ಕ್ರೈಂ

‘ವೈದ್ಯಕೀಯ ಮಾಫಿಯಾ’ ಕೊಪ್ಪಳ ತಾಲೂಕಿನಲ್ಲಿ ನಕಲಿ ವೈದ್ಯರ ದರ್ಬಾರ್!

ಜಿಲ್ಲಾ ಆರೋಗ್ಯ ಇಲಾಖೆಯ ‘ಕಾಣದ ಕೈಗಳ’ ಕರಾಮತ್ತು! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ನಂ :12 (ಸಂಚಿಕೆ -02) ಕೊಪ್ಪಳ: ಜಿಲ್ಲೆಯ ಆರೋಗ್ಯ ಇಲಾಖೆಯ ಪಾರದರ್ಶಕ ಆಡಳಿತವು ಇಂದು ಅತಿದೊಡ್ಡ ಪ್ರಶ್ನಾರ್ಥಕ ಚಿಹ್ನೆಯ ಮುಂದೆ ನಿಂತಿದೆ. ತಾಲೂಕಿನಾದ್ಯಂತ ಎಲೆಕ್ಟ್ರೋಮಿಯೋಪತಿ ಹೆಸರಿನಲ್ಲಿ ಸುಮಾರು 100 ಕ್ಕೂ ಹೆಚ್ಚು ಅನಧಿಕೃತ ವೈದ್ಯರು ಯಾವುದೇ ಕೆಪಿಎಂಇ (KPME) ನೋಂದಣಿ ಇಲ್ಲದೆ ರಾಜಾರೋಷವಾಗಿ ಕ್ಲಿನಿಕ್‌ಗಳನ್ನು ನಡೆಸುತ್ತಿರುವ ಬಗ್ಗೆ ಹಲವಾರು ದೂರು ಬಂದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆರೋಗ್ಯ ಇಲಾಖೆಯ ಉನ್ನತ […]

‘ವೈದ್ಯಕೀಯ ಮಾಫಿಯಾ’ ಕೊಪ್ಪಳ ತಾಲೂಕಿನಲ್ಲಿ ನಕಲಿ ವೈದ್ಯರ ದರ್ಬಾರ್! Read More »

ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮದ ‘ಅಗ್ನಿ ಪರೀಕ್ಷೆ’

ಕೊಪ್ಪಳ ವಸತಿ ನಿಲಯಗಳಲ್ಲಿ ‘ಅನ್ನದಾನ’ಕ್ಕೆ ಕತ್ತರಿ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:04 (ಸಂಚಿಕೆ-06) ಕೊಪ್ಪಳ: ರಾಜ್ಯ ಮತ್ತು ಕೇಂದ್ರದ ಸಮ್ಮಿಲನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಮಕ್ಕಳಿಗೆ ವಿದ್ಯಾದಾನದ ಜೊತೆಗೆ ಅನ್ನದಾನ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಕೊಪ್ಪಳ ತಾಲೂಕಿನ ಕೆಲ ವಸತಿ ನಿಲಯಗಳ ವಾರ್ಡನ್‌ರ ಕೃತ್ಯಗಳಿಂದಾಗಿ ಅನ್ನಸಂತರ್ಪಣೆಯೇ ಚರ್ಚೆ ಗ್ರಾಸವಾಗಿದೆ. ​ಸರಕಾರವು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಬಿಡುಗಡೆ ಮಾಡಿದ ಪಿಡಿಎಸ್ (PDS) ಅಕ್ಕಿ ಮತ್ತು ಗೋಧಿಯನ್ನು ಭ್ರಷ್ಟಾಚಾರದ ಮಸಕು ಆವರಿಸಿದೆ ಎಂಬುದು ಸಾರ್ವಜನಿಕರ ಆಕ್ರೋಶದ ನುಡಿ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮದ ‘ಅಗ್ನಿ ಪರೀಕ್ಷೆ’ Read More »

ಡಿಡಿ ಅಜ್ಜಪ್ಪರ non corruptive ಮುಖವಾಡ ಕಳಚಿದ ಸಚಿನ್: “ನನಗೆ ಆದೇಶವಿಲ್ಲ, ನಾನೊಬ್ಬ ಸರ್ಕಾರಿ ನೌಕರನಲ್ಲ”!

​Koppal KRIDL ಜಾಲದಂತೆ: ಸಮಾಜ ಕಲ್ಯಾಣ ಇಲಾಖೆಯಲ್ಲೂ ಅಕ್ರಮದ ಮುನ್ನುಡಿ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:31 (ಸಂಚಿಕೆ-5) ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ (ಡಿಡಿ) ಶ್ರೀ ಅಜ್ಜಪ್ಪ ಸೊಗಲದ ಅವರ ಕೃಪಾಕಟಾಕ್ಷದಡಿಯಲ್ಲಿ ಅನಧಿಕೃತವಾಗಿ ಮೆರೆಯುತ್ತಿದ್ದ ಸಚಿನ್ ಯಾದವ್ ಕುರಿತ ‘ರಣ ಬೇಟೆ’ಯ ಸರಣಿ ವರದಿಯ ಪ್ರಭಾವ ಇದೀಗ ಸ್ಪಷ್ಟವಾಗಿದೆ. ದಿನಾಂಕ 29.10.2025ರ ಮಧ್ಯಾಹ್ನ 2:37ಕ್ಕೆ ‘ರಣ ಬೇಟೆ ತಂಡ’ವು ಸಚಿನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಆತ ತನ್ನ ಅಕ್ರಮ ಕರ್ತವ್ಯವನ್ನು ಕಾನೂನಾತ್ಮಕವಾಗಿ

ಡಿಡಿ ಅಜ್ಜಪ್ಪರ non corruptive ಮುಖವಾಡ ಕಳಚಿದ ಸಚಿನ್: “ನನಗೆ ಆದೇಶವಿಲ್ಲ, ನಾನೊಬ್ಬ ಸರ್ಕಾರಿ ನೌಕರನಲ್ಲ”! Read More »

ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ‘ಜ್ಞಾನಿ’ಗಳ ಗೋಮುಖ ವ್ಯಾಘ್ರ ಲೀಲೆ!

‘ಗೇಟ್‌ವೇ ಆಫ್ ಕರಪ್ಷನ್’: ಡಿಡಿ ಕೃಪಾಕಟಾಕ್ಷದಲ್ಲಿ ಕಳಂಕಿತ ‘ಲೂಟಿಕೋರ’ ಸಚಿನ್ ನಿರಂಕುಶ ಆಡಳಿತ!‌ ರಣಬೇಟೆ ನ್ಯೂಸ್‌ ಕೊಪ್ಪಳ ಅ:29 (ಸಂಚಿಕೆ-4) ಭೀಕರ ಭ್ರಷ್ಟಾಚಾರದ ಸರಣಿ ಸಂಚಿಕೆಗಳಲ್ಲಿ ಇದೀಗ ಬೆಳಕಿಗೆ ಬಂದಿರುವುದು, ಕೊಪ್ಪಳ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ (ಡಿಡಿ) ಕಚೇರಿಯ ನಾಚಿಕೆಗೇಡಿನ ಕರ್ಮಕಾಂಡ! ‘ಜ್ಞಾನ ಜಗತ್ತನ್ನು ಆಳುತ್ತದೆ’ ಎಂಬ ಸತ್ಯವಾಕ್ಯವನ್ನು ಬಂಡವಾಳ ಮಾಡಿಕೊಂಡು, ಸರ್ಕಾರಿ ಖಜಾನೆಯನ್ನೇ ಲೂಟಿ ಹೊಡೆಯಲು ಅನಧಿಕೃತ ಹೊರಗುತ್ತಿಗೆ ನೌಕರನೊಬ್ಬ ಡಿಡಿ ಅವರ ಕೃಪಾಕಟಾಕ್ಷದಿಂದಲೇ ರಾಜಮರ್ಯಾದೆ ಪಡೆದು ಮೆರೆಯುತ್ತಿದ್ದಾನೆ ಎಂಬುದು ಜಿಲ್ಲೆಯ ಆಡಳಿತ ವಲಯದಲ್ಲಿ

ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ‘ಜ್ಞಾನಿ’ಗಳ ಗೋಮುಖ ವ್ಯಾಘ್ರ ಲೀಲೆ! Read More »

ಸೊಗಲಾದ್ ಸಾಹೇಬರ ‘ಸ್ವಯಂ ರಾಜ್ಯ’: ಈ ಕಛೇರಿ ‘ಪ್ರಭುತ್ವ’ಕ್ಕೆ ಸೇರಿದ್ದೇ?

ಸರ್ಕಾರಿ ಆಜ್ಞೆಗೆ ಕೊಪ್ಪಳದಲ್ಲಿ ನಿರ್ಬಂಧ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:28 (ಸಂಚಿಕೆ-3) ಸಜ್ಜನರಿಗೆ ಶಿಸ್ತು, ದುರ್ಜನರಿಗೆ ಶಿಕ್ಷೆ ಎಂಬುದು ಆಡಳಿತದ ಮೂಲ ಮಂತ್ರ. ಆದರೆ, ಈ ಮೂಲ ಮಂತ್ರವನ್ನೇ ಮರೆತಂತೆ ಕಾಣುತ್ತಿರುವ ಕೊಪ್ಪಳ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಗಲಾದ್ ಸಾಹೇಬರ ವರ್ತನೆಗೆ ಸರ್ಕಾರಿ ಸನ್ನದಿನಲ್ಲಿ (ಕಛೇರಿಯಲ್ಲಿ) ಬಾರೀ ಧಿಕ್ಕಾರ ವ್ಯಕ್ತವಾಗಿದೆ. ಇವರು ಸರ್ಕಾರದ ಉನ್ನತ ಆಜ್ಞೆಗಳು ಮತ್ತು ಕಿರಿಯ ಅಧಿಕಾರಿಗಳ ಸಂಕಟದ ಮೊರೆಗಳನ್ನೂ ಕಡೆಗಣಿಸಿ, ತಮ್ಮ ಮನಸೋ ಇಚ್ಛೆ ವರ್ತಿಸುತ್ತಿರುವುದು

ಸೊಗಲಾದ್ ಸಾಹೇಬರ ‘ಸ್ವಯಂ ರಾಜ್ಯ’: ಈ ಕಛೇರಿ ‘ಪ್ರಭುತ್ವ’ಕ್ಕೆ ಸೇರಿದ್ದೇ? Read More »

ಹಾಸ್ಟೆಲ್ ಮಕ್ಕಳ ಅನ್ನಕ್ಕೆ ಕನ್ನ ಹಾಕಿದ ಅಧಿಕಾರಿಗಳು…!

ಟೆಂಡರ್ ಕರಾರುಗಳ ‘ಉಲ್ಲಂಘನೆ’: ಸಹಾಯಕ ನಿರ್ದೇಶಕರೇ, ದಾಖಲೆಗಳೇ ನಿಮ್ಮ ‘ಕಾನೂನಾತ್ಮಕ ಜವಾಬ್ದಾರಿ’! ರಣ ಬೇಟೆ ನ್ಯೂಸ್ ಕೊಪ್ಪಳ‌ ಅ:27(ಸಂಚಿಕೆ-2) ಕೊಪ್ಪಳ ಜಿಲ್ಲೆಯ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಆಹಾರ ಸಾಮಗ್ರಿಗಳ ಸರಬರಾಜಿನ ಕುರಿತ ಘೋರ ಅಕ್ರಮಗಳು ಇಂದು ಬಯಲಾಗಿವೆ. ದಿನಾಂಕ 05/04/2025 ರಿಂದ ಎರಡು ವರ್ಷಗಳ ಅವಧಿಗೆ ಗುತ್ತಿಗೆ ಪಡೆದ ಕೆ.ಎಸ್.ಸಿ.ಸಿ.ಎಫ್., ಬೆಂಗಳೂರು ಸಂಸ್ಥೆಯು, ಕಾರ್ಯಾದೇಶದ ಅಧಿನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ವಿದ್ಯಾರ್ಥಿಗಳ ಹಕ್ಕನ್ನು ಕಗ್ಗೊಲೆ ಮಾಡಿದೆ ಎಂಬುದು ರಣ ಬೇಟೆ

ಹಾಸ್ಟೆಲ್ ಮಕ್ಕಳ ಅನ್ನಕ್ಕೆ ಕನ್ನ ಹಾಕಿದ ಅಧಿಕಾರಿಗಳು…! Read More »

‘ಕಳಂಕದ ಕಥೆ’: ಶರಣಪ್ಪ ಚೌಹಾಣ್ ರ ‘ಅಧಿಕಾರ ರಥ’ಕ್ಕೆ ಅನ್ನವೇ ಆಹುತಿ!

ಹುಳ ಸಹಿತ ಅನ್ನ: ಅಧಿಕಾರಿಗಳ ಡಬಲ್ ರೋಲ್! ಸೊಗಲದ್ ಮೌನ, ಶರಣಪ್ಪಗೆ ‘ಪ್ರಭಾರ’ ಮೋಹ; ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯ. ರಣಬೇಟೆ ನ್ಯೂಸ್‌ ಕೊಪ್ಪಳ ಅ:25 ಕೊಪ್ಪಳ: ಪರಿಶಿಷ್ಟ ಜಾತಿ-1ರ ಬಾಲಕಿಯರ ವಸತಿ ನಿಲಯದಲ್ಲಿ ಇತ್ತೀಚೆಗೆ ಕಂಡುಬಂದ ‘ಬಾಲು ಹುಳ’ ಸಹಿತ ಊಟದ ಅನಾಚಾರವು ಸಮಾಜ ಕಲ್ಯಾಣ ಇಲಾಖೆಯ ಆಡಳಿತವನ್ನು ನಗೆಪಾಟಲಿಗೀಡು ಮಾಡಿದೆ. ಟೆಂಡರ್‌ದಾರ ಮತ್ತು ವಸತಿ ನಿಲಯದ ಅಧಿಕಾರಿಗಳ ನಡುವಿನ ‘ಅಕ್ರಮ ಒಳ ಒಪ್ಪಂದ’ದ ಬೃಹತ್ ಜಾಲ ಅಡಗಿದೆ ಎಂಬ ಗಂಭೀರ ಅನುಮಾನ ವ್ಯಕ್ತವಾಗಿದೆ. ಈ ಅನಾಚಾರವು

‘ಕಳಂಕದ ಕಥೆ’: ಶರಣಪ್ಪ ಚೌಹಾಣ್ ರ ‘ಅಧಿಕಾರ ರಥ’ಕ್ಕೆ ಅನ್ನವೇ ಆಹುತಿ! Read More »

‘ಕರ್ನಾಟಕ ಭೂ ಕಂದಾಯ ಕಾಯ್ದೆ’ಯ ಶೀಘ್ರ ಅನುಷ್ಠಾನಕ್ಕೆ ಕರೆ; ಇಲ್ಲವೇ ಲೋಕಾಯುಕ್ತದ ವಿಶೇಷ ಮೊಕದ್ದಮೆ.

ದಾಳಿಂಬೆಯ ವನದಲ್ಲಿ ಜಲಸಂಪತ್ತಿನ ಶವಸಂಸ್ಕಾರ: ಅಬ್ಬಿಗೇರಿ ಕೆರೆಯ ದುಸ್ಥಿತಿ; ಅಧಿಕಾರಿಗಳ ಮೌನಕ್ಕೆ 30(31)ರ ದಂಡಾಜ್ಞೆ ಸಿದ್ಧ. ಕೊಪ್ಪಳ ಜಿಲ್ಲೆಯಲ್ಲಿ ಸಾರ್ವಜನಿಕ ಸಂಪನ್ಮೂಲಗಳ ಮೇಲೆ ನಡೆಯುತ್ತಿರುವ ನಿರ್ಲಜ್ಜ ದುರಾಕ್ರಮಣದ ಸರಣಿಯಲ್ಲಿ, ಇರ್ಕಲ್ಗಡ ಹೋಬಳಿಯ ಅಬ್ಬಿಗೇರಿ ಗ್ರಾಮದ ಕೆರೆ ಒತ್ತುವರಿ ಪ್ರಕರಣವು ಆಡಳಿತ ಯಂತ್ರದ ನಿಷ್ಕ್ರಿಯತೆಗೆ ಕನ್ನಡಿ ಹಿಡಿದಿದೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಒಟ್ಟು 7 ಎಕರೆ 25 ಗುಂಟೆ ಕೆರೆ ಪ್ರದೇಶವನ್ನು ಪ್ರಭಾವಿ ವ್ಯಕ್ತಿಗಳು ರಾಜಾರೋಷವಾಗಿ ಒತ್ತುವರಿ ಮಾಡಿ, ಅಲ್ಲಿ ಆರ್ಥಿಕ ಲಾಭಕೋರರು ದಾಳಿಂಬೆ ತೋಟ ನಿರ್ಮಿಸಿರುವುದು, ಕೇವಲ ಭೂ

‘ಕರ್ನಾಟಕ ಭೂ ಕಂದಾಯ ಕಾಯ್ದೆ’ಯ ಶೀಘ್ರ ಅನುಷ್ಠಾನಕ್ಕೆ ಕರೆ; ಇಲ್ಲವೇ ಲೋಕಾಯುಕ್ತದ ವಿಶೇಷ ಮೊಕದ್ದಮೆ. Read More »

ನಗರಸಭೆ ಪಕ್ಕದಲ್ಲೇ ‘ಕುಡುಕರ ಕಲ್ಯಾಣ ಮಂಟಪ’; ಆಡಳಿತ ಯಂತ್ರದ ಮೌನ ಸಮ್ಮತಿಗೆ ಅರ್ಥವೇನು?

ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಅ :24 ಸಂಚಿಕೆ  (7) ಶೈಕ್ಷಣಿಕ ಸಂಸ್ಥೆಗಳ ‘ದೇಗುಲದ’ ಅಂಗಳದಲ್ಲಿ ‘ವ್ಯಸನದ ವನ’! ಅಧಿಕಾರಿಗಳ ಮೌನಕ್ಕೆ ಲೋಕಾಯುಕ್ತದಲ್ಲಿ ಉತ್ತರ ಅನಿವಾರ್ಯ! ಕೊಪ್ಪಳ ನಗರದ ಹೃದಯ ಭಾಗದಲ್ಲಿ ನೆಲೆಸಿರುವ ‘ಮಮತಾ ವೈನ್ಸ್ ಎಂಬ ಮದ್ಯದ ಮಳಿಗೆಯು, ಅಬಕಾರಿ ಇಲಾಖೆಯ ಮುಖ್ಯ ನಿಯಮಾವಳಿಯಾದ ಸಿಎಲ್‌-2 ಪರವಾನಿಗೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಸೀಸೆಯ ಮಾರಾಟದ ಜತೆಗೆ ಆವರಣದಲ್ಲಿ ಮದ್ಯಪಾನಕ್ಕೆ ಸಾರ್ವಜನಿಕವಾಗಿ ಅವಕಾಶ ನೀಡಿರುವ ಮಹಾ ಅನಾಚಾರ ಮುಂದುವರಿದಿದೆ. ಈ ಮಳಿಗೆಯು ಕೇವಲ ವ್ಯಾಪಾರದ ಸ್ಥಳವಲ್ಲ, ಬದಲಿಗೆ ಅರಾಜಕತೆಯ ಅರಮನೆ ಎಂಬುದು ನಮ್ಮ

ನಗರಸಭೆ ಪಕ್ಕದಲ್ಲೇ ‘ಕುಡುಕರ ಕಲ್ಯಾಣ ಮಂಟಪ’; ಆಡಳಿತ ಯಂತ್ರದ ಮೌನ ಸಮ್ಮತಿಗೆ ಅರ್ಥವೇನು? Read More »

ಅಬಕಾರಿ ಡಿ.ಸಿ. ಆಜ್ಞೆಯಲಿ ‘ರಕ್ಷಣಾ ಜಾಲ’!

ಡಿ.ಸಿ. ಪ್ರಶಾಂತ್ ಕುಮಾರ್‌ರದ್ದು ‘ಇಲಾಖಾ ಮಮಕಾರ’ವೇ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ: 16 (ಸಂಚಿಕೆ-06) ಕೊಪ್ಪಳ ಅಬಕಾರಿ ಸೀಮೆಯು ಇಂದು ಕಪ್ಪ ಕಾಸಿನ ಕೂಪವಾಗಿ ಪರಿವರ್ತಿತವಾಗಿದೆ ಎಂಬ ಘೋರ ಸತ್ಯವನು ರಣ ಬೇಟೆ ವೆಬ್ ನ್ಯೂಸ್ ಸಂಪಾದಕ ಶ್ರೀ ಮುತ್ತು ದೊಡ್ಮನೆ ಅವರು ದೂರಿನ ಮೂಲಕ ಬಯಲುಗೊಳಿಸಿರುತ್ತಾರೆ. ಈ ದೂರಿನ ಪ್ರಮುಖ ಸಾರಾಂಶವೇನೆಂದರೆ, ಸಾರ್ವಜನಿಕ ವಲಯದಲ್ಲಿ ಅಬಕಾರಿ ತಾಲೂಕು ನಿರೀಕ್ಷಕ ಮಂಜುನಾಥ್ ಗಲಗಲಿ ಅವರು ಈಶ್ವರ್ ದೇವಿ, ವಿಜಯ್, ಮಮತಾ, ರೇಣುಕಾ, ವಾಸು, ವೆಂಕಟೇಶ್ವರ ಮತ್ತು

ಅಬಕಾರಿ ಡಿ.ಸಿ. ಆಜ್ಞೆಯಲಿ ‘ರಕ್ಷಣಾ ಜಾಲ’! Read More »

error: Content is protected !!
Scroll to Top