Muttappa Doddamani

ಕುಕನೂರು ಠಾಣೆಯ ಪೊಲೀಸ್ ಸಬ್ ಇನ್ಸ್ಪೇಕ್ಟರ್ ವಿರುದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು..!

ರಣಬೇಟೆ ನ್ಯೂಸ್‌ ಕೂಕನೂರ. ಕೂಕನೂರ ತಾಲೂಕಿನ ಕಕ್ಕಿಹಳ್ಳಿ ಗ್ರಾಮದ ಇಬ್ಬರು ಹಿರಿಯ ವ್ಯಕ್ತಿಗಳ ಮೇಲೆ ಕೆಇಬಿಯ ದಂಡ ಪಾವತಿಸಿಲ್ಲ ಎಂದು ಠಾಣೆಗೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಕುರಿತು ಇಂದು ಕಕ್ಕಿಹಳ್ಳಿ ಗ್ರಾಮದ ನಾರಾಯಣಪ್ಪ ಕಟ್ಟಿಮನಿ ಹಾಗೂ ಶಂಕ್ರಪ್ಪ ಸೂಳಕೇರಿ ಎಂಬುವವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೊಪ್ಪಳ ಇವರಿಗೆ ಕುಕನೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗುರುರಾಜ್ ಟಿ ವಿರುದ್ಧ ದೂರು ನೀಡಿದ್ದಾರೆ. ಪಿಎಸ್ಐ ಗುರುರಾಜ್ […]

ಕುಕನೂರು ಠಾಣೆಯ ಪೊಲೀಸ್ ಸಬ್ ಇನ್ಸ್ಪೇಕ್ಟರ್ ವಿರುದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು..! Read More »

ಗುಣಾತ್ಮಕ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಸದೃಢಗೊಳಿಸಿ-ಶಿವಪ್ಪ ಇಬೇರಿ

ರಣಬೇಟೆ ನ್ಯೂಸ್‌ ಕೂಕನೂರ. ಇತ್ತೀಚಿನ ಆಧುನಿಕ ದಿನಗಳಲ್ಲಿ ಪ್ರತಿಯೊಂದು ರಂಗವು ಸ್ಪರ್ಧಾತ್ಮಕವಾಗಿ ಕೂಡಿದ್ದು ನಮ್ಮ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವುದರೊಂದಿಗೆ ಭವಿಷ್ಯದ ದಿನಗಳಿಗೆ ಸಮರ್ಥರನ್ನಾಗಿಸಿ ಸದೃಢಗಳಿಸೋಣ ಎಂದು ಮುಖ್ಯೋಪಾಧ್ಯಾಯ ಶಿವಪ್ಪ ಇಬೇರಿ ಹೇಳಿದರು ಪಟ್ಟಣದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಶಿವಪ್ಪ ಮಾತನಾಡುತ್ತ ಇಂದಿನ ವಿದ್ಯಾರ್ಥಿಗಳು ಪ್ರತಿಯೊಂದು ಹಂತದಲ್ಲಿ ಸ್ಪರ್ಧಾತ್ಮಕ ಎದುರಾಳಿಗಳನ್ನು ಎದುರಿಸಿ ಮುಂದಿನ ಶಿಕ್ಷಣಕ್ಕೆ ಪಾದರ್ಪಣೆ ಮಾಡುವ ಅನಿವಾರ್ಯತೆ

ಗುಣಾತ್ಮಕ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಸದೃಢಗೊಳಿಸಿ-ಶಿವಪ್ಪ ಇಬೇರಿ Read More »

ತೂಕ ಮತ್ತು ಸಾಧನಗಳ ತಪಾಸಣೆ ಮಾಡಿದ ನಿರೀಕ್ಷಕ ಬದಿಯುದ್ದಿನ್ ಅಹ್ಮದ್.

ರಣಬೇಟೆ ನ್ಯೂಸ್‌ ಕೊಪ್ಪಳ. ಕೊಪ್ಪಳ ನಗರದಲ್ಲಿ ಬೀದಿಬದಿ ವ್ಯಾಪಾರಸ್ಥರ ತೂಕ ಮತ್ತು ಸಾಧನಗಳ ತಪಾಸಣೆಯನ್ನು ಮಾಡಲಾಯಿತು. ಕಾನೂನು ಮತ್ತು ಮಾಪನ ಶಾಸ್ತ್ರದ ನಿರೀಕ್ಷಕರಾದ ಎಂ. ಬದಿಯುದ್ದೀನ್ ಅಹಮದ್ ಅವರು ತೂಕ ಮತ್ತು ಸಾಧನಗಳು ಸರಿಯಿಲ್ಲದ ವ್ಯಾಪಾರಸ್ಥರ ಮೇಲೆ ಮೊಕದ್ದಮೆ ದಾಖಲಿಸಿ ದಂಡ ವಿಧಿಸಿದರು. ನಗರದ ಜವಾಹರ ರಸ್ತೆ, ಅಶೋಕ ಸರ್ಕಲ್ ಸೇರಿದಂತೆ ವಿವಿಧಡೆ ಬೀದಿ ಬದಿ ವ್ಯಾಪಾರಸ್ಥರು ತೂಕ ಮತ್ತು ಸಾಧನಗಳು ಸರಿಯಾಗಿ ಇಟ್ಟುಕೊಂಡು ಗ್ರಾಹಕರಿಗೆ ಕಾಣುವಂತೆ ಇರಬೇಕು, ಬೀದಿ ಬದಿ ವ್ಯಾಪಾರಸ್ಥರು ಕಾನೂನು ಮತ್ತು ಮಾಪನ

ತೂಕ ಮತ್ತು ಸಾಧನಗಳ ತಪಾಸಣೆ ಮಾಡಿದ ನಿರೀಕ್ಷಕ ಬದಿಯುದ್ದಿನ್ ಅಹ್ಮದ್. Read More »

ಬೆದವಟ್ಟಿ ಶಿವಸಂಗಮೇಶ್ವರಶ್ರೀಗಳ ಪುಣ್ಯ ಸ್ಮರಣೋತ್ಸವ.

ಮಠಾಧೀಶರ ಹೃದಯ ಸಿಂಹಾಸನದಲ್ಲಿ ಶಾಶ್ವತ ಸ್ಥಾನ ಅಲಂಕರಿಸಿದ ಶ್ರೀಗಳು-ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯರು ರಣಬೇಟೆ ನ್ಯೂಸ್‌ ಕೂಕನೂರ ಶ್ರೀಶೈಲ ಪೀಠದ ಅಧೀನದಲ್ಲಿರುವ ಬೆದವಟ್ಟಿ ಸಂಸ್ಥಾನ ಹಿರೇಮಠದ ಪೂಜ್ಯರಾದ ಲಿಂಗೈಕ್ಯ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯರು ಅನೇಕ ಮಠಾಧೀಶರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ಸ್ಥಾನ ಅಲಂಕರಿಸಿದ್ದಾರೆ ಎಂದು ಯಲಬುರ್ಗಾ ಪಟ್ಟಣದ ಹಿರೇಮಠದ ಪೂಜ್ಯರಾದ ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು ಇತ್ತೀಚಿಗೆ ಲಿಂಗೈಕ್ಯರಾದ ತಾಲೂಕಿನ ಬೆದವಟ್ಟಿ ಹಿರೇಮಠದ ಪರಮಪೂಜ್ಯ ಶ್ರೀ ಶಿವಸಂಗಮೇಶ್ವರ ಶ್ರೀಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಭಾನುವಾರ ಪಟ್ಟಣದ ಅನ್ನದಾನಿಶ್ವರ ಶಾಖಾ ಮಠದಲ್ಲಿ

ಬೆದವಟ್ಟಿ ಶಿವಸಂಗಮೇಶ್ವರಶ್ರೀಗಳ ಪುಣ್ಯ ಸ್ಮರಣೋತ್ಸವ. Read More »

ರಣಬೇಟೆ ನ್ಯೂಸ್‌ ಫಲಶೃತಿ!

ರಣಬೇಟೆ ನ್ಯೂಸ್‌ ಕೂಕನೂರ ಕೊಳಚೆಯಿಂದ ಕೂಡಿದ ನೀರಿನ ಟ್ಯಾಂಕ್; ಸ್ವಚ್ಛಗೋಳಿದ ನೀರು ಮತ್ತು ನೈರ್ಮಲಿಕರಣ ಇಲಾಖೆ ಕುಕನೂರು ತಾಲೂಕಿನ ಬನ್ನಿ ಕೊಪ್ಪ ಗ್ರಾಮದಲ್ಲಿರುವ ಭೂಗತ ನೀರಿನ ತೊಟ್ಟಿಯಲ್ಲಿ ಸುಮಾರು ಒಂದು ಅಡಿಯಷ್ಟು ಕೆಸರು ಸಂಗ್ರಹವಾಗಿದ್ದು, ಭಾನುವಾರ ಟ್ಯಾಂಕ್ ಶುಚಿಗೊಳಿಸುವ ಕಾರ್ಯ ಬರದಿಂದ ಸಾಗಿತು. ಸುಮಾರು ಒಂದು ವರ್ಷಗಳಿಂದ 20 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯವುಳ್ಳ 39 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಭೂಗತ ನೀರಿನ ತೊಟ್ಟಿಯಲ್ಲಿ ಕೊಳಚೆ ಮಣ್ಣು ಸೇರಿಕೊಂಡಿದ್ದು ಅದರಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ ಎಂಬ ಸುದ್ದಿಯನ್ನು

ರಣಬೇಟೆ ನ್ಯೂಸ್‌ ಫಲಶೃತಿ! Read More »

ಬಡವರ ಅನ್ನ ಭಾಗ್ಯ ಕಾಳಸಂತೆಯಲ್ಲಿ ಮಾರಾಟ!

ರಣಬೇಟೆ ನ್ಯೂಸ್‌ ಗಂಗಾವತಿ. ಪಡಿತರ ಅಕ್ಕಿ ಮಾಫಿಯ ಕಡಿವಾಣ ಯಾವಾಗ ಆಹಾರ ಇಲಾಖೆಯ ಉಪನಿರ್ದೇಶಕರೇ? ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಮತ್ತೆ ಪಡಿತರ ದಂಧೆಕೋರರ ಹಾವಳಿ ಹೆಚ್ಚಾಗಿದ್ದು, ಯಾರ ಭಯವೂ ಇಲ್ಲದೇ ರಾಜರೋಷವಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆಯೇ ಪಡಿತರ ಅಕ್ಕಿ ಕೊಂಡುಕೊಳ್ಳುವ ವ್ಯವಹಾರ ನಡೆಯುತ್ತಿದೆ. ಇವೆಲ್ಲ ಗೊತ್ತಿದ್ರೂ ಕೂಡ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಆಹಾರ ನಿರೀಕ್ಷಕರು ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಭಯವೂ ಇಲ್ಲದೇ ರಾಜರೋಷವಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆಯೇ ಕೊಂಡುಕೊಳ್ಳುವ

ಬಡವರ ಅನ್ನ ಭಾಗ್ಯ ಕಾಳಸಂತೆಯಲ್ಲಿ ಮಾರಾಟ! Read More »

ಕೊಳಚೆಯಿಂದ ಕೂಡಿದ ನೀರಿನ ಟ್ಯಾಂಕ್; ಗ್ರಾಮಸ್ಥರ ಆಕ್ರೋಶ!

ರಣಬೇಟೆ ನ್ಯೂಸ್‌ ಕೊಪ್ಪಳ. ಜಿಲ್ಲೆಯ 39 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಭುಗತ ನೀರಿನ ತೊಟ್ಟಿಯಲ್ಲಿ ಸುಮಾರು ಒಂದು ಅಡಿಯಷ್ಟು ಕೆಸರು ಸಂಗ್ರಹವಾಗಿದ್ದು ಇದೆ ಕೆಸರುಮಯ ನೀರನ್ನು ಗ್ರಾಮಗಳಿಗೆ ಕುಡಿಯುವ ಉದ್ದೇಶದಿಂದ ಪೂರೈಕೆ ಆಗುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ಜರುಗಿದೆ.ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಕರ್ನಾಟಕ ಮೂಲಭೂತ ಅಭಿವೃದ್ಧಿ ನಿಯಮಿತ ಕೊಪ್ಪಳ ಇವರಿಂದ ರಾಜೀವ್ ಗಾಂಧಿ ಸಬ್ ಮಿಷನ್ ಕುಡಿಯುವ ನೀರು ಯೋಜನೆಯ ಅಡಿಯಲ್ಲಿ ಬನ್ನಿಕೊಪ್ಪ ಮತ್ತು ಇನ್ನಿತರ 38 ಹಳ್ಳಿಗಳಿಗೆ

ಕೊಳಚೆಯಿಂದ ಕೂಡಿದ ನೀರಿನ ಟ್ಯಾಂಕ್; ಗ್ರಾಮಸ್ಥರ ಆಕ್ರೋಶ! Read More »

ಭಾವೈಕ್ಯತೆಯಿಂದ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿ-ರಾಘವೇಂದ್ರ ಹಿಟ್ನಾಳ

ರಣಬೇಟೆ ನ್ಯೂಸ್ಕೊಪ್ಪಳ. ಯಾವುದೇ ಧರ್ಮದ ಕಾರ್ಯಕ್ರಮಗಳನ್ನು ಗ್ರಾಮದ ಜನರೆಲ್ಲರೂ ಒಗ್ಗೂಡಿಕೊಂಡು ಭಾವೈಕ್ಯತೆಯಿಂದ ಆಚರಣೆ ಮಾಡುವುದರಿಂದ ಎಲ್ಲಾ ಧರ್ಮದ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು. ತಾಲೂಕಿನ ಹಳೆ ಬಂಡಿ ಹರ್ಲಾಪುರ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಶನಿವಾರ ಸಂಭ್ರಮದಿಂದ ಜರುಗಿದ್ದು ನೂರಾರು ಭಕ್ತರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು ಗ್ರಾಮದಲ್ಲಿ ಡೊಳ್ಳು ಕುಣಿತ ಬಾಜಾ ಭಜಂತ್ರಿ ಯೊಂದಿಗೆ ಕುಂಬೋತ್ಸವ ಮೆರವಣಿಗೆ ಜರುಗಿತು. ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ

ಭಾವೈಕ್ಯತೆಯಿಂದ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿ-ರಾಘವೇಂದ್ರ ಹಿಟ್ನಾಳ Read More »

ಭ್ರಷ್ಟ ಅಧೀಕ್ಷಕ ನರಸಪ್ಪ ಹಟಾವೋ! ಆರ್ ಟಿ ಓ ಕಾರ್ಯಾಲಯ ಬಚಾವೋ!

ರಣಬೇಟೆ ನ್ಯೂಸ್‌ಕೊಪ್ಪಳ ಪ್ರಾದೇಶಿಕ ಸಾರಿಗೆ ಕಚೇರಿ ಎಂದರೇ ಅಷ್ಟೇ ಅಲ್ಲ. ಮಧ್ಯವರ್ತಿಗಳ ಮೂಲಕ ಸರ್ಕಾರಕ್ಕೆ ವಂಚನೆ, ದಗಾ, ಹಿಂಡು ಹಿಂಡು ಜನ, ಚಿಕ್ಕ ತಪ್ಪು, ದೊಡ್ಡ ಆದಾಯ! ಓದುಗರಿಗೆ ಇದು ಸಾಮನ್ಯ ಸುದ್ಧಿ ಆದರೆ ಇದು ಸಾವಿರ ಕೊಳವೆಗಳ ಹುತ್ತ. ಯಾಮಾರಿದರೆ ಕಚೇರಿಯಲ್ಲಿ ಕೂಡಿ ಹಾಕುವ ಕೆಲಸದಿಂದ ಹಿಡಿದು ಹಲ್ಲೆ ಮತ್ತು ನಕಲಿ ಪ್ರಕರಣ ಅದಕ್ಕೂ ಹೆದರದಿದ್ದರೇ! ಆರ್ ಟಿ ಓ ಕಚೇರಿಯ ಮಾಜಿ ಅಧಿಕಾರಿ ಹಾಲಿ ಕಚೇರಿ ಕಪಿಮುಷ್ಟಿ ನಿಯಂತ್ರಕರೊಬ್ಬರ ಬಲಗೈ-ಎಡಗೈ ಬಂಟರಿಂದ ಬೆದರಿಗೆ ಅವರಿಗೂ

ಭ್ರಷ್ಟ ಅಧೀಕ್ಷಕ ನರಸಪ್ಪ ಹಟಾವೋ! ಆರ್ ಟಿ ಓ ಕಾರ್ಯಾಲಯ ಬಚಾವೋ! Read More »

ಯಲಬುರ್ಗಾ ಪಟ್ಟಣದಲ್ಲಿ ಹಾಡ ಹಗಲೇ ಕಾರಿನ ಗ್ಲಾಸ್ ಒಡೆದು 3.40 ಲಕ್ಷ ಹಣ ಎಗರಿಸಿದ ಖದೀಮರು..!!

ರಣಬೇಟೆ ನ್ಯೂಸ್ ಯಲಬುರ್ಗ : ಹಾಡ ಹಗಲೇ ಕಾರಿನ ಗ್ಲಾಸ್ ಒಡೆದು 3.40 ಲಕ್ಷ ಹಣ ಎಗರಿಸಿ ಕಳ್ಳರು ಪರಾರಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದಿದೆ. ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಬಸವರಾಜ ಲಮಾಣಿ ಹಣ ಕಳೆದುಕೊಂಡವರು. ವಿಪರ್ಯಾಸ ಎಂದರೆ ಕೇವಲ 500 ಮೀಟರ್‌ ದೂರದಲ್ಲಿ ಯಲಬುರ್ಗಾ ಪೊಲೀಸ್ ಠಾಣೆ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಇದೆ. ನಿನ್ನೆ (ಜೂನ್ 12ರಂದು) ಸುಮಾರು ಸಂಜೆ 4:30ಕ್ಕೆ ಪಟ್ಟಣದ ಜೇಸ್ಕಾಂ ಆವರಣದಲ್ಲಿ ತಮ್ಮ ಕಾರು

ಯಲಬುರ್ಗಾ ಪಟ್ಟಣದಲ್ಲಿ ಹಾಡ ಹಗಲೇ ಕಾರಿನ ಗ್ಲಾಸ್ ಒಡೆದು 3.40 ಲಕ್ಷ ಹಣ ಎಗರಿಸಿದ ಖದೀಮರು..!! Read More »

error: Content is protected !!
Scroll to Top