿಂದೆ ಇರುವ ಕಟ್ಟಡದಲ್ಲಿ ಇಂತಹದ್ದೊಂದು ಪವಾಡ ನಡೆಯುತ್ತಿದೆ! ಅಲ್ಲಿ ಸತ್ತಿರುವುದು ಮನುಷ್ಯನಲ್ಲ, ಬದಲಿಗೆ ಕಾನೂನು ಮತ್ತು ಆ ಆಸ್ಪತ್ರೆಯ ಪರವಾನಗಿ. ಆದರೂ ಅಲ್ಲಿ ‘ನವಜೀವನ’ದ ಹೆಸರಿನಲ್ಲಿ

‘ನವಜೀವನ’ದ ಅಸಲಿ ಮುಖವಾಡ ಕಳಚಿದ ಸರ್ಕಾರಿ ದಾಖಲೆಗಳು! Read More »

error: Content is protected !!
Scroll to Top