ಕ್ರೈಂ

ಜೀವಜಲಕ್ಕೆ ಧಕ್ಕೆ: ಅಬ್ಬಿಗೇರಿ ಕೆರೆಯೇ ಅತಿಕ್ರಮಣಕಾರರ ಭ್ರಷ್ಟ ಭೋಗಕ್ಕೆ ಬಲಿ!

ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ವ್ಯಾಪ್ತಿಯಲ್ಲಿ ವಿಕೃತಿ. ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ : 07 ಜಿಲ್ಲೆಯಲ್ಲಿ ಭೂಕಬಳಿಕೆ ಮಾಫಿಯಾವು ಸರ್ಕಾರಿ ಸ್ವತ್ತಿನ ಮೇಲೆ ಎಸಗುತ್ತಿರುವ ಘೋರ ಅತಿಕ್ರಮಣದ ಕೃತ್ಯವು ಇದೀಗ ಬೆಳಕಿಗೆ ಬಂದಿದೆ. ಕೊಪ್ಪಳ ತಾಲೂಕಿನ ಇರ್ಕಲ್ಗಡ ಹೋಬಳಿಯ ಅಬ್ಬಿಗೇರಿ ಗ್ರಾಮದ ಜೀವನಾಡಿ ಎನಿಸಿದ ಸಣ್ಣ ನೀರಾವರಿ ವ್ಯಾಪ್ತಿಯ ಕೆರೆಯನ್ನೇ ಅಕ್ರಮ ಬಳಕೆದಾರರು ಸಂಪೂರ್ಣವಾಗಿ ದುರಾಕ್ರಮಣ ಮಾಡಿ, ಅಲ್ಲಿ ಲಾಭದಾಯಕ ಕೃಷಿ ಚಟುವಟಿಕೆಯ ನೆಪದಲ್ಲಿ ವಿಕೃತಿ ಮೆರೆದಿದ್ದಾರೆ.​ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ನೇರ ಅಧೀನಕ್ಕೆ […]

ಜೀವಜಲಕ್ಕೆ ಧಕ್ಕೆ: ಅಬ್ಬಿಗೇರಿ ಕೆರೆಯೇ ಅತಿಕ್ರಮಣಕಾರರ ಭ್ರಷ್ಟ ಭೋಗಕ್ಕೆ ಬಲಿ! Read More »

ವರ್ಗಾವಣೆಗೊಂಡ ಪಿಡಿಒಗಳ ಕರ್ತವ್ಯ ಲೋಪ:

ಕೊಪ್ಪಳದಲ್ಲಿ ‘ಅಕ್ರಮ’ ಆಡಳಿತದ ಕರಿನೆರಳು! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಅ:06 ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ) ಹೊರಡಿಸಿದ ಅಧಿಸೂಚನೆ ಮತ್ತು ತಿದ್ದುಪಡಿ ಆದೇಶಗಳನ್ವಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ವಿಶೇಷ ಪ್ರಕರಣ, ಕಡ್ಡಾಯ ಮತ್ತು ಸಾಮಾನ್ಯ ಕೋರಿಕೆ ವರ್ಗಾವಣೆಗಳನ್ನು ದಿನಾಂಕ 03-09-2025 ರಿಂದ 15-09-2025 ರ ಅವಧಿಯಲ್ಲಿ ಮಾಡಿ ಆದೇಶಗಳನ್ನು ಹೊರಡಿಸಲಾಗಿದೆ. ಈ ಆದೇಶಗಳ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವರ್ಗಾವಣೆಗೊಂಡ ಪಿಡಿಒಗಳು ಕರ್ತವ್ಯಕ್ಕೆ ಹಾಜರಾಗುವಲ್ಲಿ ಹಾಗೂ

ವರ್ಗಾವಣೆಗೊಂಡ ಪಿಡಿಒಗಳ ಕರ್ತವ್ಯ ಲೋಪ: Read More »

15 ಗ್ರಾ.ಪಂ. ಅಧಿಕಾರಿಗಳ ವಿರುದ್ಧ ತನಿಖೆಗೆ ಜಿ.ಪಂ. ಸಿಇಓ ಆದೇಶ

ಕುಕನೂರು ತಾಲೂಕು ಗ್ರಾ.ಪಂ. ವ್ಯಾಪ್ತಿಯ ಅಧಿಕಾರಿಗಳ ಎದೆಯಲ್ಲಿ ಢವಢವ ರಣಬೇಟೆ ನ್ಯೂಸ್ಕೊಪ್ಪಳ, ಸೆ.10: ಜಿಲ್ಲೆಯ ಕುಕನೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಾದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ 2020ರಿಂದ 2024ರ ಡಿಸೆಂಬರ್ 10ರ ವರೆಗೆ ಸಾಮಾಜಿಕ ಲೆಕ್ಕ ಪರಿಶೋಧನೆ ಅಡಿಯಲ್ಲಿ ವಸೂಲಾತಿ ಮತ್ತು ಆಕ್ಷೇಪಣೆ ಮೊತ್ತವನ್ನು ಸರಕಾರಕ್ಕೆ ಜಮಾ ಮತ್ತು ತಿರುವಳಿ ಮಾಡದೇ ಸರಕಾರಕ್ಕೆ ವಂಚಿಸಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಇನ್ನಿತರ ಸಿಬ್ಬಂದಿಗಳ ವಿಚಾರಣೆ ನಡೆಸಿ ಸೂಕ್ತ ಕ್ರಮ

15 ಗ್ರಾ.ಪಂ. ಅಧಿಕಾರಿಗಳ ವಿರುದ್ಧ ತನಿಖೆಗೆ ಜಿ.ಪಂ. ಸಿಇಓ ಆದೇಶ Read More »

ಉಂಡು ಹೋದ, ಕೊಂಡು ಹೋದ ಸೋಮಶೇಖರ ಬಿರಾದಾರ್

ಮತ್ತೆ ಮಾತೃ ಇಲಾಖೆಗೆ ವರ್ಗಾವಣೆಯಾದ ಪಡಿತರ ದಂಧೆಯ ಬಿಗ್‍ಬಾಸ್ ಬಿರಾದಾರ್ ರಣಬೇಟೆ ನ್ಯೂಸ್ ಗಂಗಾವತಿ, ಆ.30: ಕಳೆದ ಮೂರು ದಿನಗಳ ಹಿಂದೆ ನಗರದ ಕನಕಗಿರಿ ರಸ್ತೆ ಬಳಿಯ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ವಶಪಡಿಸಿಕೊಂಡ ನೂರಾರು ಕ್ವಿಂಟಾಲ್ ಅಕ್ಕಿ ಪ್ರಕರಣದ ಹಿಂದೆ ಆಹಾರ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಮಾತುಗಳು ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗಳ ಹಾಗೂ ಪಡಿತರ ಅಕ್ಕಿ ಅಕ್ರಮ ದಂಧೆಕೋರರ ವಲಯದಲ್ಲಿ ಕೇಳಿಬರುತ್ತಿರುವ ಬಗ್ಗೆ ರಣಬೇಟೆ ವೆಬ್‍ನ್ಯೂಸ್ ವಿಸ್ತೃತ ವರದಿ ಮಾಡಿತ್ತು. ಈ ವರದಿಯನ್ನು

ಉಂಡು ಹೋದ, ಕೊಂಡು ಹೋದ ಸೋಮಶೇಖರ ಬಿರಾದಾರ್ Read More »

ಲಂಚದ ರೂಪದಲ್ಲಿ ಸಂಗ್ರಹಿಸಿದ ಅಕ್ಕಿ ಮಾರಲು ಹೋಗಿ ಸಿಕ್ಕಿಬಿದ್ದರಾ ಖದೀಮರು…?

ಡಿಡಿ ಸೋಮಶೇಖರ್ ಬಿರಾದಾರ್ ಅವರೇ ಈ ಪ್ರಕರಣದ ಬಿಗ್‍ಬಾಸಾ…!!? ರಣಬೇಟೆ ನ್ಯೂಸ್ ಗಂಗಾವತಿ.ಆ.29: ಕಳೆದ ಮೂರು ದಿನಗಳ ಹಿಂದೆ ನಗರದ ಕನಕಗಿರಿ ರಸ್ತೆ ಬಳಿಯ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ವಶಪಡಿಸಿಕೊಂಡ ನೂರಾರು ಕ್ವಿಂಟಾಲ್ ಅಕ್ಕಿ ಪ್ರಕರಣದ ಹಿಂದೆ ಆಹಾರ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಮಾತುಗಳು ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗಳ ಹಾಗೂ ಪಡಿತರ ಅಕ್ಕಿ ಅಕ್ರಮ ದಂಧೆಕೋರರ ವಲಯದಲ್ಲಿ ಕೇಳಿಬರುತ್ತಿದೆ. ಗಂಗಾವತಿ ನಗರದ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ದುಬೈ, ಯುಎಇ ಮೂಲದ ಖಾಸಗಿ

ಲಂಚದ ರೂಪದಲ್ಲಿ ಸಂಗ್ರಹಿಸಿದ ಅಕ್ಕಿ ಮಾರಲು ಹೋಗಿ ಸಿಕ್ಕಿಬಿದ್ದರಾ ಖದೀಮರು…? Read More »

ಕರ್ತವ್ಯಲೋಪ ಹಿನ್ನಲೆಯಲ್ಲಿ ಸಗಟು ಮಳಿಗೆ ವ್ಯವಸ್ಥಾಪಕ ಸೋಮಶೇಖರ ಅಮಾನತು

ರಣಬೇಟೆ ನ್ಯೂಸ್ ಗಂಗಾವತಿ, ಆ.27: ನಗರದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಗಟು ಮಳಿಗೆಯ ಕಿರಿಯ ಸಹಾಯಕ ಹಾಗೂ ವ್ಯವಸ್ಥಾಪಕ ಸೋಮಶೇಖರ ಅವರನ್ನು ಕರ್ತವ್ಯಲೋಪ ಹಾಗೂ ಬೇಜವಾಬ್ದಾರಿ ನಡೆ ಹಿನ್ನಲೆಯಲ್ಲಿ ಅಮಾನತುಗೊಳಿಸಿ ಕರ್ನಾಟಕ ಸೇವಾ ಆಯೋಗ ಪ್ರಧಾನ ವ್ಯವಸ್ಥಾಪಕ ಹಾಗೂ ಶಿಸ್ತು ಪ್ರಾಧಿಕಾರ ಅಧಿಕಾರಿ ಸಿ.ಎನ್.ಮಂಜುನಾಥ ಅವರು ಮಂಗಳವಾರದಂದು ಆದೇಶ ಹೊರಡಿಸಿದ್ದಾರೆ.2022ರ ಜೂನ್ 15ರಂದು ಗಂಗಾವತಿ ತಾಲೂಕಿನ ವಿದ್ಯಾನಗರ ಬಡಾವಣೆಯ ಗೌರಿಶಂಕರ ರೈಸ್‍ಮಿಲ್‍ನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದೆ ಎಂದು ಬಂದ

ಕರ್ತವ್ಯಲೋಪ ಹಿನ್ನಲೆಯಲ್ಲಿ ಸಗಟು ಮಳಿಗೆ ವ್ಯವಸ್ಥಾಪಕ ಸೋಮಶೇಖರ ಅಮಾನತು Read More »

ಪಡಿತರ ಲೋಕದ ಪಾಪಿಗಳು : 02

ನಮ್ಮ ಹಿಂದೆ ಅಧಿಕಾರಿಗಳ ದಂಡೇ ಇದೆ. ಇವರೇನು ಕಿತ್ತಿಕೊಳ್ಳುತ್ತಾರೆ:ವೀರನಾಗ ಸಿಂಗಂ ನಂತೆ ಅಬ್ಬರಿಸಿ, ಮಂಗಂ ನಂತಾದ ಸೋಮಶೇಖರ್ ಬಿರಾದರ್* ರಣಬೇಟೆ ನ್ಯೂಸ್ ಗಂಗಾವತಿ.ಆ.22: ಕಳೆದ ಒಂದು ತಿಂಗಳಿನಿಂದ ನಮ್ಮ ರಣಬೇಟೆ ವೆಬ್ ನ್ಯೂಸ್ ನಿರಂತರವಾಗಿ ಪಡಿತರ ದಂಧೆ ಕುರಿತಂತೆ ಸರಣಿ ವರದಿಗಳನ್ನು ಮಾಡುತ್ತಿದೆ. ವರದಿಯಿಂದ ಬೆಚ್ಚಿದ ದಂಧೆಕೋರರು ಕೆಲ ದಿನಗಳ ಮಟ್ಟಿಗೆ ದಂಧೆ ಸ್ಥಗಿತಗೊಳಿಸಿದ್ದರು. ನಂತರ ಆಹಾರ ಹಾಗೂ ಪೋಲಿಸ್ ಇಲಾಖೆಯ ಆಯಾ ಕಟ್ಟಿನ ಅಧಿಕಾರಿಗಳನ್ನು ಸಂತೃಪ್ತಿಗೊಳಿಸಿ ಮತ್ತೆ ತಮ್ಮ ದಂಧೆ ಆರಂಭಿಸಿದ್ದಾರೆ. ಕಾರಟಗಿ ಮೂಲದ ಪ್ರಮುಖ

ಪಡಿತರ ಲೋಕದ ಪಾಪಿಗಳು : 02 Read More »

ಪಡಿತರ ಲೋಕದ ಪಾಪಿಗಳ ಕಥೆ: ೦೧

ಬಡವರ ಪಡಿತರ ಅಕ್ಕಿ ಮಕ್ಕುತ್ತಿರುವ ಕಾಂಗ್ರೆಸ್ ಹುಳುಗಳು ಯಾರು..? ‌ ರಣಬೇಟೆ ನ್ಯೂಸ್ ಕೊಪ್ಪಳ.ಆ.20: ಬಡವರ ಪಾಲಿನ ಅಕ್ಕಿಯನ್ನು ಉಳ್ಳವರು ದೋಚಿಕೊಂಡು ಕೋಟಿ, ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ. ಸಾಲದೆಂಬಂತೆ ಇಲ್ಲಿ ದುಡಿದ ಹಡಬಿ ಹಣದಿಂದಲೇ ಜನಪ್ರತಿನಿಧಿಗಳ ಸಾಮೀಪ್ಯ ಸಾಧಿಸಿ ಸರ್ಕಾರಿ ಅಧಿಕಾರಿಗಳನ್ನು ತಮ್ಮ ನಿಯಂತ್ರಣ ದಲ್ಲಿಟ್ಟುಕೊಂಡು ಸರ್ವಾಧಿಕಾರಿಗಳಂತೆ ಮರೆಯುತ್ತಿದ್ದಾರೆ.ಪಡಿತರ ಅಕ್ಕಿ ಅಕ್ರಮ ದಂಧೆಯ ಜಾಲ ಅದೆಷ್ಟರ ಮಟ್ಟಿಗೆ ಬಲವಾಗಿ ಬೇರೂರಿದೆ ಎಂದರೆ, ಆಹಾರ ಇಲಾಖೆಯ ಅಧಿಕಾರಿಗಳು ಇವರ ತಂಟೆಗೆ ಹೋಗಲು ಹೆದರುತ್ತಾರೆ. ತಮಗೆ ಸಹಕಾರ ನೀಡುವ

ಪಡಿತರ ಲೋಕದ ಪಾಪಿಗಳ ಕಥೆ: ೦೧ Read More »

ತೆರೆಮರೆಯ ಹಿಂದೆ ನಡೆಯಿತಾ ಪ್ರಕರಣ ಮುಚ್ಚಿಹಾಕುವ ಷಡ್ಯಂತ್ರ..!?

ಕಾರಟಗಿ ರೈಸ್ ಮಿಲ್ ಮೇಲೆ ದಾಳಿ ನಡೆದು ವಾರ ಕಳೆದರೂ ದಾಖಲಾಗದ ಪ್ರಕರಣ ರಣಬೇಟೆ ನ್ಯೂಸ್ ಕೊಪ್ಪಳ.ಆ.16: ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ, ತಾವರಗೇರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಡಿತರ ಅಕ್ಕಿಯ ಕಳ್ಳ ದಂಧೆಯ ಕುರಿತಂತೆ ನಮ್ಮ ರಣಬೇಟೆ ವೆಬ್ ನ್ಯೂಸ್ ವಿಸ್ತೃತ ವರದಿ ಪ್ರಕಟಿಸಿತ್ತು. ಅದರ ಜಾಡು ಬೆನ್ನು ಹತ್ತಿದ ಬಳ್ಳಾರಿಯ ಐಜಿ ನೇತೃತ್ವದ ಪೊಲೀಸ್ ತಂಡ ಇತ್ತೀಚೆಗೆ ಕೆಲ ವಾರಗಳ ಹಿಂದೆ ಕಾರಟಗಿ ಹೊರವಲಯದ ಬೂದಗುಂಪಾ ರಸ್ತೆಯ ವ್ಹೇ ಬ್ರಿಜ್ ಸಮೀಪದ ರೈಸ್ ಮಿಲ್ ಒಂದರ

ತೆರೆಮರೆಯ ಹಿಂದೆ ನಡೆಯಿತಾ ಪ್ರಕರಣ ಮುಚ್ಚಿಹಾಕುವ ಷಡ್ಯಂತ್ರ..!? Read More »

ಕಾಮುಕರ ಖಾಯಂ ಅಡ್ಡೆಯಂತಾದ ವೃಕ್ಷ ಉದ್ಯಾನವನ

ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಹೆಸರಿನ ಉದ್ಯಾನವನದಲ್ಲಿ ಇದೆಂತಾ ಅಹಸ್ಯ..!‌ ರಣಬೇಟೆ ನ್ಯೂಸ್ ಕೊಪ್ಪಳ.ಆ.14: ತಾಲೂಕಿನ ರುದ್ರಾಪುರ, ಕಾಸನಕಂಡಿ ಸಮೀಪದ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಹೆಸರಿನ ಈ ವೃಕ್ಷ ಉದ್ಯಾನವನದಲ್ಲಿ ಬೆಳಂಬೆಳಿಗ್ಗೆ ನೀವೊಮ್ಮೆ ವಾಯು ವಿಹಾರಕ್ಕೆ ಹೋದರೆ ಹಸುರಿನ ವನಸಿರಿ ಕಾಣುವ ಬದಲು ಪ್ಲಾಸ್ಟಿಕ್, ಕಸ, ಮದ್ಯದ ಬಾಟಲಿ, ಪೌಚುಗಳ ಜತೆಗೆ ಕಾಂಡೋಮ್ ಗಳು ಅಹಸ್ಯವಾಗಿ ನಿಮ್ಮ ಕಣ್ಣಿಗೆ ರಾಚುತ್ತವೆ. ಪ್ರಕೃತಿಯ ಮಡಿಲಲ್ಲಿ ಬೆಳೆದ ಹೂ, ಬಳ್ಳಿ, ಗಿಡ, ಮರಗಳ ನಡುವೆ ಹದಿಹರೆಯದ

ಕಾಮುಕರ ಖಾಯಂ ಅಡ್ಡೆಯಂತಾದ ವೃಕ್ಷ ಉದ್ಯಾನವನ Read More »

error: Content is protected !!
Scroll to Top