Muttappa Doddamani

ಆಹಾರ ನಿಗಮದ ಉಗ್ರಾಣದಲ್ಲಿ ನಡೆದ ಅಂದಾದುಂದಿಯ ಕಿಂಗ್ ಪಿನ್ ಯಾರು…?

ಅಷ್ಟಕ್ಕೂ ಈ ಜುಬೇರ ಯಾರು..? ಆತನಿಗೆ ಸರ್ಕಾರಿ ಗೋದಾಮಿನಲ್ಲೇನು ಕೆಲಸ…? ರಣಬೇಟೆ ನ್ಯೂಸ್ಗಂಗಾವತಿ, ಆ.31: ಕಳೆದ ಆರು ದಿನಗಳ ಹಿಂದೆ ನಗರದ ಕನಕಗಿರಿ ರಸ್ತೆ ಬಳಿಯ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ವಶಪಡಿಸಿಕೊಂಡ ನೂರಾರು ಕ್ವಿಂಟಾಲ್ ಅಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ತಲೆದಂಡವಾಗಿದೆ. ಸದರಿ ಪ್ರಕರಣದ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿ ತನಿಖಾ ತಂಡ ರಚಿಸಿ ಆದೇಶ ಹೊರಡಿಸಲಾಗಿದೆ. ಸದ್ಯಕ್ಕೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಹಾಗೂ ಅಪರ […]

ಆಹಾರ ನಿಗಮದ ಉಗ್ರಾಣದಲ್ಲಿ ನಡೆದ ಅಂದಾದುಂದಿಯ ಕಿಂಗ್ ಪಿನ್ ಯಾರು…? Read More »

ಉಂಡು ಹೋದ, ಕೊಂಡು ಹೋದ ಸೋಮಶೇಖರ ಬಿರಾದಾರ್

ಮತ್ತೆ ಮಾತೃ ಇಲಾಖೆಗೆ ವರ್ಗಾವಣೆಯಾದ ಪಡಿತರ ದಂಧೆಯ ಬಿಗ್‍ಬಾಸ್ ಬಿರಾದಾರ್ ರಣಬೇಟೆ ನ್ಯೂಸ್ ಗಂಗಾವತಿ, ಆ.30: ಕಳೆದ ಮೂರು ದಿನಗಳ ಹಿಂದೆ ನಗರದ ಕನಕಗಿರಿ ರಸ್ತೆ ಬಳಿಯ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ವಶಪಡಿಸಿಕೊಂಡ ನೂರಾರು ಕ್ವಿಂಟಾಲ್ ಅಕ್ಕಿ ಪ್ರಕರಣದ ಹಿಂದೆ ಆಹಾರ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಮಾತುಗಳು ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗಳ ಹಾಗೂ ಪಡಿತರ ಅಕ್ಕಿ ಅಕ್ರಮ ದಂಧೆಕೋರರ ವಲಯದಲ್ಲಿ ಕೇಳಿಬರುತ್ತಿರುವ ಬಗ್ಗೆ ರಣಬೇಟೆ ವೆಬ್‍ನ್ಯೂಸ್ ವಿಸ್ತೃತ ವರದಿ ಮಾಡಿತ್ತು. ಈ ವರದಿಯನ್ನು

ಉಂಡು ಹೋದ, ಕೊಂಡು ಹೋದ ಸೋಮಶೇಖರ ಬಿರಾದಾರ್ Read More »

ಲಂಚದ ರೂಪದಲ್ಲಿ ಸಂಗ್ರಹಿಸಿದ ಅಕ್ಕಿ ಮಾರಲು ಹೋಗಿ ಸಿಕ್ಕಿಬಿದ್ದರಾ ಖದೀಮರು…?

ಡಿಡಿ ಸೋಮಶೇಖರ್ ಬಿರಾದಾರ್ ಅವರೇ ಈ ಪ್ರಕರಣದ ಬಿಗ್‍ಬಾಸಾ…!!? ರಣಬೇಟೆ ನ್ಯೂಸ್ ಗಂಗಾವತಿ.ಆ.29: ಕಳೆದ ಮೂರು ದಿನಗಳ ಹಿಂದೆ ನಗರದ ಕನಕಗಿರಿ ರಸ್ತೆ ಬಳಿಯ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ವಶಪಡಿಸಿಕೊಂಡ ನೂರಾರು ಕ್ವಿಂಟಾಲ್ ಅಕ್ಕಿ ಪ್ರಕರಣದ ಹಿಂದೆ ಆಹಾರ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಮಾತುಗಳು ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗಳ ಹಾಗೂ ಪಡಿತರ ಅಕ್ಕಿ ಅಕ್ರಮ ದಂಧೆಕೋರರ ವಲಯದಲ್ಲಿ ಕೇಳಿಬರುತ್ತಿದೆ. ಗಂಗಾವತಿ ನಗರದ ಆಹಾರ ಇಲಾಖೆಯ ಸರಕಾರಿ ಉಗ್ರಾಣದಲ್ಲಿ ದುಬೈ, ಯುಎಇ ಮೂಲದ ಖಾಸಗಿ

ಲಂಚದ ರೂಪದಲ್ಲಿ ಸಂಗ್ರಹಿಸಿದ ಅಕ್ಕಿ ಮಾರಲು ಹೋಗಿ ಸಿಕ್ಕಿಬಿದ್ದರಾ ಖದೀಮರು…? Read More »

ಹೋರಾಟ, ಸಂಘರ್ಷದಿಂದ ಬದುಕು ಕಟ್ಟಿಕೊಂಡ ದಲಿತ ನಾಯಕ

ದಲಿತ ಸಮುದಾಯದ ಪವರ್ ಬ್ರಾಂಡ್ ಗಾಳೆಪ್ಪ ಪೂಜಾರ್ ರಣಬೇಟೆ ನ್ಯೂಸ್ ಕೊಪ್ಪಳ.ಆ.29: ಹಸಿವು, ಬಡತನ, ಅವಮಾನ ಸಾಮಾಜಿಕ ಶೋಷಣೆಗಳ ನಡುವೆ ಎದೆಗುಂದದೆ ಅವಿರತ ಹೋರಾಟ ಹಾಗೂ ಸಂಘರ್ಷದಿಂದ ಬದುಕು ಕಟ್ಟಿಕೊಂಡು ತನ್ನ ವ್ಯಕ್ತಿತ್ವವನ್ನು ಸಮಾಜಮುಖಿಯಾಗಿ ಮತ್ತೊಬ್ಬರಿಗೆ ಮಾದರಿಯಾಗುವಂತೆ ಜೀವನ ರೂಪಿಸಿಕೊಳ್ಳುವುದು ಸಣ್ಣ ಮಾತಲ್ಲ. ಹಾಗೆ ತನ್ನನ್ನು ಕಡೆಗಣಿಸಿದವರ ಮಧ್ಯೆ ಪ್ರಭಾವಿ ರಾಜಕೀಯ ದಲಿತ ಮುಖಂಡರಾಗಿ ಬೆಳದು ದೃಢವಾಗಿ ನಿಂತವರು ಗಾಳೆಪ್ಪ ಹನುಮಂತಪ್ಪ ಪೂಜಾರ್. ಪ್ರಸ್ತುತ ಇವರ ಹೆಸರು ಕೊಪ್ಪಳ ಜಿಲ್ಲೆಯಲ್ಲಿ ದಲಿತ ಸಮುದಾಯದ ಪವರ್ ಬ್ರಾಂಡ್ ಗಾಳೆಪ್ಪ

ಹೋರಾಟ, ಸಂಘರ್ಷದಿಂದ ಬದುಕು ಕಟ್ಟಿಕೊಂಡ ದಲಿತ ನಾಯಕ Read More »

ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ಜರುಗಿದ ತುಂಗಭದ್ರ ಆರತಿ ಮಹೋತ್ಸವ

ತುಂಗಭದ್ರಾ ನದಿಗೆ ಸಚಿವ, ಸಂಸದ, ಶಾಸಕರಿಂದ ಬಾಗಿನ ಸಮರ್ಪಣೆ ‌ರಣಬೇಟೆ ನ್ಯೂಸ್ ಕೊಪ್ಪಳ.ಆ. 27: ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರದಲ್ಲಿ ಮಂಗಳವಾರ ಸಂಜೆ ನಡೆದ ತುಂಗಾರತಿ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಕೊಪ್ಪಳ ಜಿಲ್ಲಾಡಳಿತ ಹಾಗೂ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇದೇ ಪ್ರಥಮ ಬಾರಿಗೆ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರದ ತುಂಗಭದ್ರಾ ನದಿತೀರದಲ್ಲಿ ತುಂಗಭದ್ರ ಆರತಿ ಮಹೋತ್ಸವ ಕಾರ್ಯಕ್ರಮವನ್ನು ಪವಿತ್ರ

ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ಜರುಗಿದ ತುಂಗಭದ್ರ ಆರತಿ ಮಹೋತ್ಸವ Read More »

ಕರ್ತವ್ಯಲೋಪ ಹಿನ್ನಲೆಯಲ್ಲಿ ಸಗಟು ಮಳಿಗೆ ವ್ಯವಸ್ಥಾಪಕ ಸೋಮಶೇಖರ ಅಮಾನತು

ರಣಬೇಟೆ ನ್ಯೂಸ್ ಗಂಗಾವತಿ, ಆ.27: ನಗರದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಗಟು ಮಳಿಗೆಯ ಕಿರಿಯ ಸಹಾಯಕ ಹಾಗೂ ವ್ಯವಸ್ಥಾಪಕ ಸೋಮಶೇಖರ ಅವರನ್ನು ಕರ್ತವ್ಯಲೋಪ ಹಾಗೂ ಬೇಜವಾಬ್ದಾರಿ ನಡೆ ಹಿನ್ನಲೆಯಲ್ಲಿ ಅಮಾನತುಗೊಳಿಸಿ ಕರ್ನಾಟಕ ಸೇವಾ ಆಯೋಗ ಪ್ರಧಾನ ವ್ಯವಸ್ಥಾಪಕ ಹಾಗೂ ಶಿಸ್ತು ಪ್ರಾಧಿಕಾರ ಅಧಿಕಾರಿ ಸಿ.ಎನ್.ಮಂಜುನಾಥ ಅವರು ಮಂಗಳವಾರದಂದು ಆದೇಶ ಹೊರಡಿಸಿದ್ದಾರೆ.2022ರ ಜೂನ್ 15ರಂದು ಗಂಗಾವತಿ ತಾಲೂಕಿನ ವಿದ್ಯಾನಗರ ಬಡಾವಣೆಯ ಗೌರಿಶಂಕರ ರೈಸ್‍ಮಿಲ್‍ನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದೆ ಎಂದು ಬಂದ

ಕರ್ತವ್ಯಲೋಪ ಹಿನ್ನಲೆಯಲ್ಲಿ ಸಗಟು ಮಳಿಗೆ ವ್ಯವಸ್ಥಾಪಕ ಸೋಮಶೇಖರ ಅಮಾನತು Read More »

ಮಾದಿಗ ಸಮುದಾಯದ ಮಾಣಿಕ್ಯ ಗೂಳಪ್ಪ ಹಲಗೇರಿ

ದಲಿತ ಯುವಕರ ದಾರಿದೀಪ, ಸರ್ವ ಸಮುದಾಯದ ಸ್ನೇಹಿತ ರಣಬೇಟೆ ನ್ಯೂಸ್ ಕೊಪ್ಪಳ.ಆ.25: ಕೆಲವರು ಇರುತ್ತಾರೆ, ಯಾವುದೇ ಸ್ವಾರ್ಥ ಮನೋಭಾವ, ಲಾಭ, ನಷ್ಟದ ಹಂಗಿಲ್ಲದೇ ಥಟ್ಟಂತ ನೆರವಿಗೆ ಧಾವಿಸಿ ಬಿಡುತ್ತಾರೆ. ಅವರಿದ್ದಲಿ ಬೆಟ್ಟದಂತಹ ಸಮಸ್ಯೆಗಳು ಮಂಜಿನಂತೆ ಕರಗಿಬಿಡುತ್ತವೆ. ಅವರ ಸುತ್ತಮುತ್ತಲಿನ ವಾತಾವರಣ ಆಹ್ಲಾದಕರ ಹಾಗೂ ನೆಮ್ಮದಿಯ, ಸಾಂತ್ವನದ, ಭರವಸೆಯ ತಾಣದಂತಾಗಿ ಬಿಡುತ್ತವೆ. ಅಂತಹ ಅಪರೂಪದ ಗುಣ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿ ಸರ್ವ ಸಮುದಾಯದ ಸ್ನೇಹಜೀವಿ ದಲಿತ ಮುಖಂಡ ಗೂಳಪ್ಪ ಹಲಗೇರಿ.ಪಾದರಸದಂತೆ ಸದಾ ಲವಲವಿಕೆಯಿಂದ ಹಸನ್ಮುಖದೊಂದಿಗೆ ಜನಸಾಮಾನ್ಯರೊಂದಿಗೆ ಬೆರೆಯುವ ಈ

ಮಾದಿಗ ಸಮುದಾಯದ ಮಾಣಿಕ್ಯ ಗೂಳಪ್ಪ ಹಲಗೇರಿ Read More »

ಪಡಿತರ ಲೋಕದ ಪಾಪಿಗಳು : 02

ನಮ್ಮ ಹಿಂದೆ ಅಧಿಕಾರಿಗಳ ದಂಡೇ ಇದೆ. ಇವರೇನು ಕಿತ್ತಿಕೊಳ್ಳುತ್ತಾರೆ:ವೀರನಾಗ ಸಿಂಗಂ ನಂತೆ ಅಬ್ಬರಿಸಿ, ಮಂಗಂ ನಂತಾದ ಸೋಮಶೇಖರ್ ಬಿರಾದರ್* ರಣಬೇಟೆ ನ್ಯೂಸ್ ಗಂಗಾವತಿ.ಆ.22: ಕಳೆದ ಒಂದು ತಿಂಗಳಿನಿಂದ ನಮ್ಮ ರಣಬೇಟೆ ವೆಬ್ ನ್ಯೂಸ್ ನಿರಂತರವಾಗಿ ಪಡಿತರ ದಂಧೆ ಕುರಿತಂತೆ ಸರಣಿ ವರದಿಗಳನ್ನು ಮಾಡುತ್ತಿದೆ. ವರದಿಯಿಂದ ಬೆಚ್ಚಿದ ದಂಧೆಕೋರರು ಕೆಲ ದಿನಗಳ ಮಟ್ಟಿಗೆ ದಂಧೆ ಸ್ಥಗಿತಗೊಳಿಸಿದ್ದರು. ನಂತರ ಆಹಾರ ಹಾಗೂ ಪೋಲಿಸ್ ಇಲಾಖೆಯ ಆಯಾ ಕಟ್ಟಿನ ಅಧಿಕಾರಿಗಳನ್ನು ಸಂತೃಪ್ತಿಗೊಳಿಸಿ ಮತ್ತೆ ತಮ್ಮ ದಂಧೆ ಆರಂಭಿಸಿದ್ದಾರೆ. ಕಾರಟಗಿ ಮೂಲದ ಪ್ರಮುಖ

ಪಡಿತರ ಲೋಕದ ಪಾಪಿಗಳು : 02 Read More »

ಪಡಿತರ ಲೋಕದ ಪಾಪಿಗಳ ಕಥೆ: ೦೧

ಬಡವರ ಪಡಿತರ ಅಕ್ಕಿ ಮಕ್ಕುತ್ತಿರುವ ಕಾಂಗ್ರೆಸ್ ಹುಳುಗಳು ಯಾರು..? ‌ ರಣಬೇಟೆ ನ್ಯೂಸ್ ಕೊಪ್ಪಳ.ಆ.20: ಬಡವರ ಪಾಲಿನ ಅಕ್ಕಿಯನ್ನು ಉಳ್ಳವರು ದೋಚಿಕೊಂಡು ಕೋಟಿ, ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ. ಸಾಲದೆಂಬಂತೆ ಇಲ್ಲಿ ದುಡಿದ ಹಡಬಿ ಹಣದಿಂದಲೇ ಜನಪ್ರತಿನಿಧಿಗಳ ಸಾಮೀಪ್ಯ ಸಾಧಿಸಿ ಸರ್ಕಾರಿ ಅಧಿಕಾರಿಗಳನ್ನು ತಮ್ಮ ನಿಯಂತ್ರಣ ದಲ್ಲಿಟ್ಟುಕೊಂಡು ಸರ್ವಾಧಿಕಾರಿಗಳಂತೆ ಮರೆಯುತ್ತಿದ್ದಾರೆ.ಪಡಿತರ ಅಕ್ಕಿ ಅಕ್ರಮ ದಂಧೆಯ ಜಾಲ ಅದೆಷ್ಟರ ಮಟ್ಟಿಗೆ ಬಲವಾಗಿ ಬೇರೂರಿದೆ ಎಂದರೆ, ಆಹಾರ ಇಲಾಖೆಯ ಅಧಿಕಾರಿಗಳು ಇವರ ತಂಟೆಗೆ ಹೋಗಲು ಹೆದರುತ್ತಾರೆ. ತಮಗೆ ಸಹಕಾರ ನೀಡುವ

ಪಡಿತರ ಲೋಕದ ಪಾಪಿಗಳ ಕಥೆ: ೦೧ Read More »

ಸಂಚಾರಿ ಪೊಲೀಸ್ ಠಾಣೆಯಲ್ಲೊಬ್ಬ ನಡೆದಾಡುವ ರಕ್ತ ಭಂಡಾರ

12 ಬಾರಿ ರಕ್ತದಾನ ಮಾಡಿ ಪ್ರಾಣ ಕಾಪಾಡಿದ ಪೊಲೀಸ್ ಪೇದೆ ಅಮರೇಶ ಗಂಗಾವತಿ.ಆ.19: ರಕ್ತದಾನ ಮಹಾದಾನ, ಅನಾರೋಗ್ಯ ಹಾಗೂ ಅಪಘಾತದಂತ ತುರ್ತು ಸಂದರ್ಭದಲ್ಲಿ ಒಂದೊಂದು ಹನಿ ರಕ್ತವೂ ಪ್ರಾಣ ರಕ್ಷಕವಾಗಬಲ್ಲದು. ಆದ್ದರಿಂದ ಪ್ರತಿಯೊಬ್ಬರೂ ತಪ್ಪದೇ ರಕ್ತದಾನ ಮಾಡುವಂತೆ ಪುಂಖಾನು ಪುಂಖವಾಗಿ ಭಾಷಣ ಮಾಡುವವರು ತಾವು ರಕ್ತದಾನ ಮಾಡುವ ಸಂದರ್ಭ ಬಂದರೆ ನೂರಾರು ನೆಪ ಹೇಳಿ ಜಾರಿಕೊಳ್ಳುತ್ತಾರೆ. ಆದರೆ ನಗರದ ಸಂಚಾರಿ ಪೊಲೀಸ್ ಠಾಣೆಯ ಪೇದೆಯೊಬ್ಬರು ರಕ್ತದಾನ ಮಾಡುವ ಯಾವುದೇ ಸಂದರ್ಭಗಳಲ್ಲಿ ನೆಪ ಹೇಳದೆ ಸೇವೆಯೇ ನಮ್ಮ ಪರಮೋಚ್ಚ

ಸಂಚಾರಿ ಪೊಲೀಸ್ ಠಾಣೆಯಲ್ಲೊಬ್ಬ ನಡೆದಾಡುವ ರಕ್ತ ಭಂಡಾರ Read More »

error: Content is protected !!
Scroll to Top