Muttappa Doddamani

ಚಾಕು ತಿವಿತ, ಮಹಿಳೆ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯ.

ಪ್ರಕರಣ ದಾಖಲಿಸಲು ನಗರ ಠಾಣಾ ಪೋಲೀಸರ ಹಿಂದೇಟು! ರಣಬೇಟೆ ನ್ಯೂಸ್ ಗಂಗಾವತಿ.ಜೂ.25: ನಗರದ ಮುಜಾವರ್ ಕ್ಯಾಂಪಿನ ಕುಟುಂಬವೊಂದರ ಕೌಟುಂಬಿಕ ಜಗಳದಲ್ಲಿ ಮಧ್ಯ ಪ್ರವೇಶಿಸಿದ ಏಳು ಜನರ ಯುವಕರ ತಂಡವೊಂದು ಓರ್ವ ಮಹಿಳೆ ಸೇರಿದಂತೆ ಮೂವರು ಯುವಕರ ಮೇಲೆ ಚಾಕು, ಬಡಿಗೆಗಳಿಂದ ಮಾರಣಾಂತಿಕ ದಾಳಿ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ನಗರದ ಮುಜಾವರ್ ಕ್ಯಾಂಪಿನ ಕುಟುಂಬವೊಂದರಲ್ಲಿ ಕಳೆದ ಶುಕ್ರವಾರದಂದು ವಾಗ್ವಾದ ನಡೆಯುತ್ತಿದ್ದ ವೇಳೆ ಅದೇ ವಾರ್ಡಿನ ಯುವಕರ ಗುಂಪೊಂದು ಮಧ್ಯ ಪ್ರವೇಶಿಸಿ ಯುವಕನೊಬ್ಬನ ಮೇಲೆ […]

ಚಾಕು ತಿವಿತ, ಮಹಿಳೆ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯ. Read More »

ಕೈಕೊಟ್ಟ ಖಾಸಗಿ ಕಂಪನಿಗಳು; ಅತಂತ್ರ ಸ್ಥಿತಿಯಲ್ಲಿ ರೈತ!

ಬೆಳೆದಷ್ಟು ಹತ್ತಿ ಬೀಜ ಖರೀದಿಗೆ ಖಾಸಗಿ ಕಂಪನಿಗಳ ನಿರಾಕರಣೆ: ಹತಾಶರಾಗಿ ಹತ್ತಿ ಬೆಳೆ ನಾಶಪಡಿಸುತ್ತಿರುವ ರೈತರು. ರಣಬೇಟೆ ನ್ಯೂಸ್‌ ಕೊಪ್ಪಳ. ರೈತರನ್ನು ಪುಸಲಾಯಿಸಿ ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿಸಿದ್ದ ವಿವಿಧ ಖಾಸಗಿ ಬೀಜದ ಕಂಪನಿಗಳು ಈಗ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ರೈತರನ್ನು ನಡುನೀರಿನಲ್ಲಿ ಕೈಬಿಟ್ಟಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.ಜಿಲ್ಲೆಯ ಕುಷ್ಟಗಿ ತಾಲೂಕಿನ ಅತ್ಯಂತ ಹತ್ತಿ ಬೀಜ ಉತ್ಪಾದನೆ ಬೆಳೆ ಬೆಳೆದ ರೈತರು ಸದ್ಯ ಅಕ್ಷರಶಃ ಕಂಗಾಲಾಗಿದ್ದಾರೆ.ಕಡಿಮೆ ಪ್ರದೇಶದಲ್ಲಿ ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿದರೆ ಒಂದಷ್ಟು ಹಣ ಕೈಸೇರಿ ಕುಟುಂಬಗಳ ನಿರ್ವಹಣೆಗೆ

ಕೈಕೊಟ್ಟ ಖಾಸಗಿ ಕಂಪನಿಗಳು; ಅತಂತ್ರ ಸ್ಥಿತಿಯಲ್ಲಿ ರೈತ! Read More »

ಅಕ್ರಮ ಮರಳು ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ.

ರಣಬೇಟೆ ನ್ಯೂಸ್‌ ಕೊಪ್ಪಳ. ಭಾರತೀಯ ಜನತಾ ಪಕ್ಷ ಕೊಪ್ಪಳ ಜಿಲ್ಲಾ ಮೊರ್ಚಾ ವತಿಯಿಂದ ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಮನವಿ ಸಲ್ಲಿಸಿದ ನಂತರ ಭಾರತೀಯ ಜನತಾ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಬಸವರಾಜ ದಡೇಸುಗೂರು ಮಾತನಾಡಿ ಕೊಪ್ಪಳ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿ ಜರುಗುತ್ತಿದ್ದು ಮರಳು ದಂಧೆ ಕೋರರಿಗೆ ಕಾನೂನು ವ್ಯವಸ್ಥೆಯ ಯಾವುದೇ ರೀತಿಯ ಭಯವಿಲ್ಲದ ವಾತಾವರಣ ನಿರ್ಮಿಸಿಕೊಂಡಿದ್ದಾರೆ. ನೈಸರ್ಗಿಕ ಸಂಪತ್ತನ್ನು ಅಕ್ರಮವಾಗಿ ಕೊಳ್ಳೆ ಹೊಡೆಯುತ್ತಿರುವ

ಅಕ್ರಮ ಮರಳು ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ. Read More »

ಮಕ್ಕಳ ಅಸಹಜ ಸಾವು ಸಂಭವಿಸದಂತೆ ಅಧಿಕಾರಿಗಳು ಗಮನಹರಿಸಿ: ಶೇಖರಗೌರ ಜಿ. ರಾಮತ್ನಾಳ

ರಣಬೇಟೆ ನ್ಯೂಸ್‌ ಕೊಪ್ಪಳ. ಮಕ್ಕಳ ಅಸಹಜ ಸಾವಿನ ಪ್ರಕರಣಗಳು ಸಂಭವಿಸದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸೂಕ್ತ ಗಮನಹರಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌರ ಜಿ. ರಾಮತ್ನಾಳ ಹೇಳಿದರು.ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಕೆ.ಟಿ. ತಿಪ್ಪೇಸ್ವಾಮಿ ಅವರ ಉಪಸ್ಥಿತಿಯಲ್ಲಿ ಕೊಪ್ಪಳ ಜಿಲ್ಲೆಯ “ಮಕ್ಕಳ ಅಸಹಜ ಸಾವಿನ ಪ್ರಕರಣಗಳನ್ನು ತಡೆಗಟ್ಟುವ ಸಂಬಂಧ” ವಿವಿಧ ಭಾಗೀದಾರರ ಇಲಾಖೆಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಮಕ್ಕಳ ಅಸಹಜ ಸಾವು ಸಂಭವಿಸದಂತೆ ಅಧಿಕಾರಿಗಳು ಗಮನಹರಿಸಿ: ಶೇಖರಗೌರ ಜಿ. ರಾಮತ್ನಾಳ Read More »

ಪುಷ್ಪಾ..ಪುಷ್ಪಲತಾ…ಪ್ಲವರ್ ನಹೀ ಫೈಯರ್…!! ನಕಲಿ ಫೈಯರ್ ಹಿಂದಿನ ಅಸಲಿ ಕಹಾನಿ…!!

ರಣಬೇಟೆ ನ್ಯೂಸ್ ಕೊಪ್ಪಳ ಜೂ.20: ತಾಲೂಕಿನ ಹಿರೇಸಿಂಧೋಗಿ ಬಳಿಯ ಮರಳು ಅಕ್ರಮ ಗಣಿಗಾರಿಕೆ ಅಡ್ಡೆಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ನೇತೃತ್ವದಲ್ಲಿ ಬುಧವಾರ ತಡರಾತ್ರಿ ನಡೆದ ದಾಳಿಯು ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಂದಾಸ್ ಆಗಿ ನಡೆಯುತ್ತಿದ್ದ ಈ ಅಕ್ರಮ ದಂಧೆಯ ಬಗ್ಗೆ ಅರಿವು ಇದ್ದರೂ ಕೂಡ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಪರಿಸರ, ಕಂದಾಯ ಇಲಾಖೆಯ ಸ್ಯಾಂಡ್ ಮಾನಿಟರಿಂಗ್ ತಂಡ ಹಾಗೂ ಪೊಲೀಸ್ ಇಲಾಖೆಗಳು ಇಲ್ಲಿಯವರೆಗೂ ಕಣ್ಮುಚ್ಚಿ ಕುಳಿತು, ಈಗ ಏಕಾಏಕಿ

ಪುಷ್ಪಾ..ಪುಷ್ಪಲತಾ…ಪ್ಲವರ್ ನಹೀ ಫೈಯರ್…!! ನಕಲಿ ಫೈಯರ್ ಹಿಂದಿನ ಅಸಲಿ ಕಹಾನಿ…!! Read More »

ಅಕ್ರಮ ಮರಳುಗಾರಿಕೆ ಅಧಿಕಾರಿಗಳಿಂದ ದಾಳಿ; ಯಂತ್ರಗಳ ವಶ!

ಅಕ್ರಮ ಮರಳುಗಾರಿಕೆ ದಂಧೆಯಲ್ಲಿ ತೊಡಗಿದ್ದ ಸ್ಥಳದ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಯಂತ್ರಗಳನ್ನು ವಶಪಡಿಸಿಕೊಂಡನೀಡಿದ್ದಾರೆ ಅಕ್ರಮ ಮರಳುಗಾರರಿಗೆ ಶಾಕ್ ನೀಡಿದ್ದಾರೆ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಹತ್ತಿರ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದವರ ಮೇಲೆ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರಿಯಾಜ್ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ, ಪೊಲೀಸ್, ಅರಣ್ಯ, ಪರಿಸರ, ಕಂದಾಯ ಇಲಾಖೆಯ ಸ್ಯಾಂಡ್ ಮಾನಿಟರಿಂಗ್ ತಂಡದ ವಿವಿಧ ಅಧಿಕಾರಿಗಳು ದಾಳಿ ಮಾಡಿದ್ದು ಮರಳು ಗಣಿಗಾರಿಕೆ ಕೇಂದ್ರ

ಅಕ್ರಮ ಮರಳುಗಾರಿಕೆ ಅಧಿಕಾರಿಗಳಿಂದ ದಾಳಿ; ಯಂತ್ರಗಳ ವಶ! Read More »

ಬಸಾಪುರದಲ್ಲಿ ಕಾಲುವೆ ಸೇತುವೆ ಹಾನಿ: ಖಾಸಗಿ ರಿಸಾರ್ಟ್ ಬಲ ಪ್ರಭಾವ?

ರಣಬೇಟೆ ನ್ಯೂಸ್‌ ಕೊಪ್ಪಳ ತಾಲ್ಲೂಕು, ಬಂಡಿ ಹರ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಗ್ರಾಮದಲ್ಲಿ ರೈತರ ಬಳಕೆಗೆ ನಿರ್ಮಿಸಲಾದ ಕಾಲುವೆ ಸೇತುವೆ ಇದೀಗ ವಿವಾದದ ಕಣವಾಗಿದ್ದು, ಗ್ರಾಮಸ್ಥರಲ್ಲಿ ಆಕ್ರೋಶ ಮೂಡಿಸಿದೆ. ಮೂಲಗಳ ಪ್ರಕಾರ, ಕೆಲ ಖಾಸಗಿ ರಿಸಾರ್ಟ್ ಮಾಲೀಕರು ತಮ್ಮ ವಾಣಿಜ್ಯ ಉಪಯೋಗಕ್ಕಾಗಿ ಕಾಲುವೆಯ ಸೇತುವೆಯ ತಡೆಗೋಡೆಯನ್ನು ರಾತ್ರಿಕಾಲದಲ್ಲಿ ಸಿಸಿ ಡ್ರಿಲ್ಲಿಂಗ್ ಉಪಯೋಗಿಸಿ ಹಾನಿಗೊಳಿಸಿರುವ ಬಗ್ಗೆ ಆರೋಪ ಕೇಳಿಬಂದಿದೆ. ಬಸಾಪುರದಲ್ಲಿ ಕಾಲುವೆ ಮೂಲಕ ನೀರು ಹರಿದು ರೈತರ ಭೂಮಿಗಳಿಗೆ ನೆರವಾಗುತ್ತಿದೆ. ಈ ನಿಟ್ಟಿನಲ್ಲಿ ನಿರ್ಮಿಸಲಾದ ಸೇತುವೆ, ಗ್ರಾಮದ

ಬಸಾಪುರದಲ್ಲಿ ಕಾಲುವೆ ಸೇತುವೆ ಹಾನಿ: ಖಾಸಗಿ ರಿಸಾರ್ಟ್ ಬಲ ಪ್ರಭಾವ? Read More »

ಕೋಟಿ ನುಂಗಿದ ಲೂಟಿಕೊರರು!

ಭಾಗ್ಯನಗರ ಪಟ್ಟಣ ಪಂಚಾಯತಿಯ ಲೆಕ್ಕ ಪರಿಶೋಧನ ವರದಿಯಿಂದ ಭಾರಿ ಅಕ್ರಮ ಬಯಲು! ಪಟ್ಟಣ ಪಂಚಾಯತಿಯ ಪರ ಮುಖ್ಯಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್! ನಿರೀಕ್ಷಿಸಿ….

ಕೋಟಿ ನುಂಗಿದ ಲೂಟಿಕೊರರು! Read More »

ಕೊಪ್ಪಳ ಜಿಲ್ಲಾಡಳಿತಕ್ಕೆ ಮೇಜರ್ ಸರ್ಜರಿ!

ರಣಬೇಟೆ ನ್ಯೂಸ್‌ ಕೊಪ್ಪಳ. ಕೊಪ್ಪಳ ಜಿಲ್ಲೆಗೆ ಜಿಲ್ಲಾಧಿಕಾರಿಗಳ ಬದಲಾವಣೆ ಸಾರ್ವಜನಕವಾಗಿ ಪ್ರತಿ ಒಬ್ಬರ ಮೊಗದಲ್ಲಿ ಸಂತಸ ತಂದಿದೆ ನೂತನವಾಗಿ ಕೊಪ್ಪಳ ಜಿಲ್ಲೆಗೆ ಜಿಲ್ಲಾಧಿಕಾರಿಗಳಾಗಿ ಆಗಮಿಸಿರುವ ಸುರೇಶ ಇಟ್ನಾಳ ಅವರಿಂದ ಕೊಪ್ಪಳದಲ್ಲಿ ನಡೆಯುವ ಅತಿಯಾದ ಭ್ರಷ್ಟಚಾರಕ್ಕೆ ಕಡಿವಾಣ ಬಿದ್ದರೇ ಸಾಕು! ಅಕ್ರಮ ಮರಳು ದಂಧೆ, ಅತಿಯಾದ ಪಡಿತರ ಅಕ್ಕಿ ಮಾಫಿಯ, ಗಣಿ ಮಾಫಿಯ, ರಿಯಲ್ ಎಸ್ಟೇಟ್, ಮತ್ತು ಪತ್ರಕರ್ತ ಮತ್ತು ಮಾಹಿತಿಹಕ್ಕು ಬಳಕೆದಾರರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡುವ ಅಧಿಕಾರಿಗಳ ನಿಯಂತ್ರಣ! ಸದರಿ ಜಿಲ್ಲಾಧಿಕಾರಿಗಳ ಕಚೇರಿಯ ಅವಕ-ಜವಕ

ಕೊಪ್ಪಳ ಜಿಲ್ಲಾಡಳಿತಕ್ಕೆ ಮೇಜರ್ ಸರ್ಜರಿ! Read More »

ಕೆ.ಕೆ.ಆರ್.ಡಿ.ಬಿ ಯೋಜನೆಯಡಿ ಹೈಮಾಸ್ಕ್ ದೀಪಗಳನ್ನು ಅಳವಡಿಸದೇ ಬೋಗಸ್ ಬಿಲ್ ತಯಾರಿಸಿ ಹಣ ಎತ್ತುವಳಿ: ಹೆಚ್. ವಸಂತಕುಮಾರ

ರಣಬೇಟೆ ನ್ಯೂಸ್‌ ಗಂಗಾವತಿ. ಗಂಗಾವತಿ: ನಗರದ ಗಣೇಶ ಸರ್ಕಲ್‌ನಲ್ಲಿ ಮತ್ತು ೧೮ ಸಮಾಜದ ಸ್ಮಶಾನದಲ್ಲಿ ಹೈ ಮಾಸ್ಕ್ ದೀಪಗಳನ್ನು ಅಳವಡಿಸಲು ಕೆ.ಕೆ.ಆರ್.ಡಿ.ಬಿ. ಯೋಜನೆ ಅಡಿಯಲ್ಲಿ ಹಣ ಮಂಜೂರಾಗಿರುತ್ತದೆ. ಆದರೆ ಸದರಿ ಕಾಮಗಾರಿಯನ್ನು ನಿರ್ವಹಿಸದೇ ಬೋಗಸ್ ದಾಖಲೆಗಳನ್ನು ಸೃಷ್ಟಿಮಾಡಿಕೊಂಡು ಸರ್ಕಾರದ ಹಣವನ್ನು ಲೂಟಿ ಮಾಡಿರುತ್ತಾರೆ ಎಂದು ಕರ್ನಾಟಕ ದಲಿತ ರಕ್ಷಣ ವೇದಿಕೆ ಜಿಲ್ಲಾಧ್ಯಕ್ಷರಾದ ಹೆಚ್. ವಸಂತಕುಮಾರ ಕಟ್ಟಿಮನಿ ಆರೋಪಿಸಿದರು.ಅವರು ಸದರಿ ಕಾಮಗಾರಿಯಲ್ಲಿ ಭ್ರಷ್ಟಾಚಾರವೆಸಗಿದ ಅಧಿಕಾರಿಗಳನ್ನು ಅಮಾನತ್ತುಗೊಳಿಸಲು ಒತ್ತಾಯಿಸಿ, ಜೂನ್-೧೭ ರಂದು ತಾ.ಪಂ ನಡೆದ ಕೆ.ಡಿ.ಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ

ಕೆ.ಕೆ.ಆರ್.ಡಿ.ಬಿ ಯೋಜನೆಯಡಿ ಹೈಮಾಸ್ಕ್ ದೀಪಗಳನ್ನು ಅಳವಡಿಸದೇ ಬೋಗಸ್ ಬಿಲ್ ತಯಾರಿಸಿ ಹಣ ಎತ್ತುವಳಿ: ಹೆಚ್. ವಸಂತಕುಮಾರ Read More »

error: Content is protected !!
Scroll to Top